ಸುಷ್ಮಾ ಸ್ವರಾಜ್ ನನ್ನ ತಾಯಿ ಇದ್ದಹಾಗೆ : ರೆಡ್ಡಿ

ದೇಶದ ನಾನಾ ಭಾಗಗಳ ಪ್ರವಾಸಿಗರನ್ನು ರಾಜ್ಯದತ್ತ ಸೆಳೆಯಲು ಇಂದಿನಿಂದ ಒಂದು ವಾರ ಕಾಲ ಇಲ್ಲಿನ ಪಂಚತಾರಾ ಹೋಟೆಲುಗಳಲ್ಲಿ ಕರ್ನಾಟಕದ ಭೋಜನ ಉತ್ಸವ ಹಮ್ಮಿಕೊಂಡಿರುವ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಈ ರೀತಿ ಪ್ರತಿಕ್ರಿಯೆ ನೀಡಿದರು. ರಾಜ್ಯದ ಪ್ರವಾಸೀ ಸ್ಥಳಗಳ ಕುರಿತ ಸುಧೀರ್ಘ ದೃಶ್ಯ ನಿರೂಪಣೆ ಜಾನಪದದ ಪ್ರಕಾರಗಳು ಕಿರು ರೂಪಕಗಳು ಸೇರಿದ ಮಾಧ್ಯಮಗೋಷ್ಠಿ ಸುಮಾರು ಎರಡು ಗಂಟೆಗಳ ಕಾಲ ನಡೆಯಿತು.
ರೆಡ್ಡಿ ಸಹೋದರರು ಕಾಂಗ್ರೆಸ್ ಸೇರುತ್ತಾರಂತೆ, ಸಂಜೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡುತ್ತಾರಂತೆ ಅವರು ತಮ್ಮ ಮನದಾಳದ ಮಾತನ್ನು ಸ್ಪಷ್ಟಪಡಿಸಿದರು. ನೋಡಿ ನಮ್ಮ ತಾಯಿ ತೀರಿ ಹೋಗಿ ನಾಲ್ಕು ವರ್ಷಗಳ ಸಂದಿವೆ. ಸುಷ್ಮಾ ಸ್ವರಾಜ್ ನಮ್ಮ ಪಾಲಿಗೆ ತಾಯಿ ಸ್ಥಾನ ತುಂಬಿದ್ದಾರೆ. ಅವರ ಪ್ರೀತಿ, ವಿಶ್ವಾಸ ಮಮಕಾರದಲ್ಲಿ ಮಿಂದಿದ್ದೇವೆ. ಈ ಅಮ್ಮ ಬಿಜೆಪಿಯಲ್ಲಿ ಇರುವ ತನಕ ಬಿಜೆಪಿ ಕೂಡ ನಮಗೆ ತಾಯಿ. ತಾಯಿಯನ್ನು ತೊರೆಯುವುದು ಅಸಾಧ್ಯ ತನ್ನದೇ ದಾಟಿಯಲ್ಲಿ ವಿವರಿಸಿದರು.
ನಾವು ಕಾಂಗ್ರೆಸ್ ಗೆ ಯಾಕೆ ಹೋಗಬೇಕು ಎಂದು ಪ್ರಶ್ನಿಸಿದ ರೆಡ್ಡಿ, ನೆರೆಯ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ ಎಸ್ ರಾಜಶೇಖರರೆಡ್ಡಿ ಮತ್ತು ಅವರ ಮಗ ಜಗಮೋಹನ್ ರೆಡ್ಡಿ ನನಗೆ ಆಪ್ತರು. ಹಾಗಂತ ಬಿಜೆಪಿ ತೊರೆದು ಹೋಗುವೆ ಎಂದು ಉಹಿಸುವುದು ಸರಿಯಲ್ಲ ಎಂದು ರೆಡ್ಡಿ ಸ್ಪಷ್ಟನೆ ನೀಡಿದರು.
(ಏಜನ್ಸೀಸ್)












Click it and Unblock the Notifications