ಗುಜರಾತ್ ನಲ್ಲಿ ಜಸ್ವಂತ್ ಸಿಂಗ್ ಪುಸ್ತಕ ನಿಷೇಧ

Jaswanth Singh
ಅಹಮದಾಬಾದ್, ನವದೆಹಲಿ, ಆ. 20 : ತಮ್ಮ ಪುಸ್ತಕದಲ್ಲಿ ಜಿನ್ನಾ ಪ್ರಶಂಸಿಸಿರುವ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿಯಿಂದ ಜಸ್ವಂತ್ ಸಿಂಗ್ ಉಚ್ಚಾಟನೆಗೊಂಡ ಬೆನ್ನಲ್ಲೇ ಸರ್ದಾರ್ ಪಟೇಲ್ ಅವರನ್ನು ಪುಸ್ತಕದಲ್ಲಿ ಅವಹೇಳನ ಮಾಡಲಾಗಿದೆ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಜಿನ್ನಾ ಇಂಡಿಯಾ ಪಾರ್ಟಿಶನ್ ಇಂಡಿಪೆಂಡೆಂನ್ಸ್ ಪುಸ್ತಕವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಮೋದಿ ಕ್ರಮಕ್ಕ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಜಸ್ವಂತ್ ಸಿಂಗ್, ಇದು ಬೇರೊಬ್ಬರ ಸ್ವಾತಂತ್ರ್ಯವನ್ನು ಹತ್ತಿಕ್ಕುವ ತಂತ್ರ ಎಂದು ಕಿಡಿಕಾರಿದ್ದಾರೆ.

ಈ ಕುರಿತು ಸ್ಪಷ್ಟನೆ ನೀಡಿರುವ ಗುಜರಾತ್ ಸರಕಾರದ ವಕ್ತಾರ ಜಯ ನಾರಾಯಣ ವ್ಯಾಸ್, ಜಸ್ವಂತ್ ಸಿಂಗ್ ಬರೆದಿರುವ ಪುಸ್ತಕ ಜಿನ್ನಾ ಇಂಡಿಯಾ ಪಾರ್ಟಿಶನ್ ಇಂಡಿಪೆಂಡೆನ್ಸ್ ಪುಸ್ತಕದ ಮಾರಾಟ ಹಾಗೂ ಆಮದು ಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸುವಂತೆ ಆದೇಶ ನೀಡಲಾಗಿದೆ. ಸ್ವಾತಂತ್ರ್ಯ ಹೋರಾಟಗಾರ ಹಾಗೂ ಹಿರಿಯ ರಾಜಕಾರಣಿ ಸರ್ದಾರ್ ಪಟೇಲ್ ಅವರನ್ನು ಪುಸ್ತಕದಲ್ಲಿ ಅವಹೇಳನ ಮಾಡಲಾಗಿದೆ. ಭಾರತದ ವಿಭಜನೆಗೆ ಪಟೇಲ್ ಕೂಡಾ ಕಾರಣ ಎಂದು ಬರೆಯಲಾಗಿದೆ. ಆದ್ದರಿಂದ ಈ ಕ್ರಮಕೈಗೊಳ್ಳಲಾಗಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

ಜಸ್ವಂತ್ ಸಿಂಗ್ ಕಿಡಿಕಿಡಿ

ಗುಜರಾತ್ ಸರಕಾರ ನನ್ನ ಪುಸ್ತಕವನ್ನು ನಿಷೇಧಿಸಿರುವುದು ಅತ್ಯಂತ ವಿಷಾದಕರ ಸಂಗತಿ. ವೈಚಾರಿಕ ಬರವಣಿಗೆಗೆ ನಿಷೇಧ ಹೇರುವುದು ಎಲ್ಲಿಯ ನ್ಯಾಯ ಎಂದು ಪ್ರಶ್ನಿಸಿದ್ದಾರೆ. ಇಸ್ಲಾಂ ಧರ್ಮದ ವಿರುದ್ದ ಬರೆದಿದ್ದಾರೆ ಎನ್ನಲಾದ ಸಲ್ಮಾನ್ ರಶ್ದಿ ಅವರ ಸಟಾನಿಕ್ ವರ್ಸಸ್ ಕೂಡಾ ಇಂತಹ ಜನರಿಂದಲೇ ನಿಷೇಧಕ್ಕೆ ಒಳಗಾಗಬೇಕಾಯಿತು ಎಂದು ದಾರ್ಜಿಲಿಂಗ್ ಸಂಸದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+