493896ಸಾರಿಗೆ ಇಲಾಖೆಬಿಎಂಟಿಸಿ ಇಂಟಿಗ್ರೇಟೆಡ್ ಪಾಸ್ ಗೆ ಚಾಲನೆ/news/2009/05/15/buy-a-ticket-travel-in-and-around-bangalore-ashok.htmlಬೆಂಗಳೂರು, ಮೇ. 15 : ಬೆಂಗಳೂರಿನ ಸುತ್ತಮುತ್ತ 60 ಕಿ.ಮೀ ಒಳಗಿರುವ ಪ್ರದೇಶಗಳಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳ ಮೂಲಕ ಬೆಂಗಳೂರಿಗೆ ಬರುವ ಪ್ರಯಾಣಿಕರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಸಂಚರಿಸಲು ಅನುವಾಗುವಂತೆ ಒಂದೇ ಪಾಸ್ (ಇಂಟಿಗ್ರೇಟೆಡ್ ಪಾಸ್) ಪಡೆಯಬಹುದಾಗಿದೆ. ಈ ಸೇವೆಯನ್ನು ಮೇ 16 ರಂದು ಉದ್ಘಾಟಿಸಲಾಗುವುದು, ಅಲ್ಲದೆ ಅಂದು 30 36635http://kannada.oneindia.com/img/2009/05/15-ashok-r1e.jpg493896ಸಾರಿಗೆ ಇಲಾಖೆಸ್ಮಾರ್ಟ್ ಕಾರ್ಡ್ ಯೋಜನೆಗೆ ಸಿಎಂ ಚಾಲನೆ/news/2009/06/26/smart-cards-to-replace-driving-licenses-in-ktaka.htmlಬೆಂಗಳೂರು, ಜೂ. 26 : ಸಾರಿಗೆ ಇಲಾಖೆಯಿಂದ ನೀಡಲಾಗುತ್ತಿರುವ ಸ್ಮಾರ್ಟ್‌ಕಾರ್ಡ್'ಅತ್ಯಂತ ನಾಗರಿಕ ಸ್ನೇಹಿ ಹೆಜ್ಜೆ, ಮಾಹಿತಿ ತಂತ್ರಜ್ಞಾನವನ್ನು ಅಭಿವೃದ್ಧಿಗೆ, ನಾಗರಿಕರ ಅನುಕೂಲತೆಗಳಿಗಾಗಿ ಬಳಕೆ ಮಾಡಿದ್ದು ಅಂಗೈ ಅಗಲದ ಕಾರ್ಡಿನಲ್ಲಿ ಸಮಸ್ತ ಮಾಹಿತಿಯೂ ಅಡಕವಾಗೊಂಡಿದೆ. ಇದು ದೇಶದಲ್ಲಿಯೇ ಪ್ರಥಮ ಹೆಜ್ಜೆಯಾಗಿದೆಯೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ ಗಣಕೀಕೃತ ಸೇವೆ ನೀಡಲು ಸಿದ್ದಗೊಳಿಸರುವ 37606http://kannada.oneindia.com/img/2009/06/26-bsy-smart-card.jpg493896ಸಾರಿಗೆ ಇಲಾಖೆನನ್ನ ಆಟೋಗೆ ಹಸುರು ಬಣ್ಣ ಬಳಿಯಿರಿ/news/2009/09/08/bengaluru-welcomes-green-auto-rickshaws.htmlಬೆಂಗಳೂರು, ಸೆ. 8 : ರಾಜ್ಯ ಸರಕಾರದ ಕೆಲವು ಬಸ್ಸುಗಳು ಫಲಕದಲ್ಲಿ ಪರಿಸರ ಪ್ರೇಮಿ ಆಗಿದ್ದಾಯಿತು. ಈಗ ಬಸ್ಸು ಸಿಗದಿದ್ದವರು ಅನಿವಾರ್ಯವಾಗಿ ಹತ್ತಲೇಬೇಕಾದ ಆಟೋ ರಿಕ್ಷಾಗಳು ಪರಿಸರದ ಮಹತ್ವವನ್ನು ಸಾರುವ ಹಸುರು ರಥಗಳಾಗಿ ಬೆಂಗಳೂರು ರಸ್ತೆಗಳಲ್ಲಿ ಶೋಭಾಯಮಾನವಾಗುವ ದಿನಗಳು ಬಂದಿವೆ. ಸಾರಿಗೆ ಇಲಾಖೆಯ ಹೊಸ ಚಿಂತನೆ ಪ್ರಕಾರ ಪರಿಸರ ಸ್ನೇಹಿ ಆಟೋಗಳಿಗೆ ವಿಶೇಷ ಮಾನ್ಯತೆ ಪತ್ರ ನೀಡಲಾಗುತ್ತದೆ. 39074http://kannada.oneindia.com/img/2009/09/08-auto-article.jpg493896ಸಾರಿಗೆ ಇಲಾಖೆಮಲೆನಾಡಿನಲ್ಲಿ ಸಸಿನೆಡುವ ಚಳವಳಿ!/news/2009/11/17/dc-pankaj-kumar-assures-polllution-free-shivamogga.htmlಶಿವಮೊಗ್ಗ, ನ. 17: ಬದಲಾಗುತ್ತಿರುವ ಇಂದಿನ ಸನ್ನಿವೇಶದಲ್ಲಿ ಜಾಗತಿಕ ತಾಪಮಾನ, ವಾಯುಮಾಲಿನ್ಯ ಹೆಚ್ಚುತ್ತಿರುವುದಕ್ಕೆ ನಾವೆಲ್ಲ ಕಾರಣ ಎಂದು ಜಿಲ್ಲಾಧಿಕಾರಿ ಪಂಕಜಕುಮಾರ್ ಪಾಂಡೆ ಹೇಳಿದರು. ಸಾರಿಗೆ ಇಲಾಖೆ, ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಮತ್ತು ಶಿವಮೊಗ್ಗ ರೌಂಡ್ ಟೇಬಲ್ ಇವರ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆ ಮತ್ತು ಸುರಕ್ಷತೆ ನಿಯಮಗಳ ತಿಳುವಳಿಕೆ ಕಾರ್ಯಕ್ರಮವನ್ನು 40269http://kannada.oneindia.com/img/2009/11/17-pankaj-kumar-pandey2.jpg493896ಸಾರಿಗೆ ಇಲಾಖೆವ್ಯಂಗ್ಯ ಚಿತ್ರ ಪ್ರದರ್ಶನ ಉದ್ಘಾಟಿಸಿದ ರಮ್ಯಾ /movies/heroine/2009/11/27-actress-ramya-inaugurates-ksrtc-cartoon-event.htmlಬೆಂಗಳೂರು, ನ. 27 : ಒಂದು ಚಿತ್ರ ಸಾವಿರ ಶಬ್ದಗಳ ಒಂದು ಲೇಖನಕ್ಕೆ ಸಮ ಎಂಬುದು ಪತ್ರಿಕೋದ್ಯಮದಲ್ಲಿ ಜನಜನಿತ ಮಾತು. ಅದರಲ್ಲೂ ವ್ಯಂಗ್ಯಚಿತ್ರಗಳ ಅಂಕುಡೊಂಕು ರೇಖೆಗಳು ಸಮಾಜದ ಅಂಕುಡೊಂಕನ್ನು ಎತ್ತಿ ತೋರಿಸುವಲ್ಲಿ ಸದಾ ಮುಂದು. ಇದರ ಸದುಪಯೋಗ ಪಡೆದು ಜನಜಾಗೃತಿ ಮೂಡಿಸಲು ಈಗ ಸಾರಿಗೆ ಇಲಾಖೆ ಮುಂದಾಗಿದೆ.ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಸಾರಿಗೆ ಇಲಾಖೆ ಮತ್ತು ಕರ್ನಾಟಕ ವ್ಯಂಗ್ಯಚಿತ್ರಕಾರರ 40436http://kannada.oneindia.com/img/2009/11/27-ramya9.jpg37035ಬೆಂಗಳೂರುಕಬ್ಬನ್ ಪಾರ್ಕಿನೊಳಗೆ ಪುರಂದರ ವೈಭವ/news/2008/12/24/cubbon-part-resonates-to-best-of-purandara.htmlಬೆಂಗಳೂರು, ಡಿ. 24 : ಬೆಂಗಳೂರಿನ ಕಬ್ಬನ್ ಉದ್ಯಾನವನದಲ್ಲಿ ಪ್ರತಿ ಭಾನುವಾರ ಸಂಗೀತ ಕಾರ್ಯಕ್ರಮ ಜರುಗುವುದು ಅನೇಕರಿಗೆ ತಿಳಿದಿದೆ. ಅಂದಿನ, ಇಂದಿನ ಯಾರಾದರೊಬ್ಬರು ಕನ್ನಡ ಗೀತೆರಚನೆಕಾರರ, ಕವಿಗಳ, ಸಾಹಿತಿಗಳ ಕೃತಿಗಳನ್ನು ಆಧರಿಸಿ ಇಡೀ ಸಂಜೆಯನ್ನು ಸಂಗೀತದ ಗುಂಗಿನಲ್ಲಿ ನೆನೆ ಹಾಕುವ ಕಾರ್ಯಕ್ರಮ ಅದು.ಈ ಕಾರ್ಯಕ್ರಮವನ್ನು ತಪ್ಪಿಲ್ಲದೆ ನಡೆಸಿಕೊಂಡು ಬರುತ್ತಿರುವ ಸಂಸ್ಥೆಯ ಹೆಸರು ಪ್ರಕೃತಿ. ಪ್ರಕೃತಿಯ ಹರಿಕಾರ ಎಂ.ಎಸ್. 33679http://kannada.oneindia.com/img/2008/12/24-purandara1.jpg37035ಬೆಂಗಳೂರುಹೊಸವರ್ಷ ಮಸ್ತ್ ಮಜಾ ಮಾಡಿ, ಆದರೆ ನಿಯಮ ಮರೀಬೇಡಿ /news/2008/12/31/guarded-celebration-in-bangalore-this-year.htmlಬೆಂಗಳೂರು, ಡಿ. 31 : ಹೊಸ ವರ್ಷದ ಸ್ವಾಗತ ಸಂಭ್ರಮ ನಡೆಯುವ ಮಹಾತ್ಮ ಗಾಂಧಿ ಹಾಗೂ ಬ್ರಿಗೇಡ್ ರಸ್ತೆ ಸೇರಿದಂತೆ ಕೆಲ ಭಾಗಗಳಲ್ಲಿ ಡಿಸೆಂಬರ್ 31 ರ ರಾತ್ರಿ 8 ರಿಂದ ಜನವರಿ 1ರ ಬೆಳಗಿನ ಜಾವದವರೆಗೆ ವಾಹನ ಸಂಚಾರ ಹಾಗೂ ಪಾರ್ಕಿಂಗ್ ನಿಷೇಧಿಸಿ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಶಂಕರ ಬಿದರಿ ಆದೇಶ ಹೊರಡಿಸಿದ್ದಾರೆ. ಎಂಜಿ 33792http://kannada.oneindia.com/img/2008/12/31-shankar-bidari2e.jpg37035ಬೆಂಗಳೂರುನೂತನ ವರ್ಷ ಆಚರಣೆ ಸರಳವಾಗಿರಲಿ/news/2008/12/31/celebrate-new-year-eve-safely.htmlಬೆಂಗಳೂರು, ಡಿ. 31 : ಹೊಸ ವರ್ಷದ ಸಂಭ್ರಮಾಚರಣೆ ಎಲ್ಲೆಡೆ ಚಾಚಿಕೊಂಡಿದ್ದರೂ ಏನೋ ಒಂಥರ ದುಗುಡದ ವಾತಾವರಣ. ವರ್ಷಾಚರಣೆಯಲ್ಲಿ ಪಂಜರದಿಂದ ಬಿಟ್ಟ ಹಕ್ಕಿಯಂತೆ ಹಾರಾಡುತ್ತಿದ್ದ ಹುಡುಗಿಯರಿಗೆ ಈ ಬಾರಿ ಅಕ್ಷರಶಃ ಪಂಜರದಲ್ಲಿ ಬಂಧಿಯಾಗಿರುವ ಅನುಭವ. ಭಯೋತ್ಪಾದನೆಯ ಕರಿನೆರಳು, ಆರ್ಥಿಕ ಹೊಡೆತ ಈಸತಿ ವರ್ಷಾಚರಣೆಯ ಒಂದು ಭಾಗವನ್ನು ಕಸಿದುಕೊಂಡಿದೆ.ಝಗಮಗಿಸುವ ಮಿಣುಕು ದೀಪಗಳ ಅಡಿಯ ಕರಿನೆರಳಿನಲ್ಲಿ ಹೊಸವರ್ಷ ಆಚರಿಸಲು ಬೆಂಗಳೂರು 33809http://kannada.oneindia.com/img/2008/12/31-brigade-road1.jpg37035ಬೆಂಗಳೂರುಬಿಗ್ 92.7 ಆರ್ ಜೆ ಹಂಟ್ ವಿಜೇತರಾಗಿ ರಕ್ಷಿತ್ /movies/headlines/2009/01/02-big-92-7-fm-radio-jockey-hunt-rakshith.htmlಬಿಗ್ 92.7ನ ಆರ್ ಜೆ ಅನ್ವೇಷಣಾ ಸ್ಪರ್ಧೆಯ ಫೈನಲ್ ವಿಜೇತರಾಗಿ ಬೆಂಗಳೂರಿನ ರಕ್ಷಿತ್ ಆಯ್ಕೆಯಾಗಿದ್ದಾರೆ. ಕಂಪ್ಯೂಟರ್ ವಿಜ್ಞಾನ ಪದವೀಧರರಾದ ರಕ್ಷಿತ್ ಬಿಗ್ 92.7 ಎಫ್ ಎಂನ ಬೆಂಗಳೂರು ಕೇಂದ್ರದಲ್ಲಿ ತರಬೇತಿ ಪಡೆದು ನಂತರ ಅವರು ಪೂರ್ಣಕಾಲಿಕ ಆರ್ ಜೆಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಹಲವು ಸುತ್ತಿನ ಆರ್ ಜೆ ಅನ್ವೇಷಣಾ ಸ್ಪರ್ಧೆ ನವೆಂಬರ್ 10ರಂದು ಆರಂಭವಾಗಿತ್ತು. ಒಟ್ಟು 200ಕ್ಕೂ ಹೆಚ್ಚು 33823http://kannada.oneindia.com/img/2009/01/02-big-fm-radio1.jpg37035ಬೆಂಗಳೂರುನೂತನ ಡಿಜಿಪಿಯಾಗಿ ಅಜಯ್ ಕುಮಾರ್ ಸಿಂಗ್ /news/2009/01/03/ajay-kumar-singh-as-new-dgp.htmlಬೆಂಗಳೂರು, ಜ.3: ರಾಜ್ಯದ ನೂತನ ಪೊಲೀಸ್ ಮಹಾ ನಿರ್ದೇಶಕರಾಗಿ ಡಾ.ಅಜಯ್ ಕುಮಾರ್ ಸಿಂಗ್ ಅವರನ್ನು ನೇಮಕ ಮಾಡಲಾಗಿದೆ. ಈ ವಿಷಯವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ಪ್ರಕಟಿಸಿದ್ದಾರೆ. ಹಾಲಿ ಡಿಜಿಪಿ ಶ್ರೀಕುಮಾರ್ ಅವರ ಅಧಿಕಾರ ಅವಧಿ ಜ.31ಕ್ಕೆ ಕೊನೆಗೊಳ್ಳಲಿದೆ. ಸೇವಾ ಜ್ಯೇಷ್ಠತೆ ಆಧಾರದ ಮೇಲೆ ಅಜಯ್ ಕುಮಾರ್ ಸಿಂಗ್ ಅವರನ್ನು ನೂತನ ಡಿಜಿಪಿಯಾಗಿ ನೇಮಿಸಲಾಗುತ್ತಿದೆ. ಸಿಒಡಿ ಡಿಜಿಪಿಯಾಗಿ ಅಧಿಕಾರ 33845http://kannada.oneindia.com/img/2009/01/03-ajay-kumar-singh.jpg35082ಕಾಫಿ ಮಾಡುವ ವಿಧಾನದಲ್ಲೂ ಅದೆಷ್ಟು ಬಗೆ!/recipe/drinks/2008/0905-how-to-make-good-coffee.htmlಕಾಫಿ ತಯಾರಿಕೆಯಲ್ಲಿ ಹಲವು ವಿಧಾನಗಳಿವೆ, ಪದ್ಧತಿಗಳಿವೆ. ಬಟ್ಟೆಯಲ್ಲಿ ಕಾಫಿ ಸೋಸುವ ಸಾಂಪ್ರದಾಯಿಕ ವಿಧಾನ, ಪರ್ಕ್ಯೂಲೇಟರ್‌ ವಿಧಾನ, ಫಿಲ್ಟರ್‌ ವಿಧಾನ, ಕುದಿಸಿ ತಯಾರಿಸುವ ವಿಧಾನ ಇತ್ಯಾದಿ, ಇತ್ಯಾದಿ..ಈಗ ಒಂದೊಂದು ವಿಧಾನವನ್ನು ಪ್ರಯತ್ನಿಸೋಣ. ಬಟ್ಟೆಯಲ್ಲಿ ಕಾಫಿ ಸೋಸುವ ವಿಧಾನ : ಮೊದಲು ನೀರನ್ನು ಹಿಡಿ ಮೂತಿ ಇರುವ ಪಾತ್ರೆಯಲ್ಲಿ ಕುದಿಸಿ, ಕಾಫಿ ಸೋಸಲೆಂದೇ ಇರುವ ಶುಭ್ರಬಟ್ಟೆಯನ್ನು ಖಾಲಿ ಪಾತ್ರೆಯ ಮೇಲೆ 977http://kannada.oneindia.com/img/2009/10/29-filter-coffee1.jpg35082ಮಸಾಲಾ ಬಾದಾಮಿ ಇಡ್ಲಿ/recipe/breakfast/2007/1112-recipe-masala-badam-idli.htmlಅದೇ ಇಡ್ಲಿ ಅದೇ ಸಾಂಬಾರ್ ಬೇಡ. ಇಡ್ಲಿಯಲ್ಲೂ ಬಾಯಲ್ಲಿ ನೀರೂರಿಸುವ ಪಾಕ ಪ್ರಾವಿಣ್ಯವನ್ನು ಪ್ರದರ್ಶಿಸಬಹುದು. ಅದೇ ಮಸಾಲಾ ಬಾದಾಮಿ ಇಡ್ಲಿ. ಹಾಗಿದ್ದರೆ ಈ ಹೊಸ ಪಾಕವನ್ನೊಮ್ಮೆ ಪ್ರಯತ್ನಿಸಿ ನೋಡಿ. ಕುಸುಮಬಾಲೆ ಬೇಕಾಗುವ ಪದಾರ್ಥಗಳು : ಅಕ್ಕಿ : 200 ಗ್ರಾಂ ಕಡಲೆ ಬೇಳೆ : 100ಗ್ರಾಂ ಬಾದಾಮಿ ಹೋಳುಗಳು : 100ಗ್ರಾಂ ಹಸಿ ಮೆಣಸಿನ ಕಾಯಿ : 19453http://kannada.oneindia.com/img/2009/10/13-masala-badam-idli2.jpg35082ಆಟೋ ಬೆನ್ನುಡಿ ಸಾಹಿತ್ಯಕ್ಕೆ ಜಯವಾಗಲಿ/literature/articles/2008/1117-heart-warming-autorikshaw-slogans.htmlಆಟೋಗಳ ಹಿಂಬಾಗ ಅದೆಷ್ಟೋ ಕ್ರಿಯೇಟಿವ್ ಬರಹಗಳಿಗೆ, ಸಿನೇಮಾ ಜಾಹೀರಾತುಗಳಿಗೆ, ಗ್ರಾಹಕ ವಸ್ತುಗಳ ಜಾಹೀರಾತುಗಳಿಗೆ (ಎಫ್.ಎಂ.ಸಿ.ಜಿ ಪ್ರಾಡಕ್ಸ್) ವೇದಿಕೆಯಾಗಿರುತ್ತದೆ. ಅಲ್ಲದೆ, ಆಟೋ ಚಾಲಕರ ಅಭಿರುಚಿಗೆ ಅನುಗುಣವಾಗಿ ಹಿಂಬರಹಗಳು ಪ್ರತಿನಿತ್ಯ ನಮ್ಮ ಗಮನ ಸೆಳೆಯುತ್ತಲೇ ಇರುತ್ತವೆ. ಇಂಥ ಎಷ್ಟೋ ಆಟೋ ಸಂದೇಶಗಳನ್ನು ನೀವು ನೋಡಿರಲಿಕ್ಕೆ ಸಾಕು. ನನ್ನ ಕಣ್ಣಿಗೆ ಬಿದ್ದ ಕೆಲವನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.*ಸುಧೀಂದ್ರ ಎಸ್ ರಾವ್, ಬೆಂಗಳೂರು ಟಿ 32811http://kannada.oneindia.com/img/2009/08/01-sudheendra-deshpande1e.jpg35082ಯೋಗಿನಿ ಮಲ್ಲಿಕಾ ಹಾಗೂ ಯೇಸುಕ್ರಿಸ್ತನ ಕಥೆ/movies/bollywood/2008/12/04-mallika-sherawat-role-hollywood-film-on-christ.htmlಅಪ್ಪಟ ಬ್ರಹ್ಮಚಾರಿಣಿಯ ಪಾತ್ರವನ್ನು ಮಲ್ಲಿಕಾ ಮಾಡುತ್ತಿದ್ದಾರೆ ಎಂದರೆ ಊಹಿಸುವುದಕ್ಕೂ ಸಾಧ್ಯವಿಲ್ಲ ಬಿಡಿ. ಆದರೆ ಇದು ನಿಜ. ಅದರಲ್ಲೂ ಯೇಸುಕ್ರಿಸ್ತನ ಜೀವನ ಕುರಿತಾದ ಹಾಲಿವುಡ್ ಚಿತ್ರವೊಂದರಲ್ಲಿ ಮಲ್ಲಿಕಾ ಇಂಥದೊಂದು ಪಾತ್ರದಲ್ಲಿ ಕಾಣಿಸಲಿದ್ದಾರೆ. ದಿ ಆಕ್ವೇರಿಯನ್ ಗಾಸ್ಪೆಲ್ ಎಂಬ ಅಮೆರಿಕನ್ ಚಿತ್ರದಲ್ಲಿ ಸರಸ್ವತಿ ಎಂಬ ಯೋಗಿನಿಯ ಪಾತ್ರ ಬರುತ್ತದೆ. ಜೆಸೋವ(ಯೇಸು)ನ ಆಪ್ತ ಮಿತ್ರವಲಯದಲ್ಲಿ ಪ್ರಮುಖವಾದ ವ್ಯಕ್ತಿ ಸರಸ್ವತಿ. ಈ ಚಿತ್ರದಲ್ಲಿ 33188http://kannada.oneindia.com/img/2008/12/mallika-sherawat.jpg35082ಸಂಭಾವನೆ ಇಳಿಸಿಕೊಂಡ ಸಂಜಯ್ ದತ್/movies/bollywood/2008/12/11-actor-sanjay-dutt-lowers-his-remuneration.html''ಅಗತ್ಯ ಬಿದ್ದರೆ ಅತ್ಯಧಿಕ ಸಂಭಾವನೆ ಪಡೆಯುವುದಷ್ಟೆ ಅಲ್ಲ, ಪರಿಸ್ಥಿತಿ ನೆಟ್ಟಗಿಲ್ಲದಿದ್ದರೆ ಅಷ್ಟೆ ಪ್ರಮಾಣದಲ್ಲಿ ಕಡಿಮೆ ಮಾಡಿಕೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ'' ಎನ್ನುತ್ತಿದ್ದಾರೆ ಬಾಲಿವುಡ್ 'ಖಳ್ ನಾಯಕ್ "ಸಂಜಯ್ ದತ್. ಈ ಹಿಂದೆ ಸಂಜಯ್ ದತ್ ಒಂದೊಂದು ಸಿನಿಮಾಗೆ ಮುಲಾಜಿಲ್ಲದೆ ರು.12 ಕೋಟಿ ಸಂಭಾವನೆ ವಸೂಲಿ ಮಾಡುತ್ತಿದ್ದರು. ತೀರಾ ಇತ್ತೀಚೆಗೆ ಸುನಿಲ್ ಶೆಟ್ಟಿ ಆ ಮೊತ್ತ್ತವನ್ನು 15 33382http://kannada.oneindia.com/img/2008/12/sanjay-dutt5.jpgnews"> ನನ್ನ ಆಟೋಗೆ ಹಸುರು ಬಣ್ಣ ಬಳಿಯಿರಿ | Green Auto Rikshaw | Environment friendly | Karnataka transport| Bangalore Commutation| Digital Meter|ನನ್ನ ಆಟೋಗೆ ಹಸುರು ಬಣ್ಣ ಬಳಿಯಿರಿ - Kannada Oneindia

ನನ್ನ ಆಟೋಗೆ ಹಸುರು ಬಣ್ಣ ಬಳಿಯಿರಿ

Bengaluru welcomes environment friendly auto rickshaw
ಬೆಂಗಳೂರು, ಸೆ. 8 : ರಾಜ್ಯ ಸರಕಾರದ ಕೆಲವು ಬಸ್ಸುಗಳು ಫಲಕದಲ್ಲಿ ಪರಿಸರ ಪ್ರೇಮಿ ಆಗಿದ್ದಾಯಿತು. ಈಗ ಬಸ್ಸು ಸಿಗದಿದ್ದವರು ಅನಿವಾರ್ಯವಾಗಿ ಹತ್ತಲೇಬೇಕಾದ ಆಟೋ ರಿಕ್ಷಾಗಳು ಪರಿಸರದ ಮಹತ್ವವನ್ನು ಸಾರುವ ಹಸುರು ರಥಗಳಾಗಿ ಬೆಂಗಳೂರು ರಸ್ತೆಗಳಲ್ಲಿ ಶೋಭಾಯಮಾನವಾಗುವ ದಿನಗಳು ಬಂದಿವೆ. ಸಾರಿಗೆ ಇಲಾಖೆಯ ಹೊಸ ಚಿಂತನೆ ಪ್ರಕಾರ ಪರಿಸರ ಸ್ನೇಹಿ ಆಟೋಗಳಿಗೆ ವಿಶೇಷ ಮಾನ್ಯತೆ ಪತ್ರ ನೀಡಲಾಗುತ್ತದೆ. ಅವು ಹಸುರು ಹಳದಿ ಬಣ್ಣ ಬಳಿದುಕೊಂಡಿರುತ್ತವೆ. ನೋಡಿದ ಕೂಡಲೇ ಓಹೋ ಇದು ಪರಿಸರ ಪ್ರೇಮಿ ವಾಹನ ಎಂದು ಭಾವಿಸಿ ನೀವು ಸಂತೋಷದಿಂದ ಓಡಿಹೋಗಿ ಹತ್ತಿ ಕುಳಿತು ಪ್ರಯಾಣ ಬೆಳೆಸಬಹುದು.

ಈ ಯೋಜನೆ ಪ್ರಾಯೋಗಿಕವಾಗಿ ಬೆಂಗಳೂರಿನಲ್ಲಿ ಜಾರಿಗೆ ಬರುತ್ತಿರುವುದರಿಂದ ಈಗಲೇ ಏನನ್ನೂ ಹೇಳುವಂತಿಲ್ಲ. ಯಾಕೆಂದರೆ, ಆಟೋ ಕವಚಕ್ಕೆ ಹೊಸ ಬಣ್ಣ ಬಳಿಯಬೇಕಾದರೆ ಕನಿಷ್ಠ 7 ಸಾವಿರ ರೂಪಾಯಿ ಬೇಕು. ಖಾಸಗಿ ಆಟೋಗೆ ಸರಕಾರದ ಹಣ ವೆಚ್ಚವಾಗುವ ಹಾಗಿಲ್ಲ. ಆಟೋ ಉತ್ಪಾದಿಸುವ ಕಂಪನಿಗಳು ಹಳೆಯ ವಾಹನಕ್ಕೆ ಬಣ್ಣ ಹಚ್ಚುವ ಉಸಾಬರಿ ವಹಿಸಿಕೊಳ್ಳುವುದಿಲ್ಲ. ಆಟೋ ಮಾಲಿಕನಿಗೆ ಪರಿಸರ ಪ್ರೇಮ ಉಂಟು, ಆದರೆ ವಾಹನ ನವೀಕರಿಸುವುದಕ್ಕೆ ಅಗತ್ಯವಾಗುವ 7 ಸಾವಿರ ರೂ ಕಕ್ಕಲು ಹಣ ಇಲ್ಲ, ಇದ್ದರೂ ಸಿದ್ಧನಿಲ್ಲ.

ಪರಿಸರ ಪ್ರೇಮಿ ಆಟೋ ಆಗಬೇಕಾದರೆ ಮುಖ್ಯ ಅರ್ಹತೆ ಫೋರ್ ಸ್ಟ್ರೋಕ್ ಇಂಜಿನ್ ಆಗಿರತಕ್ಕದ್ದು. ಬೆಂಗಳೂರಿನಲ್ಲಿ ಅಲೆಯುವ 80 ಸಾವಿರಕ್ಕೂ ಹೆಚ್ಚು ಆಟೋಗಳಲ್ಲಿ ಶೇ 25 ರಷ್ಟು ವಾಹನಗಳು ಮಾತ್ರ ಫೋರ್ ಸ್ಟ್ರೋಕ್ ಇಂಜಿನ್ ಹೊಂದಿವೆ. ಕೇವಲ ಬಣ್ಣಕ್ಕೆ ಮಾರುಹೋಗುವ ತವಕವಲ್ಲವಿದು. ಪರಿಸರ ಪ್ರೇಮಿ ಆಟೋ ಎಂದರೆ, ಚಾಲಕ ಸಭ್ಯನಾಗಬೇಕು, ಗಾಂಧಿ ಮೀಟರ್ ಕಿತ್ತುಹಾಕಿ ಡಿಜಿಟಲ್ ಮೀಟರ್ ಹಾಕಬೇಕು, ಸೀಮೆ ಎಣ್ಣೆ ಹಾಕಿ ಗಾಡಿ ಓಡಿಸಬಾರದು, ಗ್ಯಾಸ್ ಕಿಟ್ ಲಗತ್ತಾಗಿರಬೇಕು. ಎಷ್ಟೋ ಮಾಲಿಕರು ಮತ್ತು ಚಾಲಕರಿಗೆ ಈ ಕಟ್ಟಳೆಗಳು ಇಷ್ಟವಿಲ್ಲ. ಅಂಥವರು ಈಗಾಗಲೇ ಪರಿಸರ ಪ್ರೇಮಿ ಆಟೋ ಕಲ್ಪನೆಯನ್ನು ವಿರೋಧಿಸಲು ಸಿದ್ಧರಾಗಿದ್ದಾರೆ.

ಈ ಯೋಜನೆ ಜಾರಿಗೆ ಬರಲಿ ಎನ್ನುತ್ತಾರೆ ಹಳೆಗುಡ್ಡದಹಳ್ಳಿ ನಿವಾಸಿ ಕೃಷ್ಣಪ್ಪ. ಆಟೋ ಉಪಟಳದಿಂದ ಬೇಸತ್ತ ಇವರಿಗೆ ಸರಕಾರ ಕಡಿವಾಣ ಹಾಕಬೇಕು ಎಂಬ ನಿರೀಕ್ಷೆ ಇತ್ತಂತೆ. ಅಂತೂ ನಂಬಲರ್ಹ ಆಟೋ ಇದ್ದರೆ ಒಳ್ಳೆಯದು. ಇನ್ನುಮುಂದೆ ಹಸುರು ಬಣ್ಣದ ಆಟೋ ರಸ್ತೆಯಲ್ಲಿ ಸಿಕ್ಕರೆ ಅದನ್ನೇ ಹತ್ತುವುದಾಗಿ ಹೇಳುತ್ತಾರೆ. ಈ ಆಟೋಗಳು ಉತ್ಪಾದಿಸುವ ಒಟ್ಟು ವಿಷಗಾಳಿ ನೆನೆಸಿಕೊಂಡರೆ ಭಯವಾಗುತ್ತದೆ. ವಾತಾವರಣ ಕಲುಷಿತ ರಹಿತವಾಗುವುದಾದರೆ ಸಾಕು, ಆಟೋ ಬಣ್ಣ ನನಗೆ ಮುಖ್ಯವಲ್ಲ ಎಂದವರು ವಾಣಿವಿಲಾಸ ರಸ್ತೆಯಲ್ಲಿ ಆಟೋ ಹತ್ತಲು ಸಿದ್ಧವಾಗಿ ನಿಂತಿದ್ದ ಕಾಲೇಜು ವಿದ್ಯಾರ್ಥಿ ಪ್ರತಿಮಾ ಶೆಟ್ಟಿ.

ಬೆಂಗಳೂರಿನ ಆಟೋಗಳು ಹಳೆಯ ಮೀಟರ್ ತೆಗೆದು ಡಿಜಿಟಲ್ ಮೀಟರ್ ಅಳವಡಿಸಿಕೊಳ್ಳಬೇಕೆಂಬ ನಿಯಮವನ್ನು ಸಾರಿಗೆ ಇಲಾಖೆ ಪ್ರಕಟಿಸಿದೆ. ಆದರೆ, ಎಷ್ಟೋ ವಾಹನ ಮಾಲಿಕರಿಗೆ ಈ ಸಂಗತಿ ಕಿವಿಗೆ ಬಿದ್ದಂತಿಲ್ಲ. ಸರಕಾರ, ಇಲಾಖೆಗಳು ನಿಯಮಗಳನ್ನು ಪ್ರಕಟಿಸುವುದು ದೊಡ್ಡ ವಿಚಾರವಲ್ಲ. ನಿಯಮಗಳು ಜಾರಿಗೆ ಬಂದಿವೆಯೇ, ಜಾರಿಗೆ ತರದವರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮಾನಸಿಕವಾಗಿ, ಸಾಮಾಜಿಕವಾಗಿ ಬದ್ಧತೆ ಅಧಿಕಾರಿಗಳಿಗೆ ಇದೆಯೇ ಎನ್ನುವುದೇ ಪ್ರಶ್ನೆ. ಈ ಪ್ರಶ್ನೆಗಳು ಯಾಕೆ ಉದ್ಭವಿಸುತ್ತದೆ ಎಂದರೆ ಎಲ್ಲ ಫಲಕಗಳಲ್ಲೂ ಕನ್ನಡ ಕಡ್ಡಾಯ ಎಂಬ ನಿಯಮ ಇದೆ. ಎಷ್ಟರ ಮಟ್ಟಿಗೆ ಇದು ಜಾರಿ ಆಗಿದೆ ಎಂದು ನೀವೇ ಪರೀಕ್ಷಿಸ ಬೇಕು. ಇವತ್ತು ಸಂಜೆ ಕಪ್ಪು ಬಿಳುಪಿನ ಆಟೋ ಹತ್ತುವಾಗ ಕಣ್ಣು ಇಬ್ಬದಿಯ ಸಾಲುಗಳಲ್ಲಿ ನೇತಾಡುವ ಬೋರ್ಡುಗಳ ಮೇಲೆ ಕಣ್ಣು ಹಾಯಿಸಿ.

ನಿಸ್ಸಂದೇಹವಾಗಿ ಪರಿಸರ ಪ್ರೇಮಿ ಆಟೋಗೆ ಸ್ವಾಗತ. ಅದರ ಎಲ್ಲ ಪ್ರಯೋಜನಗಳು ಬೆಂಗಳೂರಿಗರಿಗೆ ದಕ್ಕಲಿ. ಬೆಳಗ್ಗೆ ಬೆಳಗ್ಗೆ ಗಂಡನ ಮೇಲೆ ಮುನಿಸಿಕೊಂಡ ಹೆಂಡತಿ ಕಣ್ಣೀರು ಹಾಕುತ್ತಾ ರಸ್ತೆಗಿಳಿದರೆ ಮತ್ತಷ್ಟು ಕಣ್ಣೀರು ಹಾಕಿಸಲು ಸಿದ್ಧವಾಗಿರುವ ಆಟೋ ರಾಜ್ಯ ಕೊನೆಗೊಳ್ಳಲಿ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+