ಗಂಗಜ್ಜಿ ನಿಧನ, ಯಡಿಯೂರಪ್ಪ ಶೋಕ

ಗಂಗೂಬಾಯಿ ಅವರ ಅಂತ್ಯಕ್ರಿಯೆನ್ನು ಸಕಲ ಸರಕಾರಿ ಮರ್ಯಾದೆಗಳೊಂದಿಗೆ ನೆರವೇರಿಸಲಾಗುವುದು. ಹುಬ್ಬಳ್ಳಿಯ ಕೇಶ್ವಾಪುರದಲ್ಲಿರುವ ಮುಕ್ತಿಧಾಮವನ್ನು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಕೇಂದ್ರವನ್ನಾಗಿ ಸರಕಾರ ರೂಪಿಸಲಿದೆ ಎಂದರು. ಗಂಗೂಬಾಯಿ ಹಾನಗಲ್ ಅವರ ಪುತ್ಥಳಿಯನ್ನು ನಗರದ ಪ್ರಮುಖ ಸ್ಥಳದಲ್ಲಿ ಸ್ಥಾಪಿಸಲಾಗುವುದು ಎಂದು ಹೇಳಿದರು. ಇಂದು ಮಧ್ಯಾಹ್ನ 12 ಗಂಟೆಯಿಂದ ಸಂಜೆ 5 ಗಂಟೆವರೆಗೆ ಅವರ ಸ್ವಗೃಹ ಗಂಗಾಲಹರಿಯಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ಬುಧವಾರ ಬೆಳಗ್ಗೆ ಗಂಗಜ್ಜಿಯ ಅಂತ್ಯಕ್ರಿಯೆಯನ್ನು ಮುಕ್ತಿಧಾಮದಲ್ಲಿ ನೆರವೇರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಅಜ್ಜಿಯ ಜೀವನಾಧಾರಿತ 'ನನ್ನ ಬದುಕಿನ ಹಾಡು' ಪುಸ್ತಕ ಇಂದು ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ, ವಿಧಿಯ ಲೆಕ್ಕಾಚಾರನೇ ಬೇರೆಯಾಗಿತ್ತು ಎಂದು ಗಂಗೂಬಾಯಿ ಹಾನಗಲ್ ಅವರ ಮೊಮ್ಮಗ ಮನೋಜ್ ಹಾನಗಲ್ ಅವರ ದುಃಖದಿಂದ ಹೇಳಿದರು.
ಗಂಗೂಬಾಯಿ ಹಾನಗಲ್ ಮಹಾನ್ ಮಾನವತಾವದಿ ವ್ಯಕ್ತಿತ್ವ ಧೀಮಂತೆ. ನಾನು ಅನೇಕ ಸಂಗೀತ ಕಲಾವಿದರನ್ನು ನೋಡಿರುವೆ. ಆದರೆ, ಗಂಗಮ್ಮನಂತಹ ಮುಗ್ಧ ಮನಸ್ಸನ್ನು ಬೇರೆ ಯಾರಲ್ಲಿಯೂ ಕಾಣಲಿಲ್ಲ. ಆದರೆ ಒಂದು ಬೇಸರದ ಸಂಗತಿ ಎಂದರೆ, ಗಂಗೂಬಾಯಿಗೆ ಭಾರತತ್ನ ಸಿಗಬೇಕಿತ್ತು. ಆದರೆ, ಕೇಂದ್ರ ಸರಕಾರ ಅದಕ್ಕೆ ಮನಸ್ಸು ಮಾಡದಿರುವುದು ವಿಪರ್ಯಾಸ ಎಂದು ಹಿರಿಯ ಪತ್ರಕರ್ತ ಪಾಟೀಲ್ ಪುಟ್ಟಪ್ಪ ನೋವಿನಿಂದ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications