ಗುಜರಾತ್ ನಲ್ಲಿ ಜಸ್ವಂತ್ ಸಿಂಗ್ ಪುಸ್ತಕ ನಿಷೇಧ

ಈ ಕುರಿತು ಸ್ಪಷ್ಟನೆ ನೀಡಿರುವ ಗುಜರಾತ್ ಸರಕಾರದ ವಕ್ತಾರ ಜಯ ನಾರಾಯಣ ವ್ಯಾಸ್, ಜಸ್ವಂತ್ ಸಿಂಗ್ ಬರೆದಿರುವ ಪುಸ್ತಕ ಜಿನ್ನಾ ಇಂಡಿಯಾ ಪಾರ್ಟಿಶನ್ ಇಂಡಿಪೆಂಡೆನ್ಸ್ ಪುಸ್ತಕದ ಮಾರಾಟ ಹಾಗೂ ಆಮದು ಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸುವಂತೆ ಆದೇಶ ನೀಡಲಾಗಿದೆ. ಸ್ವಾತಂತ್ರ್ಯ ಹೋರಾಟಗಾರ ಹಾಗೂ ಹಿರಿಯ ರಾಜಕಾರಣಿ ಸರ್ದಾರ್ ಪಟೇಲ್ ಅವರನ್ನು ಪುಸ್ತಕದಲ್ಲಿ ಅವಹೇಳನ ಮಾಡಲಾಗಿದೆ. ಭಾರತದ ವಿಭಜನೆಗೆ ಪಟೇಲ್ ಕೂಡಾ ಕಾರಣ ಎಂದು ಬರೆಯಲಾಗಿದೆ. ಆದ್ದರಿಂದ ಈ ಕ್ರಮಕೈಗೊಳ್ಳಲಾಗಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
ಜಸ್ವಂತ್ ಸಿಂಗ್ ಕಿಡಿಕಿಡಿ
ಗುಜರಾತ್ ಸರಕಾರ ನನ್ನ ಪುಸ್ತಕವನ್ನು ನಿಷೇಧಿಸಿರುವುದು ಅತ್ಯಂತ ವಿಷಾದಕರ ಸಂಗತಿ. ವೈಚಾರಿಕ ಬರವಣಿಗೆಗೆ ನಿಷೇಧ ಹೇರುವುದು ಎಲ್ಲಿಯ ನ್ಯಾಯ ಎಂದು ಪ್ರಶ್ನಿಸಿದ್ದಾರೆ. ಇಸ್ಲಾಂ ಧರ್ಮದ ವಿರುದ್ದ ಬರೆದಿದ್ದಾರೆ ಎನ್ನಲಾದ ಸಲ್ಮಾನ್ ರಶ್ದಿ ಅವರ ಸಟಾನಿಕ್ ವರ್ಸಸ್ ಕೂಡಾ ಇಂತಹ ಜನರಿಂದಲೇ ನಿಷೇಧಕ್ಕೆ ಒಳಗಾಗಬೇಕಾಯಿತು ಎಂದು ದಾರ್ಜಿಲಿಂಗ್ ಸಂಸದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
(ಏಜನ್ಸೀಸ್)












Click it and Unblock the Notifications