ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಜ್ಯದ ಹಣಕಾಸು ಸ್ಥಿತಿಯ ಬಗ್ಗೆ ಗವರ್ನರ್ ಮೆಚ್ಚುಗೆ
ನಬಾರ್ಡ್ ಸಂಸ್ಥೇ ರಾಜ್ಯ ಸಹಕಾರಿ ಸಾಲ ಸಂಸ್ಥೆಗಳಿಗೆ ನೀಡುತ್ತಿರುವ ಮರು ಸಾಲದ ಪ್ರಮಾಣವನ್ನು ಶೇ 40 ರಿಂದ 50 ರಷ್ಟು ಹೆಚ್ಚಿಸಬೇಕು. ಸಣ್ಣ ಕೈಗಾರಿಕೆಗಳಿಗೆ ರಾಷ್ಟ್ರೀಕೃತ ಬ್ಯಾಂಕ್ಗಳು ನೀಡುವ ಸಾಲದ ಮೇಲಿನ ಬಡ್ಡಿ ದರವನ್ನು ಶೇ 13 ರಿಂದ ಶೇ 10 ಕ್ಕೆ ಇಳಿಸಬೇಕು ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಅನುಷ್ಠಾನಗೊಳಿಸುತ್ತಿರುವ ಶೇ 6 ರ ಬಡ್ಡಿ ದರದ ಸಾಲ ಯೋಜನೆ ಯಶಸ್ವಿಗೊಳಿಸಲು ರಾಷ್ಟ್ರೀಕೃತ ಬ್ಯಾಂಕುಗಳ ನಿಯಮಾವಳಿಗಳನ್ನು ಸರಳೀಕರಿಸಲು ಹಾಗೂ ಭದ್ರತೆ ನೀಡಲು ಒತ್ತಾಯಿಸದಂತೆ ಬ್ಯಾಂಕ್ಗಳ ಆಡಳಿತ ಮಂಡಳಿಗಳಿಗೆ ನಿರ್ದೇಶನ ನೀಡಬೇಕೆಂದೂ ಸಹ ಮುಖ್ಯಮಂತ್ರಿಗಳು ಮನವಿಮಾಡಿಕೊಂಡರು. ಈ ಎಲ್ಲಾ ಬೇಡಿಕೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ ಸಕಾರಾತ್ಮಕ ನಿರ್ಣಯ ಕೈಗೊಳ್ಳುವ ಆಶಯವನ್ನು ಡಾ ಸುಬ್ಬರಾವ್ ವ್ಯಕ್ತಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)
Comments
Story first published: Friday, May 15, 2009, 12:30 [IST]