ಅಧಿಕಾರಿಗಳಿಗೆ ಬೆದರಿಕೆ ಒಡ್ಡಿದ ನ್ಯಾ. ದಿನಕರನ್ ?

PD Dinakaran
ಚೆನ್ನೈ, ಅ. 12 : ಸ್ವಗ್ರಾಮದಲ್ಲಿ ಸರಕಾರಿ ಭೂಮಿ ಹೊಂದಿರುವ ಆರೋಪ ಎದುರಿಸುತ್ತಿರುವ ಕರ್ನಾಟಕದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿಡಿ ದಿನಕರನ್ ತಮಿಳುನಾಡಿನ ಕಂದಾಯ ಅಧಿಕಾರಿ ಹಾಗೂ ತಹಸೀಲ್ದಾರ್ ರಿಗೆ ಬೆದರಿಕೆ ಒಡ್ಡಿ ಅಧಿಕೃತ ಕೆಲಸಗಳಿಗೆ ಅಡ್ಡಿಪಡಿಸಿದ ಘಟನೆ ನಡೆದಿದೆ ಎಂದು ವರದಿಯಾಗಿದೆ.

ತಮಿಳುನಾಡಿನ ತಿರುವಲ್ಲೂರ್ ಜಿಲ್ಲೆಯ ಕಾವೇರಿ ರಾಜಪುರಂ ಗ್ರಾಮದಲ್ಲಿ ಸರಕಾರಿ ಭೂಮಿ ಹೊಂದಿರುವ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳು ತನಿಖೆ ನಡೆಸಲು ಅಲ್ಲಿಗೆ ತೆರಳಿದಾಗಿ ದಿನಕರನ್ ಅವರು ತಮ್ಮ ಸ್ಥಳೀಯ ಪ್ರತಿನಿಧಿ ಮೂಲಕ ಬೆದರಿಕೆ ಹಾಕಿದ್ದಾರೆ. ನ್ಯಾಯಮೂರ್ತಿ ಅವರ ಖಾಸಗಿ ಜಮೀನಿಗೆ ಅವರ ಅನುಮತಿ ಇಲ್ಲದೆ ಪ್ರವೇಶಿಸಿದರೆ ಕ್ರಿಮಿನಲ್ ಕ್ರಮ ಕೈಗೊಳ್ಳಲಾಗುವುದಾಗಿ ಎಚ್ಚರಿಕೆ ನೀಡಲಾಗಿದೆ ಎಂದು ವರದಿಯಾಗಿದೆ.

ನ್ಯಾಯಮೂರ್ತಿಗಳ ವಿಶಾಲ ಪಟ್ಟಾ ಜಮೀನಿನ ನಡುವೆ ಸುಮಾರು 200 ಎಕರೆಗಳಷ್ಟು ಪರಂಬೋಕ್ (ಸರಕಾರಿ) ಭೂಮಿ ಇದೆ. ಈ ಜಾಗವನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡು ಬೇಲಿ ಹಾಕಲಾಗಿತ್ತು ಎಂಬ ಆರೋಪ ಅವರ ಮೇಲಿದೆ. ದಿನಕರನ್ ಅವರ ಜಮೀನಿನ ತನಿಖೆಗೆ ಕಂದಾಯ ಅಧಿಕಾರಿ ಮತ್ತು ತಹಸೀಲ್ದಾರ್ ರು ತೆರಳಿದ್ದರು.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+