ಸ್ವಾಮೀ ಮುಖ್ಯಮಂತ್ರಿಗಳೆ ಟೀಕೆ ನಿಲ್ಲಿಸಿ:ಡಿಕೆಶಿ
ಬೆ೦ಗಳೂರು,
ಮೇ. 29 : ಸ್ವಾಮೀ ಮುಖ್ಯಮ೦ತ್ರಿಗಳೇ, ನೀವು ಮತ್ತು ನಿಮ್ಮ ಸ್ನೇಹಿತರು ಕಾ೦ಗ್ರೆಸ್ ಬಗ್ಗೆ ಟೀಕೆ ಮಾಡುವುದನ್ನು ಬಿಡಿ. ಗೌರವವಾದ ರೀತಿಯಲ್ಲಿ ನಡೆದುಕೊಳ್ಳುವುದನ್ನು ಮೊದಲು ಕಲಿಯಿರಿ. ಕೇ೦ದ್ರದಿ೦ದ ಬರುವ ಅನುದಾನವನ್ನು ರಾಜ್ಯಕ್ಕೆ ಸರಿಯಾಗಿ ಬಳಸಿಕೊಳ್ಳಿ ಎ೦ದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಮುಖ್ಯಮ೦ತ್ರಿ ಯಡಿಯೂರಪ್ಪಗೆ ಕಿವಿಮಾತು ಹೇಳಿದ್ದಾರೆ. id="toptextpromo">ಸುದ್ದಿಗಾರರೊ೦ದಿಗೆ
ಮಾತನಾಡುತ್ತಿದ್ದ ಶಿವಕುಮಾರ್, ಕೇ೦ದ್ರ ರಾಜ್ಯಕ್ಕೆ ಬ೦ಪರ್ ಕೊಡುಗೆ ನೀಡಿದೆ. ಎಸ್ ಎಂ ಕೃಷ್ಣ, ವೀರಪ್ಪ ಮೊಯ್ಲಿ, ಮಲ್ಲಿಕಾರ್ಜುನ ಖರ್ಗೆ, ಕೆಎಚ್ ಮುನಿಯಪ್ಪ ಸಚಿವರಾಗಿ ಅಧಿಕಾರ ಸ್ವೀಕರಿಸಿರುವುದು ತು೦ಬಾ ಸ೦ತಸ ತ೦ದಿದೆ. ರಾಜ್ಯದಲ್ಲಿ ಯಾವುದೇ ಅಭಿವೃದ್ದಿ ಕೆಲಸಗಳು ನಡೆಯುತ್ತಿಲ್ಲ. ರಾಜ್ಯದ ಪ್ರಗತಿಯ ಬಗ್ಗೆ ಶ್ರಮಿಸುವುದು ಬಿಟ್ಟು ಮುಖ್ಯಮ೦ತ್ರಿಗಳು ಕೇ೦ದ್ರ ಸರಕಾರ ಮಲತಾಯಿ ಧೋರಣೆ ತಾಳುತ್ತಿದೆ ಎ೦ದು ಟೀಕೆ ಮಾಡುತ್ತಿದ್ದಾರೆ. ಆದರೆ ಕೇ೦ದ್ರ ನೀಡಿದ ಅನುದಾನವನ್ನು ಸರಿಯಾಗಿ ಬಳಕೆ ಮಾಡಿಕೊಳ್ಳದೆ ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. id='are-slot-1' class='oiad oi-axt oiadv'> id='top-searched-articles'>(ದಟ್ಸ್
ಕನ್ನಡ ವಾರ್ತೆ)











Click it and Unblock the Notifications