ಹೊನ್ನಾಳಿ ಶಾಸಕ ರೇಣುಕಾಚಾರ್ಯ ಬಂಧನ
ಹಿಂದೂ ವಿರೋಧಿ ಭಾಷಣಕಾರರ ವಿರುದ್ಧ ಕಿಡಿಕಾರಿದ್ದ ಶಾಸಕ ರೇಣುಕಾಚಾರ್ಯ ಅವರು, ಹಿಂದೂ ವಿರೋಧಿ ಹೇಳಿಕೆ ನೀಡುವವರ ತಲೆ ಕತ್ತರಿಸಬೇಕು ಎಂದು ಅಬ್ಬರಿಸಿದ್ದರು.ಇದಕ್ಕೂ ಮುನ್ನ ಕಾಂಗ್ರೆಸ್ ಮುಖಂಡ ಕಾಗೋಡು ತಿಮ್ಮಪ್ಪ ಅವರು ಮುಸ್ಲಿಂ ವಿರೋಧಿಗಳ ಕೈ ಕತ್ತರಿಸಬೇಕು ಎಂದು ಹೇಳಿಕೆ ನೀಡಿದ್ದರು. ಅದಕ್ಕೆ ಪ್ರತಿಯಾಗಿ ರೇಣುಕಾಚಾರ್ಯ ಅವರು ಗುಡುಗಿದ್ದರು. ಈ ಸಂಬಂಧ ದಾವಣಗೆರೆ ಪೊಲೀಸರು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ನೀತಿ ಸಂಹಿತೆ ಉಲ್ಲಂಘನೆ, ಪ್ರಚೋದನಾಕಾರಿ ಹೇಳೀಕೆ ಆಧಾರದ ಮೇಲೆ ನ್ಯಾಯಾಲಯ ಬಂಧನದ ವಾರೆಂಟ್ ಹೊರಡಿಸಿತ್ತು.
ಇದಕ್ಕೆ ಪೂರಕವಾಗಿ ರೇಣುಕಾಚಾರ್ಯ ಅವರು ನಿರೀಕ್ಷಣಾ ಜಾಮೀನು ನೀಡುವಂತೆ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಶಾಸಕರ ಜಾಮೀನು ಅರ್ಜಿಯನ್ನು ಹೈಕೋರ್ಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಇಂದು ರೇಣುಕಾಚಾರ್ಯ ಅವರನ್ನು ದಾವಣಗೆರೆ ಎಸ್ಪಿ ಸಂದೀಪ್ ಪಾಟೀಲ್ ಬಂಧಿಸಿದ್ದಾರೆ.
ಹೊನ್ನಾಳಿಯಲ್ಲಿ
ಅಘೋಷಿತ
ಬಂದ್
ಶಾಸಕ
ರೇಣುಕಾಚಾರ್ಯ
ಅವರ
ಬಂಧನದ
ಸುದ್ದಿ
ಕೇಳುತ್ತಿದ್ದಂತೆ
ಅವರ
ಕ್ಷೇತ್ರ
ಹೊನ್ನಾಳಿಯಲ್ಲಿ
ಪ್ರಕ್ಷುಬ್ದ
ವಾತಾವರಣ
ನಿರ್ಮಾಣವಾಗಿದೆ.
ನೂರಾರು
ಜನ
ಸಂಘಪರಿವಾರದ
ಸದಸ್ಯರು
ಹಾಗೂ
ಬಿಜೆಪಿ
ಕಾರ್ಯಕರ್ತರು
ಶಾಸಕರ
ಬಂಧನವನ್ನು
ವಿರೋಧಿಸಿ
ಬೀದಿಗಿಳಿದು
ಪ್ರತಿಭಟನೆ
ನಡೆಸಿದ್ದಾರೆ.
ಅಂಗಡಿ
ಮುಂಗಟ್ಟುಗಳು
ಮುಚ್ಚಿದ್ದು,
ಸಂಚಾರ
ವ್ಯವಸ್ಥೆ
ಅಸ್ತವ್ಯಸ್ತವಾಗಿದೆ.
ಬೂದಿಮುಚ್ಚಿದ
ಕೆಂಡದಂತೆ
ಪರಿಸ್ಥಿತಿ
ಗೋಚರಿಸುತ್ತಿದ್ದು,
ಯಾವುದೇ
ಅಹಿತಕರ
ಘಟನೆಗಳು
ಜರುಗದಂತೆ
ಎಚ್ಚರಿಕೆ
ವಹಿಸಲಾಗಿದೆ
ಎಂದು
ಪೊಲೀಸ್
ವರಿಷ್ಠಾಧಿಕಾರಿಗಳು
ಹೇಳಿದರು.
(ದಟ್ಸ್ ಕನ್ನಡ ವಾರ್ತೆ)