For Daily Alerts
ಪಾದಯಾತ್ರೆಗೆ ಹೆಸರಾಗಿದ್ದರು ವೈಎಸ್ ಆರ್
2003ರ ಮಧ್ಯ ಬೇಸಿಗೆಯಲ್ಲಿ 1400 ಕಿ.ಮೀಗಳ ಪಾದಾಯಾತ್ರೆಯನ್ನು ಕೈಗೊಂಡಿದ್ದರು. ಪಾದಯಾತ್ರೆ ಮೂಲಕ ರಾಜ್ಯದ ಹಿಂದುಳಿದ ಪ್ರದೇಶಗಳಲ್ಲಿನ ಪರಿಸ್ಥಿತಿಯನ್ನು ಹತ್ತಿರದಿಂದ ಗಮನಿಸಲು ಈ ಪಾದಾಯತ್ರೆ ಕೈಗೊಂಡಿದ್ದರು. ಇದರಿಂದ ಅಲ್ಲಿನ ಜನರ ನೈಜ ಸ್ಥಿತಿಗತಿಗಳನ್ನು ತಿಳಿದುಕೊಳ್ಳಲು ವೈಎಸ್ ಆರ್ ಗೆ ಸಹಾಯವಾಯಿತು.
ರಾಯಲಸೀಮೆ ಪ್ರಾಂತ್ಯದಲ್ಲೂ ವೈಎಸ್ ಆರ್ ಪಾದಯಾತ್ರೆ ಕೈಗೊಂಡಿದ್ದರು. ಕಾಂಗ್ರೆಸ್ ನ ಎಲ್ಲಾ ಶಾಸಕರನ್ನು ಒಟ್ಟುಗೂಡಿಸಿ ಅಲ್ಲಿನ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಅನಿರ್ದಿಷ್ಟಕಾಲ ಉಪವಾಸ ಸತ್ಯಾಗ್ರಹ ಮಾಡಿದ್ದರು. ಕರ್ನೂಲು ಜಿಲ್ಲೆಯಲ್ಲೂ ಪಾದಯಾತ್ರೆ ಮಾಡಿದ್ದರು. ಲೇಪಾಕ್ಷಿಯಿಂದ ಪೋತಿರೆಡ್ಡಿಪಾಡುವರೆಗೂ ಅವರು ಕಾಲ್ನಡಿಗೆಯಲ್ಲಿ ಕ್ರಮಿಸಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಪಾದಯಾತ್ರೆ ಕೈಗೊಂಡಿದ್ದರು.
(ದಟ್ಸ್ ಕನ್ನಡ ವಾರ್ತೆ)
ದುರಂತ ವೈಎಸ್ಆರ್ ysr ವೈ ಎಸ್ ರಾಜಶೇಖರರೆಡ್ಡಿ chittoor helicopter ಕರ್ನೂಲ್ ಚಿತ್ತೂರು andhra pradesh ಹೆಲಿಕಾಪ್ಟರ್ ಆಂಧ್ರ ys rajashekara reddy ap air crash
Story first published: Thursday, September 3, 2009, 12:18 [IST]