ಅಡ್ವಾಣಿ ಹೇರ್ ಕಟ್ ಮಾಡಿದ ಕ್ಷೌರಿಕ ದಿನೇಶ್

ರೆಸಾರ್ಟ್ ನಲ್ಲಿ ವಿಶ್ವಾಂತಿಗಾಗಿ ಕುಟುಂಬದೊಂದಿಗೆ ವಾಸ್ತವ್ಯ ಹೂಡಿರುವ ಅಡ್ವಾಣಿ, ಗುರುವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಸಿದ್ದಾಪುರದ ಕ್ಷೌರಿಕನನ್ನು ರೆಸಾರ್ಟ್ ಗೆ ಕರೆಸಿಕೊಂಡು ಹೇರ್ ಕಟಿಂಗ್ ಮಾಡಿಸಿಕೊಂಡರು. ಇದಕ್ಕಾಗಿ ಕ್ಷೌರಿಕನಿಗೆ ಅಡ್ವಾಣಿ ನೀಡಿದ ಹಣ 500 ರುಪಾಯಿ. ಇಂತಹ ಅಪರೂಪದ ಕ್ಷಣದಿಂದ ಪುಳಕಿರಾಗಿ ಪ್ರತಿಕ್ರಿಯೆ ನೀಡಿರುವ ದಿನೇಶ್, ಇಂತಹ ಭಾಗ್ಯ ಸಿಗುತ್ತದೆ ಎಂದು ಯೋಚಿಸಿರಲಿಲ್ಲ. 25 ವರ್ಷಗಳಿಂದ ಈ ವೃತ್ತಿಯಲ್ಲಿರುವ ನನಗೆ ಅಡ್ವಾಣಿ ಅವರ ಹೇರ್ ಕಟಿಂಗ್ ಮಾಡಿದ ಅನುಭವ ಮರೆಯಲಾರದ ಕ್ಷಣವಾಗಿ ಉಳಿಯಲಿದೆ ಎಂದಿದ್ದಾರೆ.
ನನ್ನ ವೃತ್ತಿ ಜೀವನ ಮಾಹಿತಿ ಪಡೆದ ಅಡ್ವಾಣಿಜೀ ನನ್ನ ಮಕ್ಕಳ ವಿದ್ಯಾಭ್ಯಾಸ ಹಾಗೂ ವೈಯಕ್ತಿಕ ಜೀವನದ ಬಗ್ಗೆಯೂ ತಿಳಿದುಕೊಂಡರು. ಅವರು ಹಿಂದಿಯಲ್ಲಿ ಕೇಳಿದ ಪ್ರಶ್ನೆಗೆ ನಾನು ಕನ್ನಡದಲ್ಲಿ ನೀಡುತ್ತಿದ್ದೆ, ರೆಸಾರ್ಟ್ ಸಿಬ್ಬಂದಿ ಅದನ್ನು ಹಿಂದಿಯಲ್ಲಿ ಅವರಿಗೆ ಹೇಳುತ್ತಿದ್ದರು. ಅಡ್ವಾಣಿಜೀ ಅವರ ಕಟಿಂಗ್ ಮಾಡುವಾಗ ನನಗೆ ಯಾವ ಭಯವೂ ಆಗಲಿಲ್ಲ ಎಂದು ದಿನೇಶ್ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications