ಭಾಷಾ ಮಾಧ್ಯಮ ವಿವಾದ ಹೊಸ ತಿರುವು

ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿರುವ ಸುಪ್ರೀಂಕೋರ್ಟ್ ನಿಲುವಿನ ಬೆನ್ನಲ್ಲೇ ಸಾಹಿತಿಗಳು ಈ ಅರ್ಜಿ ಸಲ್ಲಿಸಿದ್ದಾರೆ. ಖ್ಯಾತ ಸಾಹಿತಿಗಳಾದ ಚಿದಾನಂದಮೂರ್ತಿ, ಯು ಆರ್ ಅನಂತಮೂರ್ತಿ, ನಿಸಾರ್ ಅಹಮದ್, ಎಲ್ ಎಸ್ ಶೇಷಗಿರಿರಾವ್, ಚಂಪಾ, ನಲ್ಲೂರು ಪ್ರಸಾದ್ ಸೇರಿದಂತೆ 15 ಸಾಹಿತಿಗಳು ಒಟ್ಟಾಗಿ ಅರ್ಜಿ ಸಲ್ಲಿಸಿದ್ದಾರೆ.
ಪ್ರಾಥಮಿಕ ಶಾಲಾ ಹಂತದಲ್ಲಿ ಕನ್ನಡ ಕಡ್ಡಾಯ ಮಾಧ್ಯಮ ಎಂದಿರುವ ಸರಕಾರದ ಕ್ರಮ ಸರಿಯಾಗಿದೆ. ರಾಜ್ಯದ ಜನರಿಗೆ ಕನ್ನಡ ಭಾಷೆಯೊಂದಿಗೆ ಭಾವನಾತ್ಮಕ ಸಂಬಂಧವಿದೆ. ಎಲ್ಲಾ ಸರಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮವಿರುವುದರಿಂದ ಎಲ್ಲರಿಗೂ ಮಾತೃ ಶಿಕ್ಷಣ ದೊರಕಬೇಕು ಎಂದು ಸಾಹಿತಿಗಳು ಅರ್ಜಿಯಲ್ಲಿ ಪ್ರತಿಪಾದಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications