2009 ರ ಲೋಕಸಭೆ ಸ್ವಾರಸ್ಯಕರ ಸಂಗತಿಗಳು
ಬೆಂಗಳೂರು, ಮೇ. 19 : 2009 ಚುನಾವಣೆಯ ಕೆಲವೊಂದು ಸ್ವಾರಸ್ಯಕರ ಅಂಶಗಳು ಹೀಗಿವೆ. ಆಯ್ಕೆಯಾಗಿರುವ 28 ಸಂಸದರಲ್ಲಿ 9 ಮಂದಿಯ ಮೇಲೆ ಕ್ರಿಮಿನಲ್ ಮೊಕದ್ದಮೆ ಇದೆ. ಇದರಲ್ಲಿ ಬಿಜೆಪಿಯ 6, ಜನತಾದಳದ 2 ಮತ್ತು ಕಾಂಗ್ರೆಸ್ ಪಕ್ಷದ 1 ಸಂಸದರಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿದ್ದ ಕ್ರಿಮಿನಲ್ ಸಂಸದರ ಸಂಖ್ಯೆ 4 ಆಗಿತ್ತು.
28 ಸಂಸದರ ಪೈಕಿ 25 ಸಂಸದರು ಕೊಟ್ಯಾಧಿಪತಿಗಳು. ಒಂದು ಕೋಟಿಗಿಂತ ಕಮ್ಮಿ ಆಸ್ತಿಯಿರುವ (ಆಯೋಗಕ್ಕೆ ನೀಡಿದ್ದ ರಾಮನ ಲೆಕ್ಕದ ಪ್ರಕಾರ) ಮೂರು ಸಂಸದರೆಂದರೆ ದಕ್ಷಿಣಕನ್ನಡ ಕ್ಷೇತ್ರದ ನಳೀನ್ ಕುಮಾರ್ ಕಟೀಲ್, ರಾಯಚೂರಿನ ಫಕೀರಪ್ಪ ಮತ್ತು ಉತ್ತರಕನ್ನಡದ ಅನಂತ್ ಕುಮಾರ್ ಹೆಗ್ಡೆ. ಆರಿಸಿ ಬಂದಿರುವ ಸಂಸದರಲ್ಲಿ ಮೂರು ಮಂದಿ ಇನ್ನೂ ಖಾಯಂ ಆದಾಯ ತೆರಿಗೆ ಸಂಖ್ಯೆ (PAN No.) ವಿವರವನ್ನು ಆಯೋಗಕ್ಕೆ ನೀಡಿಲ್ಲ.
ಬಳ್ಳಾರಿಯಿಂದ ಸಚಿವ ರಾಮುಲು ಸಹೋದರಿ ಜೆ ಶಾಂತಾ ರಾಜ್ಯದಿಂದ ಆಯ್ಕೆಯಾಗಿರುವ ಏಕೈಕ ಮಹಿಳಾ ಸಂಸದರಾಗಿದ್ದಾರೆ. ಆಯ್ಕೆಯಾದವರಲ್ಲಿ ಶೇ. 40 ಮಂದಿ ಪದವೀಧರರು, ಶೇ 20 ಮಂದಿ ಸ್ನಾತ್ತಕೋತ್ತರ ಪದವೀಧರರಾದರೆ, ಉಳಿದವರು ಪಿಯುಸಿ ತನಕ ವಿಧ್ಯಾಭ್ಯಾಸ ಮಾಡಿದ್ದಾರೆ.
ಆಯೋಗಕ್ಕೆ ನೀಡಿದ ಲೆಕ್ಕದ ಪ್ರಕಾರ ಆಯ್ಕೆಯದ ಸಂಶದರಲ್ಲಿ ಜನತಾದಳದಿಂದ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಆಯ್ಕೆಯಾದ ಕುಮಾರಸ್ವಾಮಿ ಅತಿ ಹೆಚ್ಚು ಆಸ್ತಿ ಹೊಂದಿದವರಾಗಿದ್ದಾರೆ. ಅವರ ಬಳಿ 48.47 ಕೋಟಿ, ಎರಡನೇ ಸ್ಥಾನದಲ್ಲಿ ಹಾವೇರಿ ಕ್ಷೇತ್ರದಿಂದ ಆಯ್ಕೆಯಾದ ಶಿವಕುಮಾರ್ ಉದಾಸಿ ಬಳಿ 48.25 ಕೋಟಿ ಆಸ್ತಿಯಿದೆ ಎಂದು ಘೋಷಿಸಿದ್ದಾರೆ.
ದೇಶದ ಒಟ್ಟು ಸಂಸದರ ಪೈಕಿ 300 ಮಂದಿ ಕೋಟ್ಯಾಧಿಪತಿಗಳಿದ್ದಾರೆ. ಇದರಲ್ಲಿ ಉತ್ತರಪ್ರದೇಶದಿಂದ 52, ಮಹಾರಾಷ್ಟ್ರದ 37, ಆ೦ದ್ರಪ್ರದೇಶದ 31 ಮತ್ತು ಕರ್ನಾಟಕದ 25 ಮಂದಿಯಿದ್ದಾರೆ.
(ಏಜನ್ಸೀಸ್)
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications