ತ್ಯಾಜ್ಯ ವಿಲೇವಾರಿಗೆ ಉಚಿತ ಸಹಾಯವಾಣಿ
ನಗರದ ಎಲ್ಲಾ ಪ್ರದೇಶಗಳಲ್ಲಿ ಪೂರ್ಣಪ್ರಮಾಣದ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 24/7 ತಾಸುಗಳ ಉಚಿತ ಸಹಾಯವಾಣಿಯೊಂದನ್ನು ಆರಂಭಿಸಿದ್ದು, ನಗರದ ಯಾವ ಭಾಗದಲ್ಲಾದರೂ ಸ್ವಚ್ಛತೆಗೆ ಅಡ್ಡಿಯುಂಟುಮಾಡುವ ತ್ಯಾಜ್ಯ ವಸ್ತುಗಳ ರಾಶಿ, ಅಥವಾ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯ ಕಂಡುಬಂದಲ್ಲಿ ದೂ.080-22660000/22221188ಗೆ ಕರೆ ಮಾಡಿ ದೂರು ದಾಖಲಿಸಿದರೆ ಕೆಲವೇ ತಾಸುಗಳಲ್ಲಿ ಸಮಸ್ಯೆ ಇತ್ಯರ್ಥಗೊಳ್ಳುತ್ತದೆ.ಎಂದು ಪಾಲಿಕೆ ಆಯುಕ್ತ ಭರತ್ಲಾಲ್ ಮೀನಾ ತಿಳಿಸಿದರು.
ಭವಿಷ್ಯದಲ್ಲಿ ಉದ್ಯಾನಗರಿ ಬೆಂಗಳೂರನ್ನು ಸ್ವಚ್ಛತೆಯ ಮಾದರಿ ನಗರವನ್ನಾಗಿ ಪರಿವರ್ತಿಸುವ ಸಲುವಾಗಿ ಈ ಸಂಖ್ಯೆಯನ್ನು ಕಾರ್ಯರೂಪಕ್ಕೆ ತರಲಾಗಿದೆ. ನಗರಾಭಿವೃದ್ಧಿಗೆ ರಾಜ್ಯ ಸರ್ಕಾರ 22 ಸಾವಿರ ಕೋಟಿ ರು ಮಂಜೂರು ಮಾಡಿದೆ. ಅದರ ಸದುಪಯೋಗ ಆಗುವ ಯೋಜನೆಗಳು ಸಿದ್ಧವಿದೆ ಎಂದರು. ನಗರದ ಯಾವುದೇ ಪ್ರದೇಶಗಳಲ್ಲಿ ತ್ಯಾಜ್ಯ ವಸ್ತುಗಳು ಕಂಡು ಬಂದರೆ ಈ ಎರಡೂ ಸಹಾಯವಾಣಿಗೆ ದೂರು ನೀಡಬಹುದು. ದಿನದ 24 ತಾಸುಗಳಲ್ಲಿ ಇವು ಕಾರ್ಯರೂಪದಲ್ಲಿರುತ್ತವೆ. ಸಕಾಲದಲ್ಲಿ ಇವು ದೊರೆಯದಿದ್ದ ಪಕ್ಷದಲ್ಲಿ ನನ್ನ ಮೊಬೈಲ್ ಸಂಖ್ಯೆಗೂ ಸಂದೇಶ ರವಾನಿಸುವ ವ್ಯವಸ್ಥೆಯನ್ನು ಶೀಘ್ರವೇ ಕಲ್ಪಿಸಲಾಗುವುದು ಎಂದರು. ರಾಜ್ಯ ಪತ್ರಿಕೋದ್ಯಮ ಹಾಗೂ ಸಂವಹನ ಶಿಕ್ಷಕರ ಒಕ್ಕೂಟದ ಅಧ್ಯಕ್ಷ ಡಾ.ಬಿ.ಕೆ.ರವಿ, ಕಾಲೇಜಿನ ಪದವಿ ವಿಭಾಗದ ಪ್ರಾಂಶುಪಾಲರಾದ ಕೆ.ಎಸ್.ಭಾರತಿ, ಮತ್ತು ಪದವಿಪೂರ್ವ ವಿಭಾಗದ ಪ್ರಾಂಶುಪಾಲರಾದ ಅನುರಾಧ ಉಪಸ್ಥಿತರಿದ್ದರು.
(ಏಜೆನ್ಸೀಸ್)