ತಿರುವಳ್ಳುವರ್ ಪ್ರತಿಮೆಗೆ ಷರತ್ತುಬದ್ಧಅವಕಾಶ, ಕರವೇ

ಬೆಂಗಳೂರಿನ ಹೃದಯ ಭಾಗದಲ್ಲಿ ತಿರುವಳ್ಳುವರ್ ಪ್ರತಿಮೆ ಅನಾವರಣಕ್ಕೆ ಸರಕಾರ ಜಾಗ ನೀಡಿದೆ. ಅದೇ ರೀತಿ ಚೆನ್ನೈ ನಗರದ ಮುಖ್ಯ ರಸ್ತೆಯಲ್ಲಿ ಸರ್ವಜ್ಞ ಪ್ರತಿಮೆ ಅನಾವರಣಕ್ಕೆ ತಮಿಳುನಾಡು ಸರಕಾರ ಅನುಮತಿ ನೀಡಬೇಕು. ಅದು ಬಿಟ್ಟು ಚೆನ್ನೈ ನ ಕನ್ನಡ ಸಂಘದ ಜಾಗದಲ್ಲಿ ಪ್ರತಿಮೆ ಅನಾವರಣಗೊಳಿಸಿದರೆ ಯಾವ ಕಾರಣಕ್ಕೂ ಕರವೇ ಇಲ್ಲಿ ತಿರುವಳ್ಳುವರ್ ಪ್ರತಿಮೆ ಅನಾವರಣಕ್ಕೆ ಅವಕಾಶ ನೀಡುವುದಿಲ್ಲ. ಈ ಬಗ್ಗೆ ಚರ್ಚಿಸಲು ಎಲ್ಲಾ ಕನ್ನಡಪರ ಸಂಘಟನೆಗಳ ಸಭೆ ಇದೇ 19 ರಂದು ಕರೆಯಲಾಗಿದೆ.
ಮುಖ್ಯಮಂತ್ರಿಗಳು ರಾತ್ರೋರಾತ್ರಿ ರಾಜಕೀಯ ದುರುದ್ದೇಶದಿಂದ ಕರುಣಾನಿಧಿ ಅವರನ್ನು ರಹಸ್ಯವಾಗಿ ಭೇಟಿ ಮಾಡಿ ಪ್ರತಿಮೆ ಸ್ಥಾಪನೆಗೆ ಒಪ್ಪಿಗೆ ಸೂಚಿಸಿದ್ದಾರೆ. ಈ ವಿಚಾರದಲ್ಲಿ ಚೆನ್ನೈನಲ್ಲಿರುವ ಕನ್ನಡ ಸಂಘಟನೆಗಳನ್ನು ಕೂಡ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ನೆರೆಯ ರಾಜ್ಯದೊಂದಿಗೆ ಪ್ರೀತಿ, ವಿಶ್ವಾಸದಿಂದ ನಡೆದುಕೊಳ್ಳುವ ಕನಿಷ್ಟ ಸೌಜನ್ಯ ತಮಿಳುನಾಡಿಗೆ ಇಲ್ಲ. ಕರ್ನಾಟಕದೊಂದಿಗೆ ಪದೇಪದೇ ಜಗಳಕ್ಕೆ ಬರುತ್ತಿರುವ ತಮಿಳುನಾಡು ಕವಿಯ ಪ್ರತಿಮೆ ಅನಾವರಣಕ್ಕೆ ಅವಕಾಶ ನೀಡುವ ಉದ್ದೇಶವಾದರೂ ಏನು ಎಂದು ನಾರಾಯಣಗೌಡ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications