2009 ರ ಲೋಕಸಭೆ ಸ್ವಾರಸ್ಯಕರ ಸಂಗತಿಗಳು
ಬೆಂಗಳೂರು, ಮೇ. 19 : 2009 ಚುನಾವಣೆಯ ಕೆಲವೊಂದು ಸ್ವಾರಸ್ಯಕರ ಅಂಶಗಳು ಹೀಗಿವೆ. ಆಯ್ಕೆಯಾಗಿರುವ 28 ಸಂಸದರಲ್ಲಿ 9 ಮಂದಿಯ ಮೇಲೆ ಕ್ರಿಮಿನಲ್ ಮೊಕದ್ದಮೆ ಇದೆ. ಇದರಲ್ಲಿ ಬಿಜೆಪಿಯ 6, ಜನತಾದಳದ 2 ಮತ್ತು ಕಾಂಗ್ರೆಸ್ ಪಕ್ಷದ 1 ಸಂಸದರಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿದ್ದ ಕ್ರಿಮಿನಲ್ ಸಂಸದರ ಸಂಖ್ಯೆ 4 ಆಗಿತ್ತು.
28 ಸಂಸದರ ಪೈಕಿ 25 ಸಂಸದರು ಕೊಟ್ಯಾಧಿಪತಿಗಳು. ಒಂದು ಕೋಟಿಗಿಂತ ಕಮ್ಮಿ ಆಸ್ತಿಯಿರುವ (ಆಯೋಗಕ್ಕೆ ನೀಡಿದ್ದ ರಾಮನ ಲೆಕ್ಕದ ಪ್ರಕಾರ) ಮೂರು ಸಂಸದರೆಂದರೆ ದಕ್ಷಿಣಕನ್ನಡ ಕ್ಷೇತ್ರದ ನಳೀನ್ ಕುಮಾರ್ ಕಟೀಲ್, ರಾಯಚೂರಿನ ಫಕೀರಪ್ಪ ಮತ್ತು ಉತ್ತರಕನ್ನಡದ ಅನಂತ್ ಕುಮಾರ್ ಹೆಗ್ಡೆ. ಆರಿಸಿ ಬಂದಿರುವ ಸಂಸದರಲ್ಲಿ ಮೂರು ಮಂದಿ ಇನ್ನೂ ಖಾಯಂ ಆದಾಯ ತೆರಿಗೆ ಸಂಖ್ಯೆ (PAN No.) ವಿವರವನ್ನು ಆಯೋಗಕ್ಕೆ ನೀಡಿಲ್ಲ.
ಬಳ್ಳಾರಿಯಿಂದ ಸಚಿವ ರಾಮುಲು ಸಹೋದರಿ ಜೆ ಶಾಂತಾ ರಾಜ್ಯದಿಂದ ಆಯ್ಕೆಯಾಗಿರುವ ಏಕೈಕ ಮಹಿಳಾ ಸಂಸದರಾಗಿದ್ದಾರೆ. ಆಯ್ಕೆಯಾದವರಲ್ಲಿ ಶೇ. 40 ಮಂದಿ ಪದವೀಧರರು, ಶೇ 20 ಮಂದಿ ಸ್ನಾತ್ತಕೋತ್ತರ ಪದವೀಧರರಾದರೆ, ಉಳಿದವರು ಪಿಯುಸಿ ತನಕ ವಿಧ್ಯಾಭ್ಯಾಸ ಮಾಡಿದ್ದಾರೆ.
ಆಯೋಗಕ್ಕೆ ನೀಡಿದ ಲೆಕ್ಕದ ಪ್ರಕಾರ ಆಯ್ಕೆಯದ ಸಂಶದರಲ್ಲಿ ಜನತಾದಳದಿಂದ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಆಯ್ಕೆಯಾದ ಕುಮಾರಸ್ವಾಮಿ ಅತಿ ಹೆಚ್ಚು ಆಸ್ತಿ ಹೊಂದಿದವರಾಗಿದ್ದಾರೆ. ಅವರ ಬಳಿ 48.47 ಕೋಟಿ, ಎರಡನೇ ಸ್ಥಾನದಲ್ಲಿ ಹಾವೇರಿ ಕ್ಷೇತ್ರದಿಂದ ಆಯ್ಕೆಯಾದ ಶಿವಕುಮಾರ್ ಉದಾಸಿ ಬಳಿ 48.25 ಕೋಟಿ ಆಸ್ತಿಯಿದೆ ಎಂದು ಘೋಷಿಸಿದ್ದಾರೆ.
ದೇಶದ ಒಟ್ಟು ಸಂಸದರ ಪೈಕಿ 300 ಮಂದಿ ಕೋಟ್ಯಾಧಿಪತಿಗಳಿದ್ದಾರೆ. ಇದರಲ್ಲಿ ಉತ್ತರಪ್ರದೇಶದಿಂದ 52, ಮಹಾರಾಷ್ಟ್ರದ 37, ಆ೦ದ್ರಪ್ರದೇಶದ 31 ಮತ್ತು ಕರ್ನಾಟಕದ 25 ಮಂದಿಯಿದ್ದಾರೆ.
(ಏಜನ್ಸೀಸ್)
-
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ












Click it and Unblock the Notifications