ಸುರಂಜನ ಸಿಇಒ; ವಿದ್ಯಾಶಂಕರ್ಗೆ ಇ-ಆಡಳಿತದ ಹೊಣೆ
ಬೆಂಗಳೂರು,ಜೂ, 30 : ರಾಜ್ಯ ಮುಖ್ಯ ಚುನಾವಣಾಧಿಕಾರಿ ಹುದ್ದೆಗೆ ಐಎಎಸ್ ಅಧಿಕಾರಿ ಸಿ ಎಸ್ ಸುರಂಜನ ಅವರನ್ನು ವರ್ಗಾಯಿಸಿ ಸರಕಾರ ಸೋಮವಾರ ಆದೇಶ ಹೊರಡಿಸಿದೆ.
ಮುಖ್ಯ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಎಂ ಎನ್ ವಿದ್ಯಾಶಂಕರ್ ಅವರನ್ನು ಇ-ಆಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ವರ್ಗಾಯಿಸಲಾಗಿದೆ. ಇನ್ನೂ ಐವರು ಐಎಎಸ್ ಅಧಿಕಾರಿಗಳನ್ನು ವರ್ಗಾಯಿಸಿ ಸರಕಾರ ಆದೇಶ ಹೊರಡಿಸಿದ್ದು ವಿವರ ಇಂತಿದೆ. ಬಿ.ಎಲ್. ಶ್ರೀಧರ್-ವ್ಯವಸ್ಥಾಪಕ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ನಿಗಮ, ವಂದಿತಾ ಶರ್ಮಾ-ವಿಶೇಷ ಯೋಜನಾ ಆಡಳಿತಾಧಿಕಾರಿ, ಆರೋಗ್ಯ ವ್ಯವಸ್ಥೆ ಸುಧಾರಣೆ ಇಲಾಖೆ, ರಮೇಶ್ ಬಿ. ಝಳಕಿ-ಕಾರ್ಯದರ್ಶಿ, ಕಾರ್ಮಿಕ ಇಲಾಖೆ. ಎಸ್.ಆರ್.ಉಮಾಶಂಕರ್-ಆಯುಕ್ತರು, ಉದ್ಯೋಗ ಮತ್ತು ತರಬೇತಿ ಇಲಾಖೆ, ಪಿ.ಎಸ್. ವಸ್ತ್ರದ್-ಆಯುಕ್ತರು, ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications