ಸೋಮಣ್ಣ ರಾಜೀನಾಮೆ ನೀಡಲಿ : ದೇವೇಗೌಡ

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ನಿಜಲಿಂಗಪ್ಪ ಅವರು ಎಸ್ ಆರ್ ಕಂಠಿ ಸೋತಾಗ ರಾಜೀನಾಮೆ ನೀಡಿ, ನಂತರ ಗೆದ್ದು ಬಂದು ಅಧಿಕಾರದ ಗದ್ದುಗೆ ಹಿಡಿದ ನಿದರ್ಶನಗಳಿವೆ ಎಂದರು. ಸೋಮಣ್ಣಗೆ ಅನುಕೂಲವಾಗಲೆಂದು ಜೆಡಿಎಸ್ ನ ವಿಧಾನ ಪರಿಷತ್ ಸದಸ್ಯ ಬಿ ಆರ್ ಗುರುದೇವ್ ರಾಜೀನಾಮೆ ನೀಡುತ್ತಾರಂತಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಗೌಡರು, ಅವರು ನಮ್ಮ ಪಕ್ಷಕ್ಕೆ ದೊಡ್ಡ ಶಕ್ತಿ ತುಂಬಿದವರು. ಅವರ ಉಪಕಾರ ಸ್ಮರಿಸುತ್ತೇನೆ. ಆಣಿಮುತ್ತು ಸುರಿಸುವ ಕೆಲಸಕ್ಕೆ ಹೋಗಲಾರೆ ಎಂದು ಮಾರ್ಮಿಕವಾಗಿ ಹೇಳಿದರು. ವಿಧಾನ ಪರಿಷತ್ ನ ಯಾವ ಸದಸ್ಯರ ರಾಜೀನಾಮೆ ಕೊಡಿಸಿ ಗೆಲ್ಲಿಸುತ್ತಾರೆ ನೋಡೋಣ ಎಂದು ವ್ಯಂಗ್ಯವಾಡಿದರು.
ಬಿಜೆಪಿ ಹೈಕಮಾಂಡ್ ಮುಳುಗುತ್ತಿರುವ ದೋಣಿ ಇದ್ದಂತೆ ಒಬ್ಬರ ಮೇಲೆ ಮತ್ತೊಬ್ಬರು ಆರೋಪಿಸುತ್ತಿರುವುದನ್ನು ಗಮನಿಸಿದರೆ ಪಕ್ಷ ಎಷ್ಟರ ಮಟ್ಟಿಗೆ ಗಟ್ಟಿಯಾಗಿದೆ ಎಂಬುದು ತಿಳಿಯುತ್ತಿದೆ ಎಂದು ಗೌಡರು ಟೀಕಿಸಿದರು.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications