239344ysrರಾಜ್ಯ ಬಿಜೆಪಿ ಬಂಡಾಯದ ಹಿಂದೆ ಆಂಧ್ರ ಸಿಎಂ?/news/2009/06/03/andhra-cm-hand-in-karnataka-bjps-revolt.htmlಬೆಂಗಳೂರು, ಜೂ.3: ಯಾವಾಗ ಮುಖ್ಯಮಂತ್ರಿ ಯಡಿಯೂರಪ್ಪ ಬಳ್ಳಾರಿಯಲ್ಲಿ ಗಡಿ ಒತ್ತುವರಿ ಮಾಡಿಕೊಂಡಿರುವುದನ್ನು ಜಂಟಿ ಸಮೀಕ್ಷೆ ನಡೆಸುವಂತೆ ಕೇಂದ್ರ ಸರಕಾರಕ್ಕೆ ಪತ್ರ ಬರೆದರೋ ಅವಾಗಲೇ ಅವರ ಕುರ್ಚಿಗೆ ಸಂಚಕಾರ ಬಂದಿತ್ತೆ? ಪಕ್ಷದ ಕೆಲವೊಂದು ನಾಯಕರ ಪ್ರಕಾರ ಹೌದು. ಕಳೆದ ಒಂದು ವರ್ಷದಿಂದ ಭಿನ್ನಮತದಲ್ಲೂ ಒಗ್ಗಟ್ಟಿದೆ ಎಂಬುದನ್ನು ತೋರಿಸಿಕೊಳ್ಳುತ್ತಲೇ ಬಂದ ಬಿಜೆಪಿಯಲ್ಲಿ ದಿಢೀರನೇ ಬೆಂಕಿ ಹತ್ತಿಕೊಳ್ಳಲು ಇದೇ ಪ್ರಬಲ 37070http://kannada.oneindia.com/img/2009/06/03-rajashekara-reddy1.jpg239344ysrಕಾಣೆಯಾದ ಮುಖ್ಯಮಂತ್ರಿಗೆ ಅವಿರತ ಶೋಧ/news/2009/09/02/missing-cm-ysr-still-not-traced-situation-scary.htmlಹೈದರಾಬಾದ್, ಸೆ. 2 : ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ ಎಸ್ ರಾಜಶೇಖರರೆಡ್ಡಿ ಹಾಗೂ ಐದು ಮಂದಿ ಇದ್ದ ಬೆಲ್ 430 ಹೆಲಿಕ್ಯಾಪ್ಟರ್ ಸುಳಿವು ಸಿಕ್ಕಿಲ್ಲ. ಆಂಧ್ರಪ್ರದೇಶದಾದ್ಯಂತ ತಲ್ಲಣ ಉಂಟಾಗಿದ್ದು, ರಾಜಕೀಯ ನೇತಾರರು ಸೇರಿ ಜನರು ತೀವ್ರ ತಳಮಳಗೊಂಡಿದ್ದಾರೆ. ರೆಡ್ಡಿ ಶೋಧಕ್ಕಾಗಿ 5 ಸಾವಿರ ಸೈನಿಕರು, 5 ಸಿಆರ್ ಪಿಎಫ್ ತಂಡಗಳನ್ನು ಕೇಂದ್ರ ಸರಕಾರ ಕಳುಹಿಸಿದೆ. ಮುಖ್ಯಮಂತ್ರಿಗಳು ಬದುಕಿಬರಲಿ 38975http://kannada.oneindia.com/img/2009/09/02-ysr2.jpg239344ysrಹೆಲಿಕಾಫ್ಟರ್ ಪತ್ತೆ; ವೈಎಸ್ಸಾರ್ ಸ್ಥಿತಿ ಇನ್ನು ನಿಗೂಢ/news/2009/09/03/missing-chopper-traced-ysr-fate-uncertain.htmlಕರ್ನೂಲು, ಸೆ.3: ಇಪ್ಪತ್ತ್ತನಾಲ್ಕು ಗಂಟೆಗಳ ನಂತರ ಆಂಧ್ರ ಸಿಎಂ ವೈ ಎಸ್ ರಾಜಶೇಖರ ರೆಡ್ಡಿ ಅವರ ಹೆಲಿಕಾಫ್ಟರನ್ನು ಪತ್ತೆ ಹಚ್ಚಲಾಗಿದೆ. ಸಂತಜೂಟೂರು-ವೆಲುಗೋಡು ನಡುವಿನ ಬೆಟ್ಟದ(ರುದ್ರಕೋಟ ಬೆಟ್ಟ) ಮೇಲೆ ಕಾಫ್ಟರನ್ನು ವೈಮಾನಿಕ ದಳ ಇಂದು ಪತ್ತೆ ಹಚ್ಚಿತು. ಆದರೆ ಮುಖ್ಯಮಂತ್ರಿಯವರ ಮತ್ತು ಇದರಲ್ಲಿ ಪ್ರಯಾಣಿಸುತ್ತಿದ್ದವರ ಸ್ಥಿತಿಗತಿ ಬಗ್ಗೆ ಇನ್ನು ನಿಗೂಢವಾಗಿದೆ. ಹೆಲಿಕಾಫ್ಟರ್ ಅಪಘಾತಕ್ಕೀಡಾಗಿದೆಯೇ 38976http://kannada.oneindia.com/img/2009/09/03-ysr2.jpg239344ysrಆಂಧ್ರಪ್ರದೇಶ ಸಿಎಂ ವೈಎಸ್ ಆರ್ ದುರ್ಮರಣ/news/2009/09/03/ap-cm-ysr-and-crew-crushed-to-death.htmlರುದ್ರಕೋಡೋರು (ಚಿತ್ತೂರು), ಸೆ. 3 : ಆಂಧ್ರಪ್ರದೇಶ ರಾಜಕೀಯ ಇತಿಹಾಸದಲ್ಲಿ ಕೋಟೆ ಕಟ್ಟಿ ಮೆರೆದಿದ್ದ ಧೀಮಂತ ರಾಜಕೀಯ ಮುತ್ಸದ್ಧಿ ಮುಖ್ಯಮಂತ್ರಿ ವೈಎಸ್ ರಾಜಶೇಖರರೆಡ್ಡಿ ದುರಂತ ಮರಣ ಹೊಂದಿದ್ದಾರೆ. ಕಳೆದ 24 ಗಂಟೆಗಳ ಶೋಧಕಾರ್ಯಕ್ಕೆ ಕೊನೆಗೂ ಫಲಸಿಕ್ಕಿದ್ದು, ಹೆಲಿಕ್ಯಾಪ್ಟರ್ ನಲ್ಲಿದ್ದ ಐದೂ ಮಂದಿ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ಚಿತ್ತೂರು ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ತೆರಳುತ್ತಿದ್ದ ಅವರ 38977http://kannada.oneindia.com/img/2009/09/03-ysr2.jpg239344ysrಪಾದಯಾತ್ರೆಗೆ ಹೆಸರಾಗಿದ್ದರು ವೈಎಸ್ ಆರ್/news/2009/09/03/ap-cm-ys-rajashekara-reddys-and-paadayaatra.htmlಬೆಂಗಳೂರು, ಸೆ.3: ಡಾಕ್ಟರ್ ವೈ ಎಸ್ ರಾಜಶೇಖ ರೆಡ್ಡಿ ಹಲವಾರು ಪಾದಯಾತ್ರೆಗಳನ್ನು ಕೈಗೊಂಡು ಆಂಧ್ರದಾದ್ಯಂತ ಹೆಸರಾಗಿದ್ದರು. ಆಂಧ್ರ ಪ್ರದೇಶದ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸುವುದಕ್ಕೂಮುನ್ನ ಅವರು ಪಾದಯಾತ್ರೆಗಳ ಮೂಲಕ ಇಡೀ ರಾಜ್ಯದಲ್ಲಿ ಸುತ್ತಿದ್ದಾರೆ. 2003ರ ಮಧ್ಯ ಬೇಸಿಗೆಯಲ್ಲಿ 1400 ಕಿ.ಮೀಗಳ ಪಾದಾಯಾತ್ರೆಯನ್ನು ಕೈಗೊಂಡಿದ್ದರು. ಪಾದಯಾತ್ರೆ ಮೂಲಕ ರಾಜ್ಯದ ಹಿಂದುಳಿದ ಪ್ರದೇಶಗಳಲ್ಲಿನ ಪರಿಸ್ಥಿತಿಯನ್ನು ಹತ್ತಿರದಿಂದ ಗಮನಿಸಲು ಈ 38978http://kannada.oneindia.com/img/2009/09/03-ysr3.jpg209646ttdತಿಮ್ಮಪ್ಪನ ಸಿಂಗಾರಕ್ಕೆ ಮಣಭಾರ ಬಂಗಾರ/news/2009/08/03/tirumala-tirupati-temple-amasses-obscene-wealth.htmlತಿರುಮಲ/ತಿರುಪತಿ, ಜುಲೈ. 3 : ಪ್ರಪ೦ಚದಲ್ಲಿರುವ ಎಲ್ಲಾ ಧಾರ್ಮಿಕ ದೇವಾಲಯಗಳ ಪೈಕಿ ನಮ್ಮ ಏಳುಬೆಟ್ಟದ ಒಡೆಯ ತಿರುಪತಿ ತಿಮ್ಮಪ್ಪನ ದೇವಾಲಯವೇ ಅತೀ ಸಿರಿವ೦ತ ದೇವಾಲಯವಾಗಿದೆ. ತಿರುಪತಿ ದೇವಾಲಯಕ್ಕೆ ಸೇರಿದ ಒಟ್ಟು ಚಿನ್ನಭಾರಣ 12 ಟನ್(12,000 ಕೆಜಿ) ಜತೆಗೆ ಏಳುಕುಂಡಲವಾಡನಿಗೆ 7 ವಜ್ರಖಚಿತ ಕಿರೀಟ.ಅಲ೦ಕಾರ ಪ್ರಿಯನಾಗಿರುವ ಶ್ರೀನಿವಾಸ ಪ್ರತಿದಿನ ಸುಮಾರು 70 ಕೆಜಿಯಷ್ಟು ಚಿನ್ನಾಭರಣಗಳೊ೦ದಿಗೆ 38395http://kannada.oneindia.com/img/2009/08/03-venkateswara.jpg209646ttdತಿರುಪತಿ ಅರ್ಚಕ ವೆಂಕಟರಮಣ ಇನ್ ಸಂಕಟ/news/2009/08/22/ttd-priest-mortgages-balaji-diamond-necklace.htmlತಿರುಪತಿ, ಆ. 22 : ಸಂಕಟ ಬಂದಾಗ ವೆಂಕಟರಮಣ ಅನ್ನುತ್ತ ತಿರುಪತಿ ತಿಮ್ಮಪ್ಪನ ಮೊರೆ ಹೋಗುತ್ತಾರೆ ಭಕ್ತಜನ. ಆದರೆ, ಸಂಕಟ ಬಂದಾಗ ವೆಂಕಟರಮಣ ಎಂಬ ಅರ್ಚಕರೇ ತಿರುಪತಿಯ ವೆಂಕಟರಮಣನಿಗೆ ಪಂಗನಾಮ ಹಾಕಿದ ಘಟನೆ ಜರುಗಿದೆ.ತೀವ್ರ ಹಣಕಾಸು ಬಿಕ್ಕಟ್ಟಿನಲ್ಲಿ ಸಿಲುಕಿದ್ದೇನೆಂದು ಹೇಳಿರುವ ಜಗತ್ತಿನ ಅತ್ಯಂತ ಶ್ರೀಮಂತ ಗುಡಿ ತಿರುಪತಿ ತಿಮ್ಮಪ್ಪ ದೇವಸ್ಥಾನದ ಪ್ರಧಾನ ಅರ್ಚಕ ದೇವಸ್ಥಾನದ ಆಭರಣವನ್ನೇ ಅಡವಿಟ್ಟ 38784http://kannada.oneindia.com/img/2009/08/22-venkataramana-dixit1.jpg209646ttdವೈಎಸ್ ಆರ್ :ಅಪರೂಪದ ಪಾದ್ರಿ ಪುರೋಹಿತ/news/2009/09/08/ysr-hidden-agenda-conversion-ttd-temples.htmlರಾಜಕೀಯದಲ್ಲಿ ಧರ್ಮವನ್ನು, ಧರ್ಮದಲ್ಲಿ ರಾಜಕೀಯವನ್ನು ಬೆರೆಸಿ ಬಡಜನರ ಉದ್ಧಾರಕ್ಕಾಗಿ ಹೊರಟ ವ್ಯಕ್ತಿ ವೈಎಸ್ ಆರ್. ಅವರೀಗ ಸತ್ತುಹೋಗಿರಬಹುದು, ಆದರೆ ಸತ್ಯಗಳು ಅವರೊಟ್ಟಿಗೆ ಸತ್ತಿಲ್ಲ, ಸಾಯಲೂ ಬಿಡಬಾರದು. *ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರುಮೂರ್ನಾಲ್ಕು ದಿನ ನಮ್ಮ ಮಾಧ್ಯಮಗಳು ವೈ.ಎಸ್.ರಾಜಶೇಖರ ರೆಡ್ಡಿಯವರ ಗುಣಗಾನ ಮಾಡಿ ಮಾಡಿ ಸುಸ್ತಾದವು; ನಾವು ನೋಡಿ ನೋಡಿ, ಕೇಳಿ ಕೇಳಿ, ಓದಿ ಓದಿ ಹೈರಾಣಾದೆವು! 39057http://kannada.oneindia.com/img/2009/09/08-ysr-close-up1.jpg209646ttdಅ.4 ಕ್ಕೆ ಕೋಲಾರದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ/news/2009/10/01/perform-srinivasa-kalyanotsavam-at-bangarapet.htmlಕೋಲಾರ, ಸೆ.30: ತಿರುಮಲದಲ್ಲಿ ಬ್ರಹ್ಮರಥೋತ್ಸವ ಮುಗಿದ ಬೆನ್ನಲ್ಲೇ ಚಿನ್ನದ ನಗರಿ ಕೋಲಾರದಲ್ಲಿ ಏಳುಮಲೆಯಪ್ಪನ ಕಲ್ಯಾಣ ಮಹೋತ್ಸವ ಮಾಡಲು ಬಂಗಾರಪೇಟೆಯ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಮುಂದಾಗಿದೆ. ಅ.4 ರಂದು ನಡೆಯಲಿರುವ ಕಲ್ಯಾಣೋತ್ಸವಕ್ಕೆ ತಿರುಮಲ ತಿರುಪತಿ ದೇವಸ್ಥಾನ ಮತ್ತು ಧರ್ಮ ಪ್ರಚಾರ ಸಮಿತಿ ಬೆಂಗಾವಲಾಗಿ ನಿಂತಿದೆ ಎಂದು ಸಮಿತಿಯ ಮಖ್ಯಸ್ಥ ಪಲ್ಲವಿ ಮಣಿ ತಿಳಿಸಿದ್ದಾರೆ.ನಗರದ ಎಪಿಎಂಸಿ ಯಾರ್ಡ್ ನ 39457http://kannada.oneindia.com/img/2009/10/01-srinivasa-kalyanotsav1.jpg209646ttdಬ್ರಹ್ಮೋತ್ಸವದಲ್ಲಿ ತಿರುಪತಿ ಆದಾಯ ಕಮ್ಮಿ !!/news/2009/10/01/tirumala-brahmotsavam-fetches-rs-12-dot-07-crores.htmlತಿರುಮಲ, ಅ. 1 : ಮಂಗಳವಾರ (ಸೆ 29) ಸಂಪನ್ನಗೊಂಡ ಒಂಬತ್ತು ದಿನಗಳ ವಾರ್ಷಿಕ ಬ್ರಹ್ಮೋತ್ಸವದ ವೇಳೆ ತಿರುಪತಿ ತಿರುಮಲ ದೇವಾಲಯ ಒಟ್ಟು 12.07 ಕೋಟಿ ರೂಪಾಯಿ ಆದಾಯ ಗಳಿಸಿದೆ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ದೇವಾಲಯದ ಆದಾಯದಲ್ಲಿ ಮೂರು ಕೋಟಿ ರೂಪಾಯಿ ಕಮ್ಮಿಯಾಗಿದೆ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣರಾವ್ ತಿಳಿಸಿದ್ದಾರೆ. 39463http://kannada.oneindia.com/img/2009/10/01-balaji3.jpg155586Karunakara reddyಬಳ್ಳಾರಿ ಗಣಿ ಮಾಫಿಯಾ ವಿರುದ್ಧ ಗೌಡರ ದೂರು/news/2009/03/07/deve-gowda-complaints-against-bellary-mining-mafia.htmlಬೆಂಗಳೂರು, ಮಾ.7: ರಾಜ್ಯದ ಗಡಿಯನ್ನು ಬಳ್ಳಾರಿ ಗಣಿ ಮಾಫಿಯಾ ಒತ್ತುವರಿ ಮಾಡಿಕೊಂಡಿದೆ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ರಾಜ್ಯಪಾಲರ ಮುಖೇನ ರಾಷ್ಟ್ರಪತಿಗಳಿಗೆ ದೂರು ಸಲ್ಲಿಸಿದ್ದಾರೆ. ಸಚಿವರಾದ ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ ಮತ್ತು ಶ್ರೀರಾಮುಲು ಅವರಿಂದ ಗಡಿ ಕಬಳಿಕೆ ನಡೆದಿದ್ದು, ರಾಜ್ಯದ ಏಕತೆ, ಸಮಗ್ರತೆಗೆ ಧಕ್ಕೆ ಉಂಟಾಗಿದೆ. ಇದನ್ನು ಸರಿಪಡಿಸಿ ಕೂಡಲೇ ಸೂಕ್ತ ಕ್ರಮ 35068http://kannada.oneindia.com/img/2009/03/07-devegowda3.jpg155586Karunakara reddyಬಳ್ಳಾರಿ ರೆಡ್ಡಿ ಸಹೋದರರ ಗಣಿ ಗುತ್ತಿಗೆ ಅಮಾನತು/news/2009/04/26/centre-suspends-mining-leases-of-reddy-brothers.htmlಬಳ್ಳಾರಿ, ಏ.26: ಸಚಿವರಾದ ಜಿ.ಜನಾರ್ದನರೆಡ್ಡಿ, ಜಿ.ಕರುಣಾಕರರೆಡ್ಡಿ ಮತ್ತು ಬಿ.ಶ್ರೀರಾಮುಲು ಒಡೆತನದ ಓಬಳಾಪುರಂ ಮೈನಿಂಗ್ ಕಂಪನಿ ಸೇರಿದಂತೆ ಐದು ಕಂಪನಿಗಳ ಗಣಿಗಾರಿಕೆಯನ್ನು ಕೂಡಲೇ ಸ್ಥಗಿತಗೊಳಿಸುವಂತೆ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಆಂಧ್ರಪ್ರದೇಶ ಸರ್ಕಾರಕ್ಕೆ ಆದೇಶಿಸಿದೆ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಡಿಎಫ್ ಓ ಅವರ ಸಹಕಾರದಿಂದ ಅರಣ್ಯ ಸಂರಕ್ಷಣಾ ಕಾಯ್ದೆ, ಗಣಿ ಕಂಪನಿಗಳ ಸುರಕ್ಷಾ ವಲಯ ನಿಯಮ ಮತ್ತು 36216http://kannada.oneindia.com/img/2009/04/26-janardhana-reddy2.jpg155586Karunakara reddyಗಣಿಗಾರಿಕೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ : ರೆಡ್ಡಿ/news/2009/04/27/mining-work-should-continue-says-janardhan-reddy.htmlಬಳ್ಳಾರಿ, ಏ. 27 : ಓಬಳಾಪುರಂ ಕಂಪನಿ ಸೇರಿದಂತೆ 5 ಕಂಪನಿಗಳ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳುವಂತೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಆಂಧ್ರ ಸರಕಾರಕ್ಕೆ ಸೂಚನೆ ನೀಡಿದೆ. ಆದರೆ, ಕಂಪನಿಯ ಗಣಿಗಾರಿಕೆಯನ್ನು ಸ್ಥಗಿತಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ. ಒಂದು ಕ್ಷಣವೂ ಮೈನಿಂಗ್ ನಿಲ್ಲುವುದಿಲ್ಲ ಎಂದು ಹೇಳುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ 36228http://kannada.oneindia.com/img/2009/04/27-janardhana-reddy2.jpg155586Karunakara reddyರಾಜ್ಯ ಬಿಜೆಪಿಯಲ್ಲಿ ಆಂತರಿಕ ಭಿನ್ನಮತ ಸ್ಫೋಟ/news/2009/06/02/all-is-not-well-between-bsy-and-bellary-trio.htmlಬಳ್ಳಾರಿ, ಜೂ.2: ರಾಜ್ಯ ಬಿಜೆಪಿ ವಲಯದಲ್ಲಿ ಹೊಗೆಯಾಡುತ್ತ್ತಿದ್ದ ಆಂತರಿಕ ಭಿನ್ನಮತ ಬಳ್ಳಾರಿ ರೆಡ್ಡಿ ಸಹೋದರರು ಅಸಮಾಧಾನ ವ್ಯಕ್ತಪಡಿಸುವ ಮೂಲಕ ಮಂಗಳವಾರ ಸ್ಫೋಟಗೊಂಡಿತು. ಬಳ್ಳಾರಿ ರೆಡ್ಡಿ ಸಹೋದರಾದ ಕರುಣಾಕರರೆಡ್ಡಿ ಮತ್ತು ಸೋಮಶೇಖರ ರೆಡ್ಡಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಕಾರ್ಯವೈಖರಿ ಬಗ್ಗೆ ತಮ್ಮ ಅಸಮಾಧಾನ ಇಂದು ವ್ಯಕ್ತಪಡಿಸಿದರು. ಬಳ್ಳಾರಿ ರೆಡ್ಡಿ ಸಹೋದರರು ತಮ್ಮ ಅಸಮಾಧಾವನ್ನ್ನು 37059http://kannada.oneindia.com/img/2009/06/02-somashekhar-reddy1.jpg155586Karunakara reddyರಾಜ್ಯ ಬಿಜೆಪಿ ಬಂಡಾಯದ ಹಿಂದೆ ಆಂಧ್ರ ಸಿಎಂ?/news/2009/06/03/andhra-cm-hand-in-karnataka-bjps-revolt.htmlಬೆಂಗಳೂರು, ಜೂ.3: ಯಾವಾಗ ಮುಖ್ಯಮಂತ್ರಿ ಯಡಿಯೂರಪ್ಪ ಬಳ್ಳಾರಿಯಲ್ಲಿ ಗಡಿ ಒತ್ತುವರಿ ಮಾಡಿಕೊಂಡಿರುವುದನ್ನು ಜಂಟಿ ಸಮೀಕ್ಷೆ ನಡೆಸುವಂತೆ ಕೇಂದ್ರ ಸರಕಾರಕ್ಕೆ ಪತ್ರ ಬರೆದರೋ ಅವಾಗಲೇ ಅವರ ಕುರ್ಚಿಗೆ ಸಂಚಕಾರ ಬಂದಿತ್ತೆ? ಪಕ್ಷದ ಕೆಲವೊಂದು ನಾಯಕರ ಪ್ರಕಾರ ಹೌದು. ಕಳೆದ ಒಂದು ವರ್ಷದಿಂದ ಭಿನ್ನಮತದಲ್ಲೂ ಒಗ್ಗಟ್ಟಿದೆ ಎಂಬುದನ್ನು ತೋರಿಸಿಕೊಳ್ಳುತ್ತಲೇ ಬಂದ ಬಿಜೆಪಿಯಲ್ಲಿ ದಿಢೀರನೇ ಬೆಂಕಿ ಹತ್ತಿಕೊಳ್ಳಲು ಇದೇ ಪ್ರಬಲ 37070http://kannada.oneindia.com/img/2009/06/03-rajashekara-reddy1.jpgnews"> ವೈಎಸ್ ಆರ್ :ಅಪರೂಪದ ಪಾದ್ರಿ ಪುರೋಹಿತ | YSR| Concersion|TTD Temples|Karunakara Reddy|AP Congress| ವೈಎಸ್ ಆರ್ :ಅಪರೂಪದ ಪಾದ್ರಿ ಪುರೋಹಿತ - Kannada Oneindia

ವೈಎಸ್ ಆರ್ :ಅಪರೂಪದ ಪಾದ್ರಿ ಪುರೋಹಿತ

ರಾಜಕೀಯದಲ್ಲಿ ಧರ್ಮವನ್ನು, ಧರ್ಮದಲ್ಲಿ ರಾಜಕೀಯವನ್ನು ಬೆರೆಸಿ ಬಡಜನರ ಉದ್ಧಾರಕ್ಕಾಗಿ ಹೊರಟ ವ್ಯಕ್ತಿ ವೈಎಸ್ ಆರ್. ಅವರೀಗ ಸತ್ತುಹೋಗಿರಬಹುದು, ಆದರೆ ಸತ್ಯಗಳು ಅವರೊಟ್ಟಿಗೆ ಸತ್ತಿಲ್ಲ, ಸಾಯಲೂ ಬಿಡಬಾರದು.

*ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರು

ಮೂರ್ನಾಲ್ಕು ದಿನ ನಮ್ಮ ಮಾಧ್ಯಮಗಳು ವೈ.ಎಸ್.ರಾಜಶೇಖರ ರೆಡ್ಡಿಯವರ ಗುಣಗಾನ ಮಾಡಿ ಮಾಡಿ ಸುಸ್ತಾದವು; ನಾವು ನೋಡಿ ನೋಡಿ, ಕೇಳಿ ಕೇಳಿ, ಓದಿ ಓದಿ ಹೈರಾಣಾದೆವು! ತನ್ನ ಮಾಲೀಕರಿಗೆ ತೊಂದರೆ ಕೊಟ್ಟ ರೆಡ್ಡಿಯವರನ್ನು ಅವರು ಬದುಕಿದ್ದಾಗ ತರಾವರಿಯಾಗಿ ಟೀಕಿಸುತ್ತಿದ್ದ ಟಿವಿ ವಾಹಿನಿಯೊಂದು ರೆಡ್ಡಿಯವರು ಸತ್ತಕೂಡಲೇ ಸುಗುಣಸಂಪನ್ನ ನಾಯಕನನ್ನಾಗಿ ಬಿಂಬಿಸತೊಡಗಿತು!

ಆದರೆ ಸತ್ಯವನ್ನೆಂದಿಗೂ ಮರೆಯಲು ಸಾಧ್ಯವಿಲ್ಲ. ಕ್ರಿಶ್ಚಿಯನ್ ಮತಾನುಯಾಯಿಯಾಗಿದ್ದ ರೆಡ್ಡಿಯವರು ಕ್ರಿಶ್ಚಿಯನ್ ಧರ್ಮದ ಪ್ರಚಾರ ಮತ್ತು ಆ ಧರ್ಮಕ್ಕೆ ಹಿಂದೂಗಳ ಮತಾಂತರ ಈ ಕಾರ್ಯಗಳಿಗೆ ಕುಮ್ಮಕ್ಕು ಕೊಡುತ್ತಿದ್ದುದು ಯಾರೂ ಅಲ್ಲಗಳೆಯಲಾಗದ ಸತ್ಯ. ಅನಿಲ್ ಕುಮಾರ್ ಎಂಬ ಬ್ರಾಹ್ಮಣ ಯುವಕ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡು ರೆಡ್ಡಿಯವರ ಮಗಳು ಶರ್ಮಿಳಾರನ್ನು ಮದುವೆಯಾದದ್ದು ಮತ್ತು ಪಾದ್ರಿಯಾಗಿ ಆತ ಧರ್ಮಪ್ರಚಾರ ಮಾಡುತ್ತಿದ್ದಾಗ ಮುಖ್ಯಮಂತ್ರಿ ರೆಡ್ಡಿಯವರ ಸರ್ಕಾರ ಆತನ ಬೆನ್ನಿಗಿದ್ದದ್ದು ಇವೂ ಜನರ ಅರಿವಿಗೆ ಬಂದಿರುವ ಸತ್ಯ. ತಿರುಪತಿಯ "ಮತಾಂತರ ಘೊಟಾಲೆ"ನಿಮಗೆ ಗೊತ್ತಿಲ್ಲದಿದ್ದರೆ ಅದು ನಮ್ಮ ತಪ್ಪಲ್ಲ.

ಇಷ್ಟಾಗಿಯೂ, ತಮ್ಮ ನಾಯಕ ಕ್ರಿಶ್ಚಿಯನ್ ಮತಾನುಯಾಯಿ ಎಂಬುದನ್ನು ರೆಡ್ಡಿ ಬಂಟರು ಮತ್ತು ಅಭಿಮಾನಿಗಳು ಕೆಲವರು ಒಪ್ಪುತ್ತಿರಲಿಲ್ಲ. "ಯೆಡುಗೂರಿ ಸ್ಯಾಮುಯೆಲ್ ರಾಜಶೇಖರ ರೆಡ್ಡಿ" ಎಂಬ ಪ್ರಚಲಿತ ನಾಮದ ಬದಲು "ಯೆಡುಗೂರಿ ಸಂದಿಂಟಿ ರಾಜಶೇಖರ ರೆಡ್ಡಿ" ಎಂಬ ಪೂರ್ವನಾಮವನ್ನೇ ಆ ಬಂಟರು ಮತ್ತು ಅಭಿಮಾನಿಗಳು ಸಮರ್ಥಿಸುತ್ತಿದ್ದರು. ರೆಡ್ಡಿಗಾರು ಕೂಡ ನಡೆ-ನುಡಿ-ಉಡುಗೆ-ತೊಡುಗೆಗಳಲ್ಲಿ ಅತಿ ಜಾಣ್ಮೆಯಿಂದ ವರ್ತಿಸುತ್ತಿದ್ದರು! "ರೆಡ್ಡಿ" ಎಂಬ ಉಪನಾಮವನ್ನು ಉಳಿಸಿಕೊಳ್ಳುವ ಮೂಲಕ ಹಿಂದೂಗಳ ಕೃಪೆಯಲ್ಲಿಯೂ ಚ್ಯುತಿಯಾಗದಂತೆ ನೋಡಿಕೊಂಡರು. ಈ ರೀತಿ ಅದೆಷ್ಟೋ ಮುಗ್ಧ ಹಿಂದೂಗಳಿಗೆ ಮಕ್ಮಲ್ ಟೋಪಿ ಇಟ್ಟರು!

ರಾಜಶೇಖರ ರೆಡ್ಡಿಯವರ ಧರ್ಮಾಚರಣೆಯ ನಿಜಸಂಗತಿಯೀಗ ಅವರ ಸಾವಿನಲ್ಲಿ ದೃಢೀಕೃತವಾಗಿದೆ. ಕ್ರಿಶ್ಚಿಯನ್ ಧರ್ಮದನುಸಾರ ಅವರ ಅಂತ್ಯಕ್ರಿಯೆ ನೆರವೇರಿದೆ. ಅವರ ತಂದೆ ರಾಜಾರೆಡ್ಡಿಯವರು ಬ್ರಿಟಿಷ್ ಆಡಳಿತದ ಕಾಲದಲ್ಲಿ ಬ್ರಿಟಿಷ್ ಸೈನ್ಯದಲ್ಲಿದ್ದವರಾಗಿದ್ದು ಆಗಲೇ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದರೆಂಬುದು ನಿರಾಕರಿಸಲಾಗದ ಸತ್ಯವಾಗಿ ಹೊರಹೊಮ್ಮಿದೆ.

ಇಂಥ ರಾಜಶೇಖರ ರೆಡ್ಡಿಗಾರು ತಾನು ಮೊದಲ ಸಲ ಮುಖ್ಯಮಂತ್ರಿಯಾಗಿದ್ದಾಗ "ತಿರುಪತಿ ತಿರುಮಲ ದೇವಸ್ಥಾನಮ್ಸ್" ("ಟಿಟಿಡಿ") ಬೋರ್ಡ್‌ನ ಅಧ್ಯಕ್ಷನನ್ನಾಗಿ ನೇಮಿಸಿದ್ದು ಯಾರನ್ನು ಗೊತ್ತೆ? ತನ್ನ ಮಲತಮ್ಮ ಕರುಣಾಕರ ರೆಡ್ಡಿಯನ್ನು! ಹಿಂದೂ ದೇವಾಲಯದ ಮಂಡಳಿಗೆ ಕ್ರಿಶ್ಚಿಯನ್ ಅಧ್ಯಕ್ಷ! ತಿರುಪತಿಯಲ್ಲಿ ಮತಾಂತರ ಕಾರ್ಯದ ಮುನ್ನಡೆಗೆ ಇನ್ನೇನು ಬೇಕು?

ಈ ಕರುಣಾಕರ ರೆಡ್ಡಿ ಓರ್ವ ಪಕ್ಕಾ ಕಾಂಗ್ರೆಸ್ ಪುಢಾರಿ! ಮೊದಲು ಈತ "ವೈ‌ಎಸ್‌ಆರ್ ಯುವಸೇನಾ"ದ ಅಧ್ಯಕ್ಷನಾಗಿದ್ದ! (ಟಿಟಿಡಿಯ ಅಧ್ಯಕ್ಷಸ್ಥಾನ ಅಲಂಕರಿಸಿದ್ದವನಾದ್ದರಿಂದ ಈತನನ್ನು ಇನ್ನು ಬಹುವಚನದಲ್ಲಿ ಸಂಬೋಧಿಸೋಣ!) ಟಿಟಿಡಿಯಂಥ ಬೃಹತ್ ಧಾರ್ಮಿಕ ಮಂಡಳಿಯ ಅಧ್ಯಕ್ಷರಾಗಿದ್ದುಕೊಂಡು ಕರುಣಾಕರ ರೆಡ್ಡಿಯವರು ತನ್ನೊಡೆಯ ರಾಜಶೇಖರ ರೆಡ್ಡಿಯನ್ನು ರಾಜಕೀಯವಾಗಿ ಸಮರ್ಥಿಸುವ ಮತ್ತು ಹಾಡಿ ಹೊಗಳುವ ಕೆಲಸವನ್ನು ಅವ್ಯಾಹತವಾಗಿ ಮಾಡಿಕೊಂಡು ನಡೆದರು! ರಾಜಶೇಖರ ರೆಡ್ಡಿಯನ್ನು ಸ್ತುತಿಸುವುದರಲ್ಲಿ ಕಾಲಂಶದಷ್ಟೂ ಈ ಕರುಣಾಕರ ರೆಡ್ಡಿ ತಿರುಪತಿ ತಿಮ್ಮಪ್ಪನನ್ನು ಸ್ತುತಿಸಲಿಲ್ಲ!

ವಿಶ್ವದಲ್ಲೇ ಅತಿ ಹೆಚ್ಚು ಆದಾಯವಿರುವ ಮತ್ತು ಅತಿ ಹೆಚ್ಚು ಭಕ್ತರು ಸಂದರ್ಶಿಸುವ ವೆಂಕಟೇಶ್ವರ ದೇವಾಲಯವೂ ಸೇರಿದಂತೆ ಹನ್ನೆರಡು ದೇವಾಲಯಗಳ ಮತ್ತು ಅವುಗಳ ಉಪ ದೇಗುಲಗಳ ಆಡಳಿತಾಧಿಕಾರ ಹೊಂದಿರುವ ಟಿಟಿಡಿ ಬೋರ್ಡ್‌ನ ಮುಖ್ಯಸ್ಥರಾಗಿದ್ದ ಕರುಣಾಕರ ರೆಡ್ಡಿಗಾರು ರಾಜಕಾರಣರಹಿತರೂ ಧರ್ಮಶ್ರದ್ಧಾಳುವೂ ಆಗಿರುವ ಬದಲು ಓರ್ವ ಕಾಂಗ್ರೆಸ್ ಪುಢಾರಿಯಾಗಿಯೇ ಮುಂದುವರಿದರಲ್ಲದೆ ಯಾವ ಅಳುಕೂ ಇಲ್ಲದೆ ರಾಜಶೇಖರ ರೆಡ್ಡಿಯವರ ಭಟ್ಟಂಗಿಯ ಕೆಲಸ ನಿರ್ವಹಿಸಿದರು! ದೇವರ ವಿಷಯದಲ್ಲಾಗಲೀ ಧರ್ಮದ ವಿಷಯದಲ್ಲಾಗಲೀ ಕರುಣಾಕರ ರೆಡ್ಡಿಯವರಿಂದ ಜನತೆಯು ನ್ಯಾಯಯುತ ನಡೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲದ ರೀತಿಯಲ್ಲಿ ಅವರ ಚಟುವಟಿಕೆಗಳು ರಾಜಕಾರಣಮಯವಾಗಿದ್ದವು.

ಮತಾಂತರದ ಬಗ್ಗೆ ಎದ್ದಿದ್ದ ಜನಾಕ್ಷೇಪವನ್ನು ಹತ್ತಿಕ್ಕಿ, ಜನರನ್ನು ದಿಕ್ಕು ತಪ್ಪಿಸಿ (ಅಂಥ ಅನೇಕ ತೋರಿಕೆಯ ಕೆಲಸಗಳು ಟಿಟಿಡಿಯ ವತಿಯಿಂದ ಆಗ ನಡೆದವು), ಒಳಗಿಂದೊಳಗೇ ಮತಾಂತರಕ್ಕೆ ಪ್ರೋತ್ಸಾಹ ಕೊಟ್ಟುಕೊಂಡಿರುವುದೇ ಉಭಯ ರೆಡ್ಡಿಗಳ ಉದ್ದೇಶವೆಂದು ಜನರಿಗೆ ಅನುಮಾನ ಬರುವಂತಾಯಿತು. ಇಷ್ಟಕ್ಕೂ, ಟಿಟಿಡಿಯ ಅಧ್ಯಕ್ಷ ಪದವಿಯನ್ನಲಂಕರಿಸಲು ಕ್ರಿಶ್ಚಿಯನ್ ವೈ‌ಎಸ್‌ಆರ್ ಮಲತಮ್ಮ ಹಾಗೂ "ವೈ‌ಎಸ್‌ಆರ್ (ಭಟ್ಟಂಗಿಗಳ) ಯುವಸೇನಾ"ದ ಅಧ್ಯಕ್ಷನ ಹೊರತು ಬೇರಾವ ಯೋಗ್ಯ ವ್ಯಕ್ತಿಯೂ ಇಡೀ ಆಂಧ್ರಪ್ರದೇಶದಲ್ಲಿ, ಇಡೀ ಭಾರತ ದೇಶದಲ್ಲಿ ಇರಲಿಲ್ಲವೆ?

ಪ್ರತ್ಯಕ್ಷ ಕಂಡದ್ದು

ಟಿಟಿಡಿಯ ಅಧ್ಯಕ್ಷರಾದಮೇಲೂ ಕರುಣಾಕರ ರೆಡ್ಡಿಗಾರು ವೈ‌ಎಸ್‌ಆರ್‌ನ ಬಂಟನ ಕಾರ್ಯವನ್ನು (ಇನ್ನೂ ಹೆಚ್ಚಿನ ಜೋಷ್‌ನಿಂದ)ಮುಂದುವರಿಸಿಕೊಂಡು ಹೋಗುತ್ತಿದ್ದ ಬಗ್ಗೆ ನಾನು ಸಾಕಷ್ಟು ಕೇಳಿದ್ದೆ,ಓದಿದ್ದೆ ಮತ್ತು ಅವರಿವರಿಂದ ಸಾಕಷ್ಟು ಮಾಹಿತಿ ಸಂಗ್ರಹಿಸಿದ್ದೆ. ಆದರೆ ಸ್ವಯಂ ಪ್ರತ್ಯಕ್ಷ ಕಾಣದೆ ಈ ಬಗ್ಗೆ ಬಾಯ್ತೆರೆಯಬಾರದೆಂದು ನಿರ್ಧರಿಸಿ ಸುಮ್ಮನಿದ್ದೆ. ಪ್ರತ್ಯಕ್ಷ ಕಾಣುವ ಅವಕಾಶಕ್ಕಾಗಿ ಕಾಯುತ್ತಿದ್ದೆ. ಅಂಥದೊಂದು ಅವಕಾಶ 2008ರ ಜೂನ್ 12ರಂದು ನನಗೆ ದೊರೆತೇಬಿಟ್ಟಿತು. ಆ ದಿನ ಆಂಧ್ರಪ್ರದೇಶದ ಕುಪ್ಪಂನಲ್ಲಿ (ಅದು ಚಂದ್ರಬಾಬು ನಾಯ್ಡು ವಿಧಾನಸಭೆಗೆ ಆಯ್ಕೆಗೊಂಡ ಕ್ಷೇತ್ರ) ರಾಜಕೀಯ ಸಮಾರಂಭವೊಂದಕ್ಕೆ ಟಿಟಿಡಿ ರೆಡ್ಡಿಗಾರು ಆಗಮಿಸುವರೆಂದು ನನಗೆ ಸುದ್ದಿ ಬಂದು ಮುಟ್ಟಿತಲ್ಲದೆ ಆ ಭಾವಿ ಸಮಾರಂಭದ ವಿವರಗಳೂ ದೊರೆತವು. ನಾನು ಕುಪ್ಪಂಗೆ ಧಾವಿಸಿದೆ.

ಕುಪ್ಪಂ ಅನ್ನು ಒಳಗೊಂಡಿರುವ ಚಿತ್ತೂರು ಜಿಲ್ಲೆಯ ಯುವ ಕಾಂಗ್ರೆಸ್‌ನ ಅಧ್ಯಕ್ಷನ "ಪಾದಯಾತ್ರೆ"ಯ ಮುಕ್ತಾಯ ಸಮಾರಂಭ ಅದು. ಊರಿಡೀ ಕಾಂಗ್ರೆಸ್ ಬ್ಯಾನರ್‌ಗಳು, ಬಂಟಿಂಗ್‌ಗಳು, ಧ್ವಜಗಳು ಮತ್ತು ಅಸಂಖ್ಯಾತ ಫ್ಲೆಕ್ಸ್‌ಗಳು. ಎಲ್ಲವೂ ಸೋನಿಯಾಮಯ, ರಾಹುಲ್‌ಮಯ. ಜೊತೆಗೆ, ಅಂದಿನ ಸಮಾರಂಭದ ಮುಖ್ಯ ಅತಿಥಿಯಾದ ಟಿಟಿಡಿ ಚೇರ್‌ಮನ್ನರ ಭಾವಚಿತ್ರ ಮತ್ತು ಹೆಸರು. ಪ್ರತಿಯೊಂದು ಫ್ಲೆಕ್ಸ್ ಮತ್ತು ಬ್ಯಾನರ್‌ನಲ್ಲೂ ಟಿಟಿಡಿ ಚೇರ್‌ಮನ್ ಕರುಣಾಕರ ರೆಡ್ಡಿಗೆ ಭರ್ಜರಿ ಸ್ವಾಗತ ಬರಹ. ಆಕರ್ಷಕ ಕರಪತ್ರಗಳಲ್ಲಿ ಕಾಂಗ್ರೆಸ್‌ನ "ಸಾಧನೆ"ಗಳ ಗುಣಗಾನ.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನೂ ಸೇರಿದಂತೆ ಒಂದು ಹಿಂಡು ಕಾಂಗ್ರೆಸ್ ಪುಢಾರಿಗಳ ಮಧ್ಯೆ ರಾರಾಜಿಸುತ್ತಿದ್ದ ಟಿಟಿಡಿ ಅಧ್ಯಕ್ಷರನ್ನು ಸಮಾರಂಭದ ಸ್ಥಳಕ್ಕೆ ಊರ ಹೊರಗಿನಿಂದಲೇ ಮೆರವಣಿಗೆಯಲ್ಲಿ ಕರೆತರಲಾಯಿತು. ವಾದ್ಯ ಮತ್ತು ಪಟಾಕಿಗಳ ಸಂಭ್ರಮವೋ ಸಂಭ್ರಮ. ಮೆರವಣಿಗೆಯಿಂದಾಗಿ ರಸ್ತೆಗಳ ವಾಹನ ಸಂಚಾರದ ಮಾರ್ಗಗಳಲ್ಲಿ ಬದಲಾವಣೆ ಮಾಡಲಾಗಿತ್ತು. ಊರೊಳಗೆ ಬಸ್ ನಿಲ್ದಾಣದೆದುರು ಜನನಿಬಿಡ ರಸ್ತೆಯನ್ನು ಸಂಪೂರ್ಣ ಆಕ್ರಮಿಸಿ ನಿರ್ಮಿಸಿದ್ದ ಭವ್ಯ ವೇದಿಕೆಯಲ್ಲಿ ಸಮಾರಂಭ. ವೇದಿಕೆಯ ಮೇಲೂ ಕೆಳಗೂ ಕಾಂಗ್ರೆಸ್ ಪುಢಾರಿಗಳದೇ ಸಾಮ್ರಾಜ್ಯ.

ಸಭೆಯ ಮುಖ್ಯ ಕಾರ್ಯಕ್ರಮವೇ ಮುಖ್ಯ ಅತಿಥಿಯ ಭಾಷಣ. ಮುಖ್ಯ ಅತಿಥಿ ಟಿಟಿಡಿ ಅಧ್ಯಕ್ಷರು ಭಾಷಣ ಆರಂಭಿಸಿದರು. ರಾಜಶೇಖರ ರೆಡ್ಡಿಯನ್ನೂ ಕಾಂಗ್ರೆಸ್ಸನ್ನೂ ಹೊಗಳಲು ಶುರುವಿಟ್ಟುಕೊಂಡರು! ಇನ್ನಿಲ್ಲದಂತೆ ಹೊಗಳತೊಡಗಿದರು. ಜೊತೆಗೆ ಚಂದ್ರಬಾಬು ನಾಯ್ಡುವನ್ನು ತೆಗಳಲಾರಂಭಿಸಿದರು! ಇನ್ನಿಲ್ಲದಂತೆ ತೆಗಳತೊಡಗಿದರು. "ಚುನಾವಣೆಗಳಲ್ಲಿ ಕಾಂಗ್ರೆಸ್ಸನ್ನು ಗೆಲ್ಲಿಸಿರಿ, ಚಂದ್ರಬಾಬು ನಾಯ್ಡುವನ್ನು ಸೋಲಿಸಿರಿ, ಸದಾಕಾಲವೂ ಕಾಂಗ್ರೆಸ್ಸನ್ನೇ ಅಧಿಕಾರಕ್ಕೆ ತರುತ್ತಿರಿ, ರಾಜಶೇಖರ ರೆಡ್ಡಿಯನ್ನೇ ನಾಯಕನೆಂದು ಸ್ವೀಕರಿಸುತ್ತಿರಿ", ಎಂದು ತಿರುಪತಿ ತಿರುಮಲ ದೇವಸ್ಥಾನ ಬೋರ್ಡ್‌ನ ಅಧ್ಯಕ್ಷ ಮಹಾಶಯರು ಪುನಃ ಪುನಃ ಹೇಳತೊಡಗಿದರು! ಇದಿಷ್ಟು ಬಿಟ್ಟು ಭಾಷಣದಲ್ಲಿ ಅವರು ಬೇರೇನನ್ನೂ ಹೇಳಲಿಲ್ಲ! ದೇವರ ಬಗ್ಗೆಯೂ ಹೇಳಲಿಲ್ಲ, ಧರ್ಮದ ಬಗ್ಗೆಯೂ ಹೇಳಲಿಲ್ಲ, ಶ್ರೀನಿವಾಸನ ಬಗ್ಗೆಯೂ ಇಲ್ಲ, ಪದ್ಮಾವತಿಯ ಬಗ್ಗೆಯೂ ಇಲ್ಲ!

ಒಂದು ಹಂತದಲ್ಲಿ ಕರುಣಾಕರ ರೆಡ್ಡಿಯ ಈ ನಡೆಯಿಂದ ಬೇಸತ್ತ ಸಭಾಸದನೋರ್ವ ಆಕ್ಷೇಪವೆತ್ತಿದ. ಅವನಿಗೆ "ಧರ್ಮದರ್ಶಿ" ರೆಡ್ಡಿಗಾರು ಕೆಂಗಣ್ಣು ಬಿಟ್ಟು ಗದರಿದರು! ಕೂಡಲೇ ಪೋಲೀಸರು ಅವನನ್ನು ಹೊರಕ್ಕೆ ಎಳೆದೊಯ್ದರು! ಭಾಷಣಾನಂತರ ಟಿಟಿಡಿ ಪ್ರಭುವಿನಿಂದ ಕಾಂಗ್ರೆಸ್ ಕಾರ್ಯಕರ್ತರಿಗೆ ಶಾಲು ಹೊದೆಸಿ ಸನ್ಮಾನ! ಕೊನೆಯಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ. ಇದು ನಾನು ಪ್ರತ್ಯಕ್ಷ ಕಂಡ ಸಮಾರಂಭ.

ನಂತರದ ದಿನಗಳಲ್ಲಿ ಕರುಣಾಕರ ರೆಡ್ಡಿಯವರನ್ನು ಟಿಟಿಡಿ ಅಧ್ಯಕ್ಷ ಪದವಿಯಿಂದ ಕೆಳಗಿಳಿಸಬೇಕಾಗಿ ಬಂತು. ಕೆಳಗಿಳಿಸಲಾಯಿತು. ಇದೀಗ ರಾಜಶೇಖರ ರೆಡ್ಡಿಯವರು ಈ ಲೋಕದಿಂದಲೇ ನಿರ್ಗಮಿಸಿದ್ದಾರೆ. ಆದರೆ ಇವರ ಸುತ್ತಲಿನ ಸತ್ಯಗಳು ಮಾತ್ರ ಪ್ರಜ್ಞಾವಂತರನ್ನು ಕಾಡುತ್ತಿರುತ್ತವೆ. ಊಳಿಗಮಾನ್ಯ ಪದ್ಧತಿಯ ಲಾಭ ಪಡೆದು, ಹಿಂಸೆ-ಬೆದರಿಕೆಗಳ ಅಸ್ತ್ರ ಬಳಸಿ ಮೇಲೆಬಂದು, ನಂತರ ರಾಜಶೇಖರ ರೆಡ್ಡಿಯವರು ಬಡವರ ಬಂಧು ಆದರಾದರೂ ಅದಕ್ಕಾಗಿ ಸರ್ಕಾರದ ಬೊಕ್ಕಸವನ್ನು ಬಹುತೇಕ ಖಾಲಿಮಾಡಿ ಹೋಗಿದ್ದಾರೆ! ಪುತ್ರನನ್ನು ರಾಜಕಾರಣಕ್ಕೆ ತಂದು, ಸಂಸದನನ್ನಾಗಿಸಿ, ಅನನುಭವಿಯಾದ ಆತನೀಗ ಮುಖ್ಯಮಂತ್ರಿಯ ಗಾದಿಮೇಲೆ ಕಣ್ಣುಹಾಕಲು ಪರೋಕ್ಷವಾಗಿ ಕಾರಣರಾಗಿದ್ದಾರೆ. ಮುಗ್ಧ ಬಡಜನರು ಪಾಪ, ತಮ್ಮ "ರಕ್ಷಕ" ಸತ್ತನೆಂದು ನೂರಾರರ ಸಂಖ್ಯೆಯಲ್ಲಿ ತಾವೂ ವೈ‌ಎಸ್‌ಆರ್ ಅವರನ್ನು ಹಿಂಬಾಲಿಸಿ ನಡೆದಿದ್ದಾರೆ!ರಾಜಶೇಖರ ರೆಡ್ಡಿಗಾರು ಬಳ್ಳಾರಿ ಗಣಿದಣಿಗಳ ಜೊತೆ "ಕೈ"ಜೋಡಿಸಿ, ಉಭಯರೂ ಒಟ್ಟಾಗಿ ಕರ್ನಾಟಕವನ್ನು ಕಿತ್ತುತಿಂದ ಧೂರ್ತಕಾರ್ಯವಂತೂ ಸಹಿಸಲಸಾಧ್ಯ. ಸತ್ಯವು ಮರೆಮಾಚಲ್ಪಟ್ಟು ಮತ್ತೇನೋ ವಿಜೃಂಭಿಸತೊಡಗಿದಾಗ ಅದನ್ನು ಗಮನಿಸುವ ಮನಸ್ಸಿಗೆ ಬೇಸರವಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+