ನನ್ನ ಆಟೋಗೆ ಹಸುರು ಬಣ್ಣ ಬಳಿಯಿರಿ

ಈ ಯೋಜನೆ ಪ್ರಾಯೋಗಿಕವಾಗಿ ಬೆಂಗಳೂರಿನಲ್ಲಿ ಜಾರಿಗೆ ಬರುತ್ತಿರುವುದರಿಂದ ಈಗಲೇ ಏನನ್ನೂ ಹೇಳುವಂತಿಲ್ಲ. ಯಾಕೆಂದರೆ, ಆಟೋ ಕವಚಕ್ಕೆ ಹೊಸ ಬಣ್ಣ ಬಳಿಯಬೇಕಾದರೆ ಕನಿಷ್ಠ 7 ಸಾವಿರ ರೂಪಾಯಿ ಬೇಕು. ಖಾಸಗಿ ಆಟೋಗೆ ಸರಕಾರದ ಹಣ ವೆಚ್ಚವಾಗುವ ಹಾಗಿಲ್ಲ. ಆಟೋ ಉತ್ಪಾದಿಸುವ ಕಂಪನಿಗಳು ಹಳೆಯ ವಾಹನಕ್ಕೆ ಬಣ್ಣ ಹಚ್ಚುವ ಉಸಾಬರಿ ವಹಿಸಿಕೊಳ್ಳುವುದಿಲ್ಲ. ಆಟೋ ಮಾಲಿಕನಿಗೆ ಪರಿಸರ ಪ್ರೇಮ ಉಂಟು, ಆದರೆ ವಾಹನ ನವೀಕರಿಸುವುದಕ್ಕೆ ಅಗತ್ಯವಾಗುವ 7 ಸಾವಿರ ರೂ ಕಕ್ಕಲು ಹಣ ಇಲ್ಲ, ಇದ್ದರೂ ಸಿದ್ಧನಿಲ್ಲ.
ಪರಿಸರ ಪ್ರೇಮಿ ಆಟೋ ಆಗಬೇಕಾದರೆ ಮುಖ್ಯ ಅರ್ಹತೆ ಫೋರ್ ಸ್ಟ್ರೋಕ್ ಇಂಜಿನ್ ಆಗಿರತಕ್ಕದ್ದು. ಬೆಂಗಳೂರಿನಲ್ಲಿ ಅಲೆಯುವ 80 ಸಾವಿರಕ್ಕೂ ಹೆಚ್ಚು ಆಟೋಗಳಲ್ಲಿ ಶೇ 25 ರಷ್ಟು ವಾಹನಗಳು ಮಾತ್ರ ಫೋರ್ ಸ್ಟ್ರೋಕ್ ಇಂಜಿನ್ ಹೊಂದಿವೆ. ಕೇವಲ ಬಣ್ಣಕ್ಕೆ ಮಾರುಹೋಗುವ ತವಕವಲ್ಲವಿದು. ಪರಿಸರ ಪ್ರೇಮಿ ಆಟೋ ಎಂದರೆ, ಚಾಲಕ ಸಭ್ಯನಾಗಬೇಕು, ಗಾಂಧಿ ಮೀಟರ್ ಕಿತ್ತುಹಾಕಿ ಡಿಜಿಟಲ್ ಮೀಟರ್ ಹಾಕಬೇಕು, ಸೀಮೆ ಎಣ್ಣೆ ಹಾಕಿ ಗಾಡಿ ಓಡಿಸಬಾರದು, ಗ್ಯಾಸ್ ಕಿಟ್ ಲಗತ್ತಾಗಿರಬೇಕು. ಎಷ್ಟೋ ಮಾಲಿಕರು ಮತ್ತು ಚಾಲಕರಿಗೆ ಈ ಕಟ್ಟಳೆಗಳು ಇಷ್ಟವಿಲ್ಲ. ಅಂಥವರು ಈಗಾಗಲೇ ಪರಿಸರ ಪ್ರೇಮಿ ಆಟೋ ಕಲ್ಪನೆಯನ್ನು ವಿರೋಧಿಸಲು ಸಿದ್ಧರಾಗಿದ್ದಾರೆ.
ಈ ಯೋಜನೆ ಜಾರಿಗೆ ಬರಲಿ ಎನ್ನುತ್ತಾರೆ ಹಳೆಗುಡ್ಡದಹಳ್ಳಿ ನಿವಾಸಿ ಕೃಷ್ಣಪ್ಪ. ಆಟೋ ಉಪಟಳದಿಂದ ಬೇಸತ್ತ ಇವರಿಗೆ ಸರಕಾರ ಕಡಿವಾಣ ಹಾಕಬೇಕು ಎಂಬ ನಿರೀಕ್ಷೆ ಇತ್ತಂತೆ. ಅಂತೂ ನಂಬಲರ್ಹ ಆಟೋ ಇದ್ದರೆ ಒಳ್ಳೆಯದು. ಇನ್ನುಮುಂದೆ ಹಸುರು ಬಣ್ಣದ ಆಟೋ ರಸ್ತೆಯಲ್ಲಿ ಸಿಕ್ಕರೆ ಅದನ್ನೇ ಹತ್ತುವುದಾಗಿ ಹೇಳುತ್ತಾರೆ. ಈ ಆಟೋಗಳು ಉತ್ಪಾದಿಸುವ ಒಟ್ಟು ವಿಷಗಾಳಿ ನೆನೆಸಿಕೊಂಡರೆ ಭಯವಾಗುತ್ತದೆ. ವಾತಾವರಣ ಕಲುಷಿತ ರಹಿತವಾಗುವುದಾದರೆ ಸಾಕು, ಆಟೋ ಬಣ್ಣ ನನಗೆ ಮುಖ್ಯವಲ್ಲ ಎಂದವರು ವಾಣಿವಿಲಾಸ ರಸ್ತೆಯಲ್ಲಿ ಆಟೋ ಹತ್ತಲು ಸಿದ್ಧವಾಗಿ ನಿಂತಿದ್ದ ಕಾಲೇಜು ವಿದ್ಯಾರ್ಥಿ ಪ್ರತಿಮಾ ಶೆಟ್ಟಿ.
ಬೆಂಗಳೂರಿನ ಆಟೋಗಳು ಹಳೆಯ ಮೀಟರ್ ತೆಗೆದು ಡಿಜಿಟಲ್ ಮೀಟರ್ ಅಳವಡಿಸಿಕೊಳ್ಳಬೇಕೆಂಬ ನಿಯಮವನ್ನು ಸಾರಿಗೆ ಇಲಾಖೆ ಪ್ರಕಟಿಸಿದೆ. ಆದರೆ, ಎಷ್ಟೋ ವಾಹನ ಮಾಲಿಕರಿಗೆ ಈ ಸಂಗತಿ ಕಿವಿಗೆ ಬಿದ್ದಂತಿಲ್ಲ. ಸರಕಾರ, ಇಲಾಖೆಗಳು ನಿಯಮಗಳನ್ನು ಪ್ರಕಟಿಸುವುದು ದೊಡ್ಡ ವಿಚಾರವಲ್ಲ. ನಿಯಮಗಳು ಜಾರಿಗೆ ಬಂದಿವೆಯೇ, ಜಾರಿಗೆ ತರದವರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮಾನಸಿಕವಾಗಿ, ಸಾಮಾಜಿಕವಾಗಿ ಬದ್ಧತೆ ಅಧಿಕಾರಿಗಳಿಗೆ ಇದೆಯೇ ಎನ್ನುವುದೇ ಪ್ರಶ್ನೆ. ಈ ಪ್ರಶ್ನೆಗಳು ಯಾಕೆ ಉದ್ಭವಿಸುತ್ತದೆ ಎಂದರೆ ಎಲ್ಲ ಫಲಕಗಳಲ್ಲೂ ಕನ್ನಡ ಕಡ್ಡಾಯ ಎಂಬ ನಿಯಮ ಇದೆ. ಎಷ್ಟರ ಮಟ್ಟಿಗೆ ಇದು ಜಾರಿ ಆಗಿದೆ ಎಂದು ನೀವೇ ಪರೀಕ್ಷಿಸ ಬೇಕು. ಇವತ್ತು ಸಂಜೆ ಕಪ್ಪು ಬಿಳುಪಿನ ಆಟೋ ಹತ್ತುವಾಗ ಕಣ್ಣು ಇಬ್ಬದಿಯ ಸಾಲುಗಳಲ್ಲಿ ನೇತಾಡುವ ಬೋರ್ಡುಗಳ ಮೇಲೆ ಕಣ್ಣು ಹಾಯಿಸಿ.
ನಿಸ್ಸಂದೇಹವಾಗಿ ಪರಿಸರ ಪ್ರೇಮಿ ಆಟೋಗೆ ಸ್ವಾಗತ. ಅದರ ಎಲ್ಲ ಪ್ರಯೋಜನಗಳು ಬೆಂಗಳೂರಿಗರಿಗೆ ದಕ್ಕಲಿ. ಬೆಳಗ್ಗೆ ಬೆಳಗ್ಗೆ ಗಂಡನ ಮೇಲೆ ಮುನಿಸಿಕೊಂಡ ಹೆಂಡತಿ ಕಣ್ಣೀರು ಹಾಕುತ್ತಾ ರಸ್ತೆಗಿಳಿದರೆ ಮತ್ತಷ್ಟು ಕಣ್ಣೀರು ಹಾಕಿಸಲು ಸಿದ್ಧವಾಗಿರುವ ಆಟೋ ರಾಜ್ಯ ಕೊನೆಗೊಳ್ಳಲಿ.
(ದಟ್ಸ್ ಕನ್ನಡ ವಾರ್ತೆ)
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications