ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣಾ ಭವಿಷ್ಯ ಹೇಳಿ ರು.10 ಲಕ್ಷ ಗೆಲ್ಲಿ !!

By Staff
|
Google Oneindia Kannada News

ಮಂಗಳೂರು, ಮೇ. 6: ಜ್ಯೋತಿಷಿಗಳು ಮತ್ತು ಭವಿಷ್ಯ ಹೇಳುವವರಿಗೆ ಅಖಿಲ ಭಾರತ ವಿಚಾರವಾದಿ ಒಕ್ಕೂಟ ಲೋಕಸಭಾ ಚುನಾವಣೆಯ ಭವಿಷ್ಯದ ಕುರಿತಂತೆ ಸವಾಲೊಂದನ್ನು ಒಡ್ಡಿ ಸರಿಯಾದ ಉತ್ತರ ನೀಡಿದವರಿಗೆ ಹತ್ತು ಲಕ್ಷ ರೂಪಾಯಿಗಳ ಬಹುಮಾನ ನೀಡುವುದಾಗಿ ಘೋಷಿಸಿದೆ.

ಜ್ಯೋತಿಷಿಗಳಿಗೆ ವಿಚಾರವಾದಿಗಳ ಪ್ರಶ್ನೆಗಳ ಪಟ್ಟಿ ಈ ರೀತಿ ಇದೆ:
* ದೇಶದ ಮುಂದಿನ ಪ್ರಧಾನಿ ಯಾರು?
* ಯಾವ ಪಕ್ಷ, ಯಾವ ಪಕ್ಷಗಳ ಒಕ್ಕೂಟ ಅಧಿಕಾರಕ್ಕೆ ಬರಲಿದೆ?
* ಪ್ರಮುಖ ರಾಜಕೀಯ ಪಕ್ಷಗಳಿಗೆ ಎಷ್ಟೆಷ್ಟು ಸ್ಥಾನಗಳು ಬರಬಹುದು? ( ಶೇ. 10 ರಷ್ಟು ಹೆಚ್ಚುಕದಿಮೆ ಇರಬಹುದು)
* ಪ್ರಮುಖ ಅಭ್ಯರ್ಥಿಗಳಾದ ಸೋನಿಯಾ ಗಾಂಧಿ, ಶಶಿ ತರೂರು, ವರುಣ್ ಗಾಂಧಿ, ಜಯಪ್ರಕಾಶ್ ಹೆಗ್ಡೆ, ಎಸ್ ಬಂಗಾರಪ್ಪ, ರಾಘವೇಂದ್ರ, ಲಾಲ್ ಕೃಷ್ಣ ಆಡ್ವಾಣಿ, ಜನಾರ್ಧನ ಪೂಜಾರಿ ಮತ್ತು ಮುರಳಿ ಮನೋಹರ್ ಜೋಷಿ ಈ ಅಭ್ಯರ್ಥಿಗಳಿಗೆ ಎಷ್ಟು ಮತಗಳು ಬರಬಹುದು? ( ಶೇ 10 ರಷ್ಟು ಹೆಚ್ಚು ಕಡಿಮೆ ಇರಬಹುದು)

ಪ್ರವೇಶ ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿರಬೇಕು. ಒಬ್ಬರಿಗೆ ಒಂದೇ ಪ್ರವೇಶಪತ್ರ. ಶೇ. 80 ರಷ್ಟು ಸರಿಯಾಗಿ ಉತ್ತರ ಹೇಳಿದವರಿಗೆ ಬಹುಮಾನ. ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಬೇಕು. ವಿವರಗಳಿಗೆ ಕೆಳಗಿನ ವಿಳಾಸಕ್ಕೆ ಬರೆಯಿರಿ ಎಂದು ಒಕ್ಕೂಟದ ಅಧ್ಯಕ್ಷ ನರೇಂದ್ರ ನಾಯಕ್ ಹೇಳಿದ್ದಾರೆ.

ಹೆಚ್ಚಿನ ಮಾಹಿತಿಗೆ: ನರೇಂದ್ರ ನಾಯಕ್, 3-9,-1220/2, ವಿತೋಬ ದೇವಸ್ಥಾನ ರಸ್ತೆ, ಮಂಗಳೂರು- 575006.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X