ಮೇಲ್ಮನೆಯ 25 ಸ್ಥಾನಕ್ಕೆ ಡಿ.18 ರಂದು ಚುನಾವಣೆ

ಮೇಲ್ಮನೆಯ ಹಾಲಿ ಪ್ರತಿಪಕ್ಷ ನಾಯಕ ವಿ.ಎಸ್. ಉಗ್ರಪ್ಪ , ಎಸ್.ಎಂ.ಶಂಕರ್ ಸೇರಿದಂತೆ 25 ಸದಸ್ಯರ ಸದಸ್ಯತ್ವದ ಅವಧಿ ಮುಂದಿನ ಜ.5ರಂದು ಕೊನೆಗೊಳ್ಳಲಿದೆ. ರಾಜ್ಯದ 20 ವಿವಿಧ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಒಟ್ಟು 25 ಸದಸ್ಯರು ಆಯ್ಕೆಯಾಗಬೇಕಿದ್ದು ಹಾಲಿ ಸದಸ್ಯರಲ್ಲಿ ಹೆಚ್ಚಿನವರು ಕಾಂಗ್ರೆಸ್ಗೆ ಸೇರಿದವರಾಗಿದ್ದಾರೆ.ಡಿ.16ಕ್ಕೆ ಮತದಾನ: ಪ್ರಕಟಿಸಲಾಗಿರುವ ವೇಳಾಪಟ್ಟಿಯಂತೆ ನ.24ರಂದು ಚುನಾವಣಾ ಅಧಿಸೂಚನೆ ಪ್ರಕಟವಾಗಲಿದ್ದು, ಅಂದೇ ನಾಮಪತ್ರ ಸಲ್ಲಿಕೆಗೆ ಚಾಲನೆ ದೊರೆಯಲಿದೆ. ನಾಮಪತ್ರ ಸಲ್ಲಿಸಲು ಡಿ.1 ಕೊನೆಯ ದಿನವಾಗಿರುತ್ತದೆ.
ಮತ ಎಣಿಕೆ ಡಿ.21ರಂದು ನಡೆದು ಅಂದೇ ಫಲಿತಾಂಶ ಹೊರಬೀಳಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ವಿಧಾನ ಪರಿಷತ್ ನಿವೃತ್ತರಾಗಲಿರುವ ಸದಸ್ಯರು ಸಿದ್ದು ನ್ಯಾಮಗೌಡ, ಎಸ್.ಆರ್.ಪಾಟೀಲ್, ಅಮಾತ್ಯಪ್ಪ ಕಂದಕೂರು, ಬಸವರಾಜ್ ಎಚ್.ಪಾಟೀಲ್, ಶಶಿಕಾಂತ ಅಕ್ಕಪ್ಪ ನಾಯಕ, ವೀರಕುಮಾರ್ ಪಾಟೀಲ್, ಶುಭಲತಾ ವಸಂತ್ಆಸ್ನೋಟಿಕರ್, ಶಿವರಾಜ ಸಜ್ಜನ್, ಎ.ಎಂ.ಹಿಂಡಸಗೇರಿ, ಎಚ್.ಆರ್.ಶ್ರೀನಾಥ್, ಕೆ.ಎಸ್. ಎಲ್.ಸ್ವಾಮಿ, ಬಿ.ಟಿ. ಚನ್ನಬಸಪ್ಪ (ಇತ್ತೀಚಿಗಷ್ಟೇ ನಿಧನರಾಗಿದ್ದರು), ಮೀರ್ ಅಜೀಜ್ ಅಹಮದ್, ಕೋಟಾ ಶ್ರೀನಿವಾಸ ಪೂಜಾರಿ, ಕೆ.ಪ್ರತಾಪ್ಚಂದ್ರ ಶೆಟ್ಟಿ , ಡಿ.ಎಂ.ಪುಟ್ಟೇಗೌಡ, ಎಸ್.ಎಂ.ಆನಂದ್, ವಿ.ಎಸ್. ಉಗ್ರಪ್ಪ , ಎಸ್.ಎಂ.ಶಂಕರ್, ಕೆ.ಬಿ.ಮುನಿವೆಂಕಟ ರೆಡ್ಡಿ , ಎಸ್.ರವಿ,ನಸೀರ್ ಅಹಮದ್, ಎಸ್.ಜಿ.ಮೇದಪ್ಪ, ಬಿ.ಚಿದಾನಂದ,ಎನ್.ಮಂಜುನಾಥ್.
ಚುನಾವಣಾ ವೇಳಾಪಟ್ಟಿ:
* ಅಧಿಸೂಚನೆ ಪ್ರಕಟಣೆ - ನ.24
* ನಾಮಪತ್ರ ಸಲ್ಲಿಸಲು ಕೊನೆ ದಿನ- ಡಿ.1
* ನಾಮಪತ್ರ ಪರಿಶೀಲನೆ - ಡಿ.2
* ಹಿಂತೆಗೆತಕ್ಕೆ ಕೊನೆ ದಿನ - ಡಿ.4
* ಮತದಾನ ದಿನ - ಡಿ.18
* ಸಮಯ:ಬೆ.8ರಿಂದ ಸಂ.4ರ ವರೆಗೆ
* ಮತ ಎಣಿಕೆ - ಡಿ.21
(ದಟ್ಸ್ ಕನ್ನಡವಾರ್ತೆ)
-
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Property: ಕಟ್ಟಡ ಮಾಲೀಕರಿಗೆ ಬಂಪರ್ ಆಫರ್: ಶೇ.15ರವರೆಗಿನ ನಿಯಮ ಉಲ್ಲಂಘನೆ ಸಕ್ರಮಕ್ಕೆ ಜಿಬಿಎ ಅವಕಾಶ! -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ












Click it and Unblock the Notifications