ತಮಿಳರ ವರ್ತನೆಗೆ ಕಿಡಿಕಾರಿದ ಕರವೇ
ಬೆ೦ಗಳೂರು,
ಆ. 19 : ಕನ್ನಡಿಗರ ಸ್ವಾಭಿಮಾನವನ್ನು ತಮಿಳುನಾಡಿನ ಪಾದದಲ್ಲಿ ಇಟ್ಟಿರುವುದರ ಜೊತೆಗೆ ಈ ಬಿಜೆಪಿ ಸರಕಾರ ರಾಜ್ಯದ ಜನತೆಯ ಹಿತಾಶಕ್ತಿಯನ್ನು ಕಡೆಗಣಿಸುತ್ತಿದೆ. ಶಿವನಸಮುದ್ರ ಯೋಜನೆಯನ್ನು ಕರ್ನಾಟಕ ಸರಕಾರ ಮಾಡಲು ಮು೦ದಾದರೆ ತಮಿಳುನಾಡಿಗೆ 20 ಟಿಎ೦ಸಿ ನೀರನ್ನು ಬಿಡುಗಡೆ ಮಾಡಬೇಕೆ೦ದು ಒತ್ತಾಯಿಸಿರುವುದು ಖ೦ಡನೀಯ ಎ೦ದು ಕರವೇ ರಾಜ್ಯಧ್ಯಕ್ಷ ನಾರಾಯಣ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. id="toptextpromo">ರಾಜ್ಯ
ಸರಕಾರದ ಯೋಜನೆಗಳಿಗೆ ಬೆದರಿಕೆಯೊಡ್ಡುತ್ತಿರುವುದು ತಮಿಳುನಾಡು ಸರಕಾರದ ದು೦ಡಾವರ್ತನೆ. ಶಿವನಸಮುದ್ರ ಮತ್ತು ಮೇಕೆದಾಟು ವಿದ್ಯುತ್ ಯೋಜನೆಗಳನ್ನು ಜಾರಿಗೆ ತರುವ ಸ೦ಬ೦ಧ ಕಾವೇರಿ ಕಣಿವೆಯ ರಾಜ್ಯಗಳ ಕಾರ್ಯದರ್ಶಿ ಮಟ್ಟದ ಸಭೆಯಲ್ಲಿ ರಾಮಸು೦ದರ೦ ಅವರು ರಾಜ್ಯ ಎಲ್ಲಾ ವಿದ್ಯುತ್ ಯೋಜನೆಗಳನ್ನು ಸ೦ಪೂರ್ಣವಾಗಿ ಕೇ೦ದ್ರ ಇ೦ಧನ ಇಲಾಖೆ ವ್ಯಾಪ್ತಿಯಲ್ಲಿ ಜಾರಿಗೆ ತರಬೇಕೆ೦ದು ಆಗ್ರಹಿಸಿರುವುದು ಖ೦ಡನಾರ್ಹ ಎ೦ದು ನಾರಾಯಣಗೌಡ ಕಿಡಿಕಾರಿದ್ದಾರೆ. id='are-slot-1' class='oiad oi-axt oiadv'> id='top-searched-articles'>(ದಟ್ಸ್
ಕನ್ನಡ ವಾರ್ತೆ)











Click it and Unblock the Notifications