ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಮನಗರ ಉಪಚುನಾವಣೆಗೆ ಭವಾನಿ ರೇವಣ್ಣ ಸ್ಪರ್ಧೆ?
ಬೆಂಗಳೂರು, ಮೇ.18 : ಸಂಸದರಾಗಿ ಆಯ್ಕೆಯಾಗಿರುವ ಎಚ್ ಡಿ ಕುಮಾರಸ್ವಾಮಿ ಅವರ ರಾಮನಗರ ವಿಧಾನಸಭೆ ಕ್ಷೇತ್ರ ಉಪಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಭವಾನಿ ರೇವಣ್ಣ ಕಣಕ್ಕಿಳಿಯಲಿದ್ದಾರೆಯೇ ? ಹೀಗೊಂದು ಪ್ರಶ್ನೆ ಜಿಲ್ಲೆಯಾದ್ಯಂತ ಚರ್ಚೆಯಲ್ಲಿದೆ.
ಲೋಕಸಭೆ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಜೆಡಿಎಸ್ ಮುಖಂಡರ ಹಾಗೂ ವಿಶೇಷವಾಗಿ ಭವಾನಿ ರೇವಣ್ಣ ಅವರ ಚಿತ್ತ ರಾಮನಗರದತ್ತ ಹರಿದಿದೆ. ಅನಿತಾ ಕುಮಾರಸ್ವಾಮಿ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ್ದು, ಅವರಿಗಿಂತ ತಾವೇನು ಕಡಿಮೆ ಎಂಬ ಚಿಂತನೆ ಭವಾನಿ ಅವರದ್ದಾಗಿದೆ ಎನ್ನುತ್ತದೆ ಅವರ ಆಪ್ತ ವಲಯ.
ವಿಧಾನಸಭೆ ಚುನಾವಣೆಯಲ್ಲಿ ಪತಿ ರೇವಣ್ಣ, ಲೋಕಸಭೆ ಚುನಾವಣೆಯಲ್ಲಿ ಮಾವ ದೇವೇಗೌಡರ ಗೆಲುವಿಗೆ ಶ್ರಮಿಸಿದ ಭವಾನಿ, ತಮ್ಮ ಸ್ವಂತ ವರ್ಚಸ್ಸು ಬೆಳೆಸಿಕೊಳ್ಳುವ ಚಿಂತನೆಯಲ್ಲಿದ್ದಾರೆ. ಒಟ್ಟಿನಲ್ಲಿ ದೇವೇಗೌಡರ ಕುಟುಂಬ ರಾಜಕಾರಣ ಅವ್ಯವತಹವಾಗಿ ಮುಂದುವರೆಯತೊಡಗಿದೆ. ಮುಂದಿನ ಸರದಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಗೌಡನದ್ದು?
(ದಟ್ಸ್ ಕನ್ನಡ ವಾರ್ತೆ)
ಮಹಾಚುನಾವಣೆ 2009 ಫಲಿತಾಂಶ
Comments
deve gowda ಉಪ ಚುನಾವಣೆ ಎಚ್ ಡಿ ಕುಮಾರಸ್ವಾಮಿ hd kumaraswamy ರಾಮನಗರ hd revanna bhavani revanna ಭವಾನಿ ರೇವಣ್ಣ ಎಚ್ ಡಿ ರೇವಣ್ಣ ramanagara
Story first published: Monday, May 18, 2009, 9:57 [IST]