ಕಸಬ್ ಪರ ವಕೀಲರಿಗೆ ದಿನಕ್ಕೆ ರು.2,500 ಭತ್ಯೆ!
ಮುಂಬೈ, ಜೂ 3: ಉಗ್ರ ಅಜ್ಮಲ್ ಕಸಬ್ ಪರ ವಾದಿಸಲು ಮಹಾರಾಷ್ಟ್ರ ಸರಕಾರ ಈತನ ಪರ ವಕೀಲ ಅಬ್ಬಾಸ್ ಕಜ್ಮಿ ಗೆ ನೀಡುವ ಭತ್ಯೆ ಎಷ್ಟು ಗೊತ್ತೇ? ದಿನ ಒಂದಕ್ಕೆ ರುಪಾಯಿ 2500. ವಾರದಲ್ಲಿ ಐದು ಸಲ ವಿಚಾರಣೆ ನಡೆಯುತ್ತದೆ ಅಂದರೆ ವಾರಕ್ಕೆ ರು.12,500, ತಿಂಗಳಿಗೆ 50,000 ರುಪಾಯಿ!
ಮಾಡಿದ್ದು ಪೈಶಾಚಿಕ ಕೆಲಸ. ಅವನ ಪರ ವಾದಿಸಲು ವಕೀಲರು ಬೇರೆ. ಆ ವಕೀಲರಿಗೆ ಸರಕಾರದಿಂದ ತಿಂಗಳಿಗೆ ಭತ್ಯೆ. ದೇಶದ ವಾಣಿಜ್ಯ ನಗರಿ ಮುಂಬೈ ನಗರವನ್ನು ತಮ್ಮ ಮುಷ್ಠಿಯಲ್ಲಿ ಇಟ್ಟುಕೊಂಡು ನೂರಾರು ಜೀವಗಳನ್ನು ಬಲಿತೆಗೆದುಕೊಂಡು ಇಡೀ ದೇಶವೇ ತಲೆ ತಗ್ಗಿಸುವಂತೆ ಭಯೋತ್ಪಾದನಾ ಕೆಲಸ ಮಾಡಿದ್ದಕ್ಕೆ ಕೊಡುತ್ತಿರುವ ಬಳುವಳಿ.
ಭಾರತದ ಸಂವಿಧಾನದ ಕಾನೂನಿನಡಿ ಆರೋಪಿ ಪರ ವಾದಿಸಲು ಯಾರೂ ಮುಂದೆ ಬರದಿದ್ದರೆ, ರಾಜ್ಯ ಸರಕಾರದ ಕಾನೂನು ಇಲಾಖೆಯ ವಕೀಲರನ್ನು ಕೇಸ್ ಪರ ವಾದಿಸಲು ಕೋರ್ಟ್ ನೇಮಕ ಮಾಡಬಹುದು. ನಿಯಮದ ಅನ್ವಯ ಕೇಸ್ ಸಂಪೂರ್ಣ ಮುಗಿದ ನಂತರ ರು.900 ಭತ್ಯೆ ನೀಡಬೇಕು.
ಆದರೆ ಈ ಕೇಸ್ ನ ಸೂಕ್ಷ್ಮತೆಯಿಂದಾಗಿ ಕೋರ್ಟ್ ವಕೀಲರಿಗೆ ನೀಡುವ ಭತ್ಯೆಯನ್ನು ಸ್ವಲ್ಪ ಮಟ್ಟಿಗೆ ಹೆಚ್ಚಿಸುವಂತೆ ಸರಕಾರವನ್ನು ಕೇಳಿಕೊಂಡಿತ್ತು. ಇದಕ್ಕೆ ಸ್ಪಂದಿಸಿದ ಮಹಾರಾಷ್ಟ್ರ ಸರಕಾರ ಈ ನಿರ್ಧಾರ ತೆಗೆದುಕೊಂಡಿದೆ ಮತ್ತು ಸರಕಾರದ ಆದೇಶದ ಪ್ರತಿ ತನಗೆ ತಲುಪಿದೆ ಎಂದು ವಕೀಲ ಅಬ್ಬಾಸ್ ಕಜ್ಮಿ ಹೇಳಿದ್ದಾರೆ.
(ಏಜೆನ್ಸೀಸ್)
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಬಂಧನಕ್ಕೆ ಆಗ್ರಹ












Click it and Unblock the Notifications