ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೆಂಗಳೂರು : ಎಚ್1ಎನ್1ಗೆ ಆರನೇ ಬಲಿ
ಸಿವಿ ರಾಮನ್ ನಗರ ನಿವಾಸಿ ಮಂಜುನಾಥ್ (20) ಮೃತಪಟ್ಟ ದುರ್ದೈವಿ. ಕಳೆದ ನಾಲ್ಕು ದಿನಗಳಿಂದ ಮಂಜುನಾಥ್ ಜ್ವರದ ಬಾಧೆಯಿಂದ ಬಳಲುತ್ತಿದ್ದ. ಜ್ವರ ತಾಪ ಹೆಚ್ಚಾಗಿದ್ದರಿಂದ ಆತನ ಪೋಷಕರು ಆತನನ್ನು ರಾಜೀವ ಗಾಂಧಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಆ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಕೊರತೆ ಇರುವ ಕಾರಣ ಮಂಜುನಾಥ್ ನನ್ನು ವಿಕ್ಟೋರಿಯಾ ಆಸ್ಪತ್ಪೆಗೆ ದಾಖಲಿಸಿ ಎಂದು ವೈದ್ಯರು ತಿಳಿಸಿದ್ದಾರೆ.
ಮಂಜುನಾಥ್ ನನ್ನು ವಿಕ್ಟೋರಿಯಾ ಆಸ್ಪತ್ರೆಯ ಎಚ್ 1ಎನ್1 ವಾರ್ಡ್ ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮಂಜುನಾಥ್ ಮೃತಪಟ್ಟಿದ್ದಾನೆ. ಆದರೆ, ಮಂಜುನಾಥ್ ನನ್ನು ತಪಾಸಣೆ ಮಾಡಿದ ವೈದ್ಯರ ಪ್ರಕಾರ ಎಚ್1ಎನ್1 ಸೋಂಕಿನಿಂದಲೇ ಸಾವನ್ನಪ್ಪಿದ್ದಾನೆ. ಆದರೆ, ವಿಕ್ಟೋರಿಯಾ ಆಸ್ಪತ್ರೆಗೆ ಸೂಪರಿಟೆಂಡೆಂಟ್ ಮಾತ್ರ ಮಂಜುನಾಥನ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ ಎಂದಷ್ಟೇ ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Tuesday, August 18, 2009, 19:01 [IST]