ಅರಸೀಕೆರೆ -ಶ್ರವಣಬೆಳಗೊಳ ಪ್ಯಾಸೆಂಜರ್ ರೆಡಿ
ಹಾಸನ, ಜೂ. 18 : ರೈಲ್ವೆ ಖಾತೆ ರಾಜ್ಯ ಸಚಿವರಾಗಿ ಕೆ ಎಚ್ ಮುನಿಯಪ್ಪ ಅಧಿಕಾರ ಸ್ವೀಕರಿಸಿದ ನಂತರ ರಾಜ್ಯಕ್ಕೆ ಉಪಯೋಗವಾಗಲಿದೆ ಎಂದು ನಿರೀಕ್ಷಿಸಲಾಗಿದ್ದು, ಈ ಮಧ್ಯೆ ಅರಸೀಕೆರೆ -ಶ್ರವಣಬೆಳಗೊಳದ ನಡುವೆ ದಿನಕ್ಕೊಂದು ಬಾರಿ ಪ್ಯಾಸೆಂಜರ್ ರೈಲು ಸಂಚರಿಸಲಿದೆ ಎಂದು ಹುಬ್ಬಳ್ಳಿ ವಲಯದ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ ಎಂದ ಮೂಲಗಳು ತಿಳಿಸಿವೆ.
ಹಾಸನ - ಬೆಂಗಳೂರು ನಡುವೆ ರೈಲ್ವೆ ಮಾರ್ಗದ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರವೇ ಭೂಸ್ವಾಧೀನ ಕೆಲಸ ಪೂರ್ಣಗೊಂಡು ರೈಲ್ವೆ ಮಾರ್ಗದ ಕೆಲಸ ಆರಂಭವಾಗಲಿದೆ ಎಂದು ರೈಲ್ವೆ ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ಕೇಂದ್ರ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ತನ್ನ ಖಾತೆಯ ರಾಜ್ಯ ಸಚಿವ ಮುನಿಯಪ್ಪ ಅವರಿಗೆ ವಿಶೇಷ ಅಧಿಕಾರ ನೀಡಿದ್ದು ಕರ್ನಾಟಕ, ಗುಜರಾತ್, ಆಂಧ್ರಪ್ರದೇಶ, ರಾಜಸ್ಥಾನ, ಹಿಮಾಚಲಪ್ರದೇಶ, ಹರ್ಯಾಣ ಮತ್ತು ಮಧ್ಯಪ್ರದೇಶ ರಾಜ್ಯಗಳ ಜವಾಬ್ದಾರಿಯನ್ನು ವಹಿಸಿದ್ದಾರೆ. ಇಷ್ಟೇ ಅಲ್ಲದೆ ಮುನಿಯಪ್ಪ ಅವರಿಗೆ ರೈಲ್ವೆ ಸುರಕ್ಷತೆ, ಭದ್ರತೆ, ರೈಲ್ವೆ ಮೇಲ್ಸೇತುವೆ ಹಾಗು ಕೆಳಸೇತುವೆಗಳ ನಿರ್ಮಾಣ ಹೊಣೆ ಕೂಡ ಬ್ಯಾನರ್ಜಿ ವಹಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications