ಪಕ್ಷೇತರ ಸಚಿವರನ್ನು ಕೈಬಿಡಲ್ಲ:ವೆಂಕಟರಮಣಪ್ಪ
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯದ ಖಾತೆಯಲ್ಲಿ ಮುಂದುವರೆಯುವ ವಿಶ್ವಾಸವಿದೆ ಎಂದರು. ಈ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರೆ ಸ್ಪಷ್ಟೀಕರಣ ನೀಡಿದ್ದು, ಚುನಾವಣೆ ನಂತರ ಸಚಿವ ಸಂಪುಟ ಪುನರ್ ರಚನೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಕೂಡಾ ಪಕ್ಷೇತರ ಸಚಿವರು ಬಿಜೆಪಿ ಸರಕಾರಕ್ಕೆ ಬೆಂಬಲ ನೀಡುತ್ತೇವೆ. ಇದರಲ್ಲಿ ಅನುಮಾನವೇ ಬೇಡ ಎಂದು ವೆಂಕಟರಮಣಪ್ಪ ಹೇಳಿದರು.
ಬಿಜೆಪಿ ಸರಕಾರ ರಚನೆಯಾಗಲು ಪಕ್ಷೇತರ ಶಾಸಕರಾದ ವೆಂಕಟರಮಣಪ್ಪ, ಡಿ ಸುಧಾಕರ್, ಶೇಖರ್ ಗೂಳಿಹಟ್ಟಿ ಮತ್ತು ಶಿವರಾಜ್ ತಂಗಡಗಿ ಅವರು ಬಿಜೆಪಿಗೆ ಬೆಂಬಲ ಘೋಷಿಸಿದ ಹಿನ್ನೆಲೆಯಲ್ಲಿ ಯಡಿಯೂರಪ್ಪ ನೇತೃತ್ವದ ನೂತನ ಸರಕಾರ ಅಸ್ತಿತ್ವಕ್ಕೆ ಬಂದಿತು. ಶಾಸಕ ವರ್ತೂರು ಪ್ರಕಾಶ್ ಕೂಡಾ ಬಿಜೆಪಿಗೆ ಬೆಂಬಲ ನೀಡಿ ನಿಗಮ-ಮಂಡಳಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. 110 ಸ್ಥಾನ ಪಡೆದಿದ್ದ ಬಿಜೆಪಿ, ಸರಕಾರ ರಚಿಸಲು 4 ಶಾಸಕ ಅವಶ್ಯಕತೆ ಇತ್ತು. ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಪಕ್ಷೇತರ ಶಾಸಕರು ಸರಕಾರಕ್ಕೆ ಬೆಂಬಲ ನೀಡಲು ಮುಂದೆ ಬಂದರು.
(ದಟ್ಸ್
ಕನ್ನಡ
ವಾರ್ತೆ)
ಸಂಪುಟ
ಪುನರ್
ರಚನೆ
ಕೇವಲ
ವದಂತಿ
:
ಬಿಎಸ್
ವೈ