ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೃಂಗೇರಿಯಲ್ಲಿ ಇಬ್ಬರು ನಕ್ಸಲರು ಗುಂಡಿಗೆ ಬಲಿ

By Staff
|
Google Oneindia Kannada News

Two Naxal gun down in Nemmar
ಶೃಂಗೇರಿ, ಆ. 21 : ಇಲ್ಲಿನ ಕೆರೆಕಟ್ಟೆ ಸಮೀಪದ ನೆಮ್ಮಾರು ಅರಣ್ಯ ಪ್ರದೇಶದಲ್ಲಿ ಇಬ್ಬರು ನಕ್ಸಲರನ್ನು ನಕ್ಸಲ್ ನಿಗ್ರಹ ಪಡೆ ಪೊಲೀಸರು ಗುಂಡಿಕ್ಕಿ ಕೊಂದಿದ್ದಾರೆ. ದಿಂಡೋಡಿ ಸಮೀಪ ನಡೆದ ಗುಂಡಿನ ಚಕಮಕಿ ನಡೆದಿದೆ. ಚಿಕ್ಕಮಗಳೂರು ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಮನೋಹರ್ ಸ್ಥಳಕ್ಕೆ ದಾವಿಸಿದ್ದು, ಪರಿಶೀಲನೆ ನಡೆಸಿದ್ದಾರೆ.

ಗೋಪಾಲ್ ಹೊಸೂರ್ ನೇತೃತ್ವದ ನಕ್ಸಲ್ ನಿಗ್ರಹ ಪಡೆ ನಿಖರ ಮಾಹಿತಿಯ ಮೇರೆಗೆ ಕಾರ್ಯಾಚರಣೆ ಆರಂಭಿಸಿ, ಇಬ್ಬರು ನಕ್ಸಲರನ್ನು ಕೊಲ್ಲುವಲ್ಲಿ ಯಶಸ್ವಿಯಾಗಿದೆ. ಸುಮಾರು 20ಕ್ಕೂ ಹೆಚ್ಚು ಜನರಿಂದ ಸಶಸ್ತ್ರ ನಕ್ಸಲ್ ಪಡೆಯ ಮೇಲೆ ಗುಂಡಿನ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಕೊಂದು ನಾಲ್ವರನ್ನು ಗಾಯಗೊಳಿಸಿದ್ದಾರೆ.

ಕೆಳ ದಿನಗಳ ಹಿಂದೆ ಬಿಜಿ ಕೃಷ್ಣಮೂರ್ತಿ ನೇತೃತ್ವದ 20 ಜನರ ಶಸ್ತ್ರಸಜ್ಜಿತ ನಕ್ಸಲರ ತ೦ಡ ಕಿಗ್ಗಾ ಬಳಿಯ ಹುಲಿಗಾರ್ ಬೈಲಿನಲ್ಲಿರುವ ಶಾನುಭೋಗ ನರಸಿ೦ಹಸ್ವಾಮಿ ಅವರ ಮನೆಗೆ ಭೇಟಿ ನೀಡಿ ಅವರನ್ನು ಹೆದರಿಸಿತ್ತು.ಅಲ್ಲದೆ ರವಿಶ೦ಕರ್ ಗುರೂಜಿ ಅವರ ಆರ್ಟ್ ಆಫ್ ಲೀವಿಂಗ್ ನಡೆಸುತ್ತಿರುವ ಸ್ವಯ೦ ಉದ್ಯೋಗ ತರಬೇತಿ ಬಗ್ಗೆಯೂ ಕಿಡಿಕಾರಿದ್ದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X