ಮಾತಿನ ಭಾರಕ್ಕೆ ಕುಸಿದ ಬಿಜೆಪಿ!

* ಎಚ್. ಆನಂದರಾಮ ಶಾಸ್ತ್ರೀ
ತನ್ನ ಮಾತಿನ ಭಾರಕ್ಕೆ ತಾನೇ ಕುಸಿದಿದೆ ಬಿಜೆಪಿ! ದೇಶದಲ್ಲಿ ಬಿಜೆಪಿಯ ಅಧಃಪತನದ ಒಟ್ಟಾರೆ ಸ್ಥಿತಿನೋಟ ಇದು.
ರಾಮಮಂದಿರ ಕಟ್ಟುತ್ತೇವೆಂದಿತು. ಮಂದಿರದ ಬದಲು ಮಾತಿನ ಮಹಲ್ ಕಟ್ಟಿತು. ಮತಾಂತರ ವಿರೋಧಿಸಲು ಯುವಕರಿಗೆ ಪ್ರಚೋದನೆ ನೀಡಿತು. ಯುವಕರು ಮುನ್ನುಗ್ಗಿದಾಗ ಸೂಕ್ತವಾಗಿ ನಿಯಂತ್ರಿಸಲಿಲ್ಲ, ಬದಲಿಗೆ, ಹಿಂಸಾಚಾರಗಳಾದಾಗ ಜಾರಿಕೊಳ್ಳುವ ಜಾಣ್ಮೆ ಮೆರೆಯಿತು. ಉಗ್ರರ ದಮನದ ಬಗ್ಗೆ ಆವೇಶದ ಮಾತುಗಳನ್ನಾಡಿತು. ದೇಶದೊಳಗೆ ಉಗ್ರರು ಸೊಕ್ಕಿ ಮೆರೆಯುತ್ತಿರುವಾಗ ದೇಶಾದ್ಯಂತ ಕಾನೂನುಬದ್ಧ ಹಾಗೂ ಅಹಿಂಸಾತ್ಮಕ ಚಳವಳಿ ರೂಪಿಸುವ ಯೋಜನೆ ಹಾಕಿಕೊಳ್ಳಲಿಲ್ಲ. ಅಲ್ಲಲ್ಲಿ ರಕ್ತಪಾತವಾದಂತೆಲ್ಲ ಹೇಳಿಕೆಗಳನ್ನು ನೀಡಿ ತಣ್ಣಗಾಗುವ ಪ್ರವೃತ್ತಿ ಮೆರೆಯಿತು. ಬಾಬ್ರಿ ಮಸೀದಿ ಧ್ವಂಸದ ವಿಷಯದಲ್ಲಂತೂ ಕೈತೊಳೆದುಕೊಳ್ಳುವ ಕೆಲಸ ಮಾಡಿತು!
ಬಿಜೆಪಿಯು ಕೆಲಸ ಮಾಡಲಿಲ್ಲ. ಬರಿದೆ ಮಾತು..ಮಾತು..ಮಾತೇ ಅಡಿತು ಅಷ್ಟೆ. ಕೆಲಸಗಾರಿಕೆ ತೋರಿಸಲು ಅಧಿಕಾರವೇ ಬೇಕೆಂದೇನೂ ಇಲ್ಲ. ಜನರ ನಿರೀಕ್ಷೆಗಳನ್ನು ಅರಿತು ಅದರಂತೆ ನಡೆಯುವ ಕಲೆ ಗೊತ್ತಿರಬೇಕು. ಕಾಂಗ್ರೆಸ್ನ ಮತ್ತು ಕೆಲವು ಮಾಧ್ಯಮಗಳ ವ್ಯವಸ್ಥಿತ ಅಪಪ್ರಚಾರದ ಬಗ್ಗೆ ದೇಶದ ಜನರಲ್ಲಿ ಸೂಕ್ತ ತಿಳಿವಳಿಕೆ ನೀಡುವ ಕಾರ್ಯವನ್ನಂತೂ ಬಿಜೆಪಿ ಮಾಡಲೇ ಇಲ್ಲ.
ಅದೇ, ಕಾಂಗ್ರೆಸ್ ನೋಡಿ, ಕಮ್ಯುನಿಸ್ಟರಿಗಿಂತ ಒಂದು 'ಕೈ' ಮೇಲಾಗಿ ಬಿಜೆಪಿ ವಿರುದ್ಧ ಅಪಪ್ರಚಾರ ಮಾಡುವುದರ ಜತೆಗೆ ಬಹಳ ವ್ಯವಸ್ಥಿತವಾಗಿ ರಾಹುಲ್ ಗಾಂಧಿ ಎಂಬ ಯುವಕ(?)ನನ್ನು ಜನರೊಳಗೆ ಛೂಬಿಟ್ಟಿತು. ಯುವ ಸೌಂದರ್ಯದ ಮುಂದೆ ಮೋದಿಯ ಮೋಡಿ ಮತ್ತು ಜ್ಞಾನವೃದ್ಧ-ವಯೋವೃದ್ಧ ಅಡ್ವಾಣಿಯ ಆಕರ್ಷಣೆ ಇವೆರಡೂ ಕಳೆಗುಂದಿದವು.
ಅತ್ತ, ವಾಜಪೇಯಿಗಿದ್ದ ಸಂತನ ಸಮಾನವಾದ ಜನಪ್ರಿಯತೆಯೂ ಇಲ್ಲ, ಇತ್ತ, ರಾಹುಲನೆದುರು ವಯಸ್ಸಿನ ಆಕರ್ಷಣೆಯೂ ಇಲ್ಲ. ಹೀಗಾಗಿ ಅಡ್ವಾಣಿಯು ವೋಟುಗಳನ್ನು ಒಟ್ಟುಮಾಡುವಲ್ಲಿ ನಿರೀಕ್ಷಿತ ಮಟ್ಟ ತಲುಪಲಾಗಲಿಲ್ಲ.
ಆವೇಶದ ಮಾತುಗಳಾಗಲೀ ಘೋಷಣೆಗಳಾಗಲೀ ಕೆಲಸ ಮಾಡುವುದಿಲ್ಲವೆಂಬುದನ್ನು ಬಿಜೆಪಿಯು ಇನ್ನಾದರೂ ಅರಿಯಬೇಕು. ದೇಶದಲ್ಲಿಂದು ಬಹುಸಂಖ್ಯಾತರಾಗಿರುವ ಯುವಕರು ಕಾರ್ಯಸಾಧನೆಯನ್ನು ನಿರೀಕ್ಷಿಸುತ್ತಾರೆ ಮತ್ತು ಯುವಶಕ್ತಿಯೆಡೆಗೆ ಹೆಚ್ಚಿನ ಒಲವು ತೋರುತ್ತಾರೆ. ಈ ವಾಸ್ತವದ ಅರಿವು ಬಿಜೆಪಿಗೆ ಸದಾ ಇರಬೇಕು.
ಭಾರತದ ಯುವ ಜನತೆಯಲ್ಲಿ ರಾಷ್ಟ್ರಪ್ರೇಮ ಮತ್ತು ದೇಶಾಭಿಮಾನ ತೃಪ್ತಿಕರ ಮಟ್ಟದಲ್ಲಿದೆ; ನಿರಾಶೆಯ ಅಗತ್ಯವಿಲ್ಲ. ಆದರೆ ಆ ಗುಣಗಳನ್ನು ದೇಶ ಕಟ್ಟಲಿಕ್ಕಾಗಿ ದುಡಿಸಿಕೊಳ್ಳುವ ನೇತಾರರ ಅಗತ್ಯವಿದೆ. ಇದನ್ನು ಬಿಜೆಪಿ ಅರಿತು ಮುಂದಡಿಯಿಡಬೇಕು.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications