ಜಿನ್ನಾ ಗುಣಗಾನ, ಈಗ ಜಸ್ವಂತ್ ಸಿಂಗ್ ಸರದಿ

ಜವಹರ್ ಲಾಲ್ ನೆಹರೂ ಅವರಿಗೆ ಕೇಂದ್ರೀಕೃತ ವ್ಯವಸ್ಥೆಯಲ್ಲಿ ಇದ್ದ ನಂಬಿಕೆಯಿಂದಾಗಿ ದೇಶ ವಿಭಜನೆಯಾಯಿತಾದರೂ ಭಾರತದಲ್ಲಿ ಜಿನ್ನಾ ಅವರ ಬಗ್ಗೆ ಕೆಟ್ಟ ಭಾವನೆ ಮೂಡಿಸಲಾಗಿದೆ. ಭಾರತದಲ್ಲಿ ಮುಸ್ಲಿಂ ಬಾಂಧವರನ್ನು ಹೊರಗಿನವರಂತೆ ಕಾಣಲಾಗುತ್ತಿದೆ ಎಂದು ಕರಣ್ ಥಾಪರ್ ಅವರಿಗೆ ನೀಡಿದ ಸಂದರ್ಶನದಲ್ಲಿ ಜಸ್ವಂತ್ ವಿಷಾದ ವ್ಯಕ್ತಪಡಿಸಿದ್ದಾರೆ.
ಇಂದು ಬಿಡುಗಡೆಗೊಳ್ಳಲಿರುವ ಜಿನ್ನಾ - ಇಂಡಿಯಾ,ಪಾರ್ಟಿ ಇಂಡಿಪೆಂಡನ್ಸ್ ಎಂಬ ಗ್ರಣ್ಥದ ಚರ್ಚೆಯಲ್ಲಿ ಅವರು ಭಾಗವಹಿಸಿದ್ದರು.ಕಾಂಗ್ರೆಸ್ ಪಕ್ಷದ ಬೃಹತ್ ಬಲದೆದುರು ಏಕಾಂಗಿಯಾಗಿ ಸವಾಲೆಸೆದ ಜಿನ್ನಾ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾದರು. ಜಿನ್ನಾ ಅವರನ್ನು ಮಹಾತ್ಮ ಗಾಂಧಿಜಿಯವರೇ ಮಹಾನ್ ಭಾರತೀಯ ಎಂದು ಪ್ರಶಂಸಿಸಿದ್ದರು. ಗಾಂಧೀಜಿಯವರು ಏಕೆ ಈ ರೀತಿ ಪ್ರಶಂಸೆ ಮಾಡಿದರೆಂಬುದನ್ನು ನಾವೇಕೆ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಜಸ್ವಂತ್ ಸಿಂಗ್ ಪ್ರಶ್ನಿಸಿದರು .
(ಏಜನ್ಸೀಸ್)












Click it and Unblock the Notifications