ಅವಿರತದಿಂದ ಸರಕಾರಿ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ

ಬೆಂಗಳೂರು ನಗರದಿಂದ ಶನಿವಾರ ಮುಂಜಾನೆ 60 ಸದಸ್ಯರ ತಂಡ ದೊಡ್ಡ ಆಲದಮರ ಸಮೀಪವಿರುವ ಹುಲವೇನಹಳ್ಳಿಗೆ ಪ್ರಯಾಣ ಬೆಳಸಿತು. ಹುಲವೇನಹಳ್ಳಿಯ ಶಾಲೆಯಲ್ಲಿ ಈ ಕೆಳಗಿನ ಶಾಲೆಯ ಶಿಕ್ಷಕರನ್ನೊಳಗೊಂಡಂತೆ ಊರಿನ ಪ್ರಮುಖರು ಸೇರಿ ಕಾರ್ಯಕ್ರಮಕ್ಕೆ ನಾಂದಿ ಹಾಡಿದರು.
ಕಾರ್ಯಕ್ರಮವನ್ನು ವಿದ್ಯುಕ್ತವಾಗಿ ಸ್ಥಳೀಯ ಶಿಕ್ಷಕರಾದ ನಾರಾಯಣಮೂರ್ತಿಯವರು ಅವಿರತ ಸದಸ್ಯರು ಮತ್ತು ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿ, ಅವಿರತ ಪ್ರತಿಷ್ಠಾನದ ಸಮಿತಿ ಹಾಗೂ ಸದಸ್ಯರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಹುಲವೇನಹಳ್ಳಿ ವ್ಯಾಪ್ತಿಗೆ ಬರುವ ಎಲ್ಲಾ 16 ಶಾಲೆಗಳ ಮೇಲ್ವಿಚಾರಕರಾದ ಕೆಂಪರಾಮಯ್ಯನವರು ಕಾರ್ಯಕ್ರಮಕ್ಕೆ ಮೆಚ್ಚುಗೆ ಮತ್ತು ಸಹಕಾರವನ್ನು ವ್ಯಕ್ತಪಡಿಸಿದಿರು.
ಈ ಕಾರ್ಯಕ್ರಮದ ಮುಖ್ಯ ರೂವಾರಿಗಳಾದ ಸತೀಶ್, ಸ್ವರ್ಣಲತಾ, ಡಾ|| ಹಿಮಾಂಶುರವರನ್ನು ನೆನಪಿಸಿಕೊಳ್ಳಲು ಕೆಂಪರಾಮಯ್ಯ ಮರೆಯಲಿಲ್ಲ. ಅವಿರತದ ಪರವಾಗಿ ಸತೀಶ್ ಮತ್ತು ಡಾ|| ರಾಜೀವ್ ಮಾತನಾಡಿ, ಈ ಕಾರ್ಯಕ್ರಮದ ಯಶಸ್ಸಿಗೆ ತನು ಮನ ಧನ ಧಾರೆ ಎರೆದ ಎಲ್ಲಾ ಸದಸ್ಯರನ್ನೂ ನೆನಪಿಸಿಕೊಂಡು ಧನ್ಯವಾದಗಳನ್ನರ್ಪಿಸಿದರು. ನಂತರ ಎಲ್ಲಾ ಸದಸ್ಯರನ್ನು ನಾಲ್ಕು ತಂಡಗಳನ್ನಾಗಿ ವಿಂಗಡಿಸಿ ಪ್ರತಿಯೊಂದು ತಂಡಕ್ಕೂ 4 ಶಾಲೆಗಳಿಗೆ ಹೋಗಿ ಪುಸ್ತಕ ವಿತರಿಸುವ ಜವಾಬ್ದಾರಿಯನ್ನು ಹೊರಿಸಲಾಯಿತು.
16 ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗಳು ಕೆಳಗಿನ ಗ್ರಾಮಗಳಲ್ಲಿವೆ.
1. ಹುಲವೇನಹಳ್ಳಿ
2. ಬ್ಯಲಾಳು
3. ಮಾದ ಪಟ್ಟಣ
4. ಚಿಕ್ಕನಹಳ್ಳಿ
5. ಗೊಲ್ಲಹಳ್ಳಿ
6. ಸೂಲಿವಾರು
7. ಕುರುಬರಹಳ್ಳಿ
8. ಹುಣ್ಣಿಗೆರೆ
9 ಬಸಮ್ಮನಹಳ್ಳಿ
10. ಆಲಮ್ಮನ ಪಾಳ್ಯ
11. ದೊನ್ನೇನ ಹಳ್ಳಿ
12. ಮಾಯಸಂದ್ರ
13. ಶಾಂತಿನಗರ
14. ಕಾಳಯ್ಯನ ಪಾಳ್ಯ
15. ಕೂಡುಸಿದ್ಧನ ಪಾಳ್ಯ
16. ಉದ್ದಂಡನಹಳ್ಳಿ
ನಂತರ ಸಮೀಪದಲ್ಲೇ ಇರುವ ಮಂಚನಬಲೆ ಅಣೆಕಟ್ಟಿಗೆ ಸದಸ್ಯರು ಪ್ರಯಾಣ ಬೆಳಸಿದರು. ನಗರದ ಸನಿಹದಲ್ಲೇ ಇಷ್ಟೊಂದು ಮನಮೋಹಕ ಪ್ರಶಾಂತವಾದ ತಾಣವಿರುವುದು ಅನೇಕರಿಗೆ ಅಚ್ಚರಿ ಹಾಗೂ ಸಡಗರ ತಂದಿತು. ಅರ್ಕಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಈ ಅಣೆಕಟ್ಟು ನಿಜಕ್ಕೂ ನಗರ ದೈನಂದಿನ ಜೀವನದಲ್ಲಿ ಜಡ್ಡುಗಟ್ಟಿ ಹೋಗಿದ್ದ ಅನೇಕ ಮನಸ್ಸುಗಳಿಗೆ ನವಚೈತನ್ಯವನ್ನು ತುಂಬಿ ಸಂಭ್ರಮವನ್ನುಂಟು ಮಾಡಿತು. ಕೆಲ ಕಾಲ ಅಲ್ಲಿ ಕಳೆದು ನಂತರ ಅವಿರತದ ಎಲ್ಲಾ ಸದಸ್ಯರು ನಗರಕ್ಕೆ ಹಿಂತಿರುಗಿದರು.
ಪುಸ್ತಕ ವಿತರಣಾ ಕಾರ್ಯಕ್ರಮದ ಮುಂದುವರಿದ ಭಾಗವಾಗಿ ಈ ಕೆಳಗೆ ತಿಳಿಸಿರುವ ಶಾಲೆಗಳಲ್ಲಿ ಬರುವ ವಾರಾಂತ್ಯಗಳಲ್ಲಿ ಪುಸ್ತಕ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
17. ಸರ್ಕಾರಿ ಪ್ರೌಢ ಶಾಲೆ, ಒಳಗೆರೆ ಪುರ, ಅಮೃತೂರು, ಕುಣಿಗಲ್ಲು.
18. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ನೆಲಮಂಗಲ.
19. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಬಾಣಗಾನ ಹಳ್ಳಿ ಬಡಾವಣೆ, ಚೆನ್ನಪಟ್ಟಣ.
20. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ರಾಮಪುರ, ದೊಡ್ಡಬಳ್ಳಾಪುರ.
21. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ರಾಯಸಮುದ್ರ, ಕೃಷ್ಣರಾಜಪೇಟೆ, ಮಂಡ್ಯ.
22. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಚಿನ್ನೇಹಹಳ್ಳಿ, ಕೃಷ್ಣರಾಜಪೇಟೆ, ಮಂಡ್ಯ.
23. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಯಳಂದೂರು, ಚಾಮರಾಜನಗರ
24. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಹಿರೇಕುಡಲಿಗೆ, ಹುನಗುಂದ, ಬಾಗಲಕೋಟೆ.
(ದಟ್ಸ್ ಕನ್ನಡ ವಾರ್ತೆ)
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion












Click it and Unblock the Notifications