ಎರಡನೇ ಕಂತಿನ ಸಚಿವ ಸಂಪುಟದ ಮೇಲೆ ಖರ್ಗೆ ಕಣ್ಣು

ದಲಿತ ಸಮುದಾಯಕ್ಕೆ ಸೇರಿದ ಇಬ್ಬರು ನಾಯಕರ ನಡುವೆ ಪೈಪೋಟಿಯೇ ಖರ್ಗೆ ಅವರಿಗೆ ಮುಳುವಾಯಿತು ಎಂದು ಪಕ್ಷದ ಮೂಲಗಳು ಹೇಳುತ್ತವೆ. ಕೋಲಾರ ಲೋಕಸಭಾ ಕ್ಷೇತ್ರದಿಂದ ಸತತ 6ನೇ ಬಾರಿಗೆ ಆಯ್ಕೆಯಾಗುತ್ತಿರುವ ವಿ ಮುನಿಯಪ್ಪ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ ಕೊಡಲೇಬೇಕೆಂದು ಪಟ್ಟು ಹಿಡಿದ್ದರು. ಹಾಗಾಗಿ ಖರ್ಗೆ ಅವರಿಗೆ ಸಚಿವ ಸ್ಥಾನ ತಪ್ಪಿಹೋಯಿತು ಎನ್ನಲಾಗಿದೆ. ಮತ್ತೊಂದು ಮೂಲದ ಪ್ರಕಾರ ಮಂಗಳವಾರ ಕೇಂದ್ರಸಚಿವ ಸಂಪುಟ ವಿಸ್ತರಣೆಯಾಗಲಿದ್ದು ಖರ್ಗೆ ಅವರಿಗೆ ಅವಕಾಶ ನೀಡುವ ಸಾಧ್ಯತೆಗಳಿವೆ.
"ಎ'ಟೀಂನಲ್ಲಿ ಸಚಿವ ಸ್ಥಾನ ತಪ್ಪಿಸಿಕೊಂಡ ಖರ್ಗೆ ಅವರಿಗೆ 'ಬಿ'ಟೀಂ ನಲ್ಲಾದರೂ ಮಂತ್ರಿ ಸ್ಥಾನ ಸಿಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಖರ್ಗೆ ಅವರಿಗೆ ಸ್ವತಂತ್ರ ನಿರ್ವಹಣೆಯ ರಾಜ್ಯ ಮಂತ್ರಿ ಸ್ಥಾನವಾದರೂ ಸಿಗಲಿದೆ ಎಂಬ ನಿರೀಕ್ಷೆಯಲ್ಲಿ ಖರ್ಗೆ ಬೆಂಬಲಿಗರು ಇದ್ದಾರೆ. ಒಟ್ಟಿನಲ್ಲಿ ಕೆ ಎಚ್ ಮುನಿಯಪ್ಪ್ಪ ಅಥವಾ ಖರ್ಗೆ ಇಬ್ಬರಲ್ಲಿ ಒಬ್ಬರಿಗೆ ಅಥವಾ ಇಬ್ಬರಿಗೂ ರಾಜ್ಯ ಖಾತೆಯ ಸ್ಥಾನ ಸಿಗುವ ಸಂಭವವಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications