ಶೃಂಗೇರಿಯಲ್ಲಿ ಇಬ್ಬರು ನಕ್ಸಲರು ಗುಂಡಿಗೆ ಬಲಿ

ಗೋಪಾಲ್ ಹೊಸೂರ್ ನೇತೃತ್ವದ ನಕ್ಸಲ್ ನಿಗ್ರಹ ಪಡೆ ನಿಖರ ಮಾಹಿತಿಯ ಮೇರೆಗೆ ಕಾರ್ಯಾಚರಣೆ ಆರಂಭಿಸಿ, ಇಬ್ಬರು ನಕ್ಸಲರನ್ನು ಕೊಲ್ಲುವಲ್ಲಿ ಯಶಸ್ವಿಯಾಗಿದೆ. ಸುಮಾರು 20ಕ್ಕೂ ಹೆಚ್ಚು ಜನರಿಂದ ಸಶಸ್ತ್ರ ನಕ್ಸಲ್ ಪಡೆಯ ಮೇಲೆ ಗುಂಡಿನ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಕೊಂದು ನಾಲ್ವರನ್ನು ಗಾಯಗೊಳಿಸಿದ್ದಾರೆ.
ಕೆಳ ದಿನಗಳ ಹಿಂದೆ ಬಿಜಿ ಕೃಷ್ಣಮೂರ್ತಿ ನೇತೃತ್ವದ 20 ಜನರ ಶಸ್ತ್ರಸಜ್ಜಿತ ನಕ್ಸಲರ ತ೦ಡ ಕಿಗ್ಗಾ ಬಳಿಯ ಹುಲಿಗಾರ್ ಬೈಲಿನಲ್ಲಿರುವ ಶಾನುಭೋಗ ನರಸಿ೦ಹಸ್ವಾಮಿ ಅವರ ಮನೆಗೆ ಭೇಟಿ ನೀಡಿ ಅವರನ್ನು ಹೆದರಿಸಿತ್ತು.ಅಲ್ಲದೆ ರವಿಶ೦ಕರ್ ಗುರೂಜಿ ಅವರ ಆರ್ಟ್ ಆಫ್ ಲೀವಿಂಗ್ ನಡೆಸುತ್ತಿರುವ ಸ್ವಯ೦ ಉದ್ಯೋಗ ತರಬೇತಿ ಬಗ್ಗೆಯೂ ಕಿಡಿಕಾರಿದ್ದರು.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications