Get Updates
Get notified of breaking news, exclusive insights, and must-see stories!

ಎಲ್ ಟಿಟಿಇ ಮುಖ್ಯಸ್ಥ ಪ್ರಭಾಕರನ್ ಹತ್ಯೆ

Prabhakaran
ಕೊಲಂಬೋ, ಮೇ. 18 : ಕೊನೆಗೂ ಎಲ್ ಟಿಟಿಇ ಮುಖಂಡ ವೇಲುಪಿಲೈ ಪ್ರಭಾಕರನ್ ಅವರನ್ನು ಶ್ರೀಲಂಕಾ ಸೇನಾಪಡೆ ಹತ್ಯೆಗೈದಿದೆ.

ಸೇನಾಪಡೆಯ ಕಣ್ತಪ್ಪಿಸಿ ಪ್ರಭಾಕರನ್ ಅವರು ತಮ್ಮ ಇಬ್ಬರು ಸಹಚರರೊಂದಿಗೆ ಪಾರಾಗಿಯಾಗುತ್ತಿರುವ ಸಂದರ್ಭದಲ್ಲಿ ಸೇನೆ ಅವರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದೆ ಎಂದು ಶ್ರೀಲಂಕಾ ರಕ್ಷಣಾ ಇಲಾಖೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆಂದು ವರದಿಯಾಗಿದೆ.

ಅಂಬುಲೆನ್ಸ್ ನಲ್ಲಿ ತಮ್ಮ ಇಬ್ಬರು ಸಹಚರರೊಂದಿಗೆ ಪರಾರಿಯಾಗುತ್ತಿದ್ದಾಗ ಲಂಕಾ ಸೇನೆ ಕಾರ್ಯಚರಣೆ ನಡೆಸಿದೆ. ಪ್ರಭಾಕರನ್ ಸೇರಿ ಅಂಬುಲೆನ್ಸ್ ನಲ್ಲಿದ್ದ ಮೂವರು ಮೃತಪಟ್ಟಿದ್ದಾರೆ. ಪ್ರಭಾಕರನ್ ಅವರು ಮೃತಪಟ್ಟಿರುವ ಸುದ್ದಿಯನ್ನು ನಂತರ ತಿಳಿಸಲಾಗುವುದು ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಬಿಬಿಸಿ ವರದಿಯ ಪ್ರಕಾರ, ಅರಣ್ಯ ಪ್ರದೇಶದಲ್ಲಿ ಸುಮಾರು 200 ಮಂದಿ ಸಹಚರರೊಂದಿಗೆ ಪ್ರಭಾಕರನ್ ಅಡಗಿಕೊಂಡಿದ್ದ. ಇದನ್ನು ಭೇದಿಸಿದ ಸೇನಾಪಡೆ ಉಗ್ರನನ್ನು ಹತ್ಯೆಗೈಯುವಲ್ಲಿ ಯಶಸ್ವಿಯಾಗಿದೆ. ಭಾನುವಾರ ಎಲ್ ಟಿಟಿಇ ನಾಲ್ಕು ಪ್ರಮುಖರಾದ ಬಾಲಸಿಂಘಂ ನಾದೇಶನ್, ಶಿವರತನಮ್ ಪುಲಿದೇವಮ್, ರಮೇಶ್ ಹಾಗೂ ಪ್ರಭಾಕರನ್ ಮಗ ಅಂಥೋನಿ ಚಾರ್ಲ್ಸ್ ರನ್ನು ಸೇನೆ ಹತ್ಯೆಗೈದಿತ್ತು.

(ಏಜನ್ಸೀಸ್)

ಶ್ರೀಲಂಕಾದಲ್ಲಿ ಪ್ರಭಾಕರನ್ ಮಗನ ಶವ ಪತ್ತೆ
ಸೈನಿಕ ದಾಳಿಯಲ್ಲಿ ಎಲ್ಟಿಟಿಇ ಪ್ರಭಾಕರನ್ ಹತ?

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+