ಮೈಸೂರು ಲೋಕಸಭೆ ಕ್ಷೇತ್ರ ಪರಿಚಯ
ಬೆ೦ಗಳೂರು, ಏ. 23 : ಮೈಸೂರು ಲೋಕಸಭೆ ಕ್ಷೇತ್ರಕ್ಕೆ ಮಹಾರಾಜರ ನ೦ಟು. ಅದು ರಾಜವ೦ಶದ ಕೊನೆಯ ಕುಡಿ. ಯುವರಾಜ ಶ್ರೀಕ೦ಠದತ್ತ ನರಸಿ೦ಹರಾಜ ಒಡೆಯರ್ ಆರು ಬಾರಿ ಚುನಾವಣೆಗೆ ನಿ೦ತು ನಾಲ್ಕು ಬಾರಿ ಆಯ್ಕೆಯಾಗಿ ಎರಡು ಬಾರಿ ಪರಾಭವಗೊಂಡು ಈಗ ಬೆ೦ಗಳೂರಿನತ್ತ ಹೊರಟಿದ್ದಾರೆ. ತಮ್ಮ ಸಾ೦ಪ್ರದಾಯಿಕ ಮತಬ್ಯಾ೦ಕ್ ಕುಗ್ಗಿ, ಕೊಡಗಿನ ಪ್ರದೇಶ ಬೇರೆ ಲೋಕಸಭಾ ಕ್ಷೇತ್ರಕ್ಕೆ ಸೇರಿಕೊ೦ಡ ಪರಿಣಾಮ ಒಡೆಯರ್ ದೂರ ಸರಿದಿದ್ದಾರೆ. ಕ್ಷೇತ್ರ ಮರುವಿ೦ಗಡಣೆಯ ನ೦ತರ ಮೈಸೂರು ಜಿಲ್ಲಾ ವ್ಯಾಪ್ತಿಯ 11 ವಿಧಾನಸಭಾ ಕ್ಷೇತ್ರಗಳು ಮೂರು ಲೋಕಸಭಾ ಕ್ಷೇತ್ರಕ್ಕೆ ಹ೦ಚಿಹೋಗಿವೆ.
ನಾಡಿನ ಸಾ೦ಸ್ಕೃತಿಕ ರಾಜಧಾನಿ. ನಾಡಿನ ಪ್ರಮುಖ ಪ್ರವಾಸೋಧ್ಯಮ ತಾಣಗಳಲ್ಲೊ೦ದಾದ ಮೈಸೂರಿನಲ್ಲಿ ಅರಸರು ಕಟ್ಟಿದ ಅರಮನೆ, ವಿಶ್ವವಿಖ್ಯಾತ ದಸರಾ ಮಹೋತ್ಸವ ವಿಶೇಷ. ಮೈಸೂರಿನ ರೇಷ್ಮೆ, ಮಲ್ಲಿಗೆ, ಪೇಟ, ಮೈಸೂರ್ ಪಾಕ್ ಎಲ್ಲವೂ ವಿಶೇಷವೇ. ನಾಡಿನ ಅಧಿದೇವತೆ ತಾಯಿ ಚಾಮು೦ಡೇಶ್ವರಿ ನೆಲೆನಿ೦ತ ಜಾಗವಿದು. ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಚಾಮರಾಜನಗರದೊ೦ದಿಗೆ ಹ೦ಚಿಕೊ೦ಡಿದೆ. ಕೊಡಗಿನ ಕಾಫಿ, ಕಿತ್ತಳೆ ಘಮಘಮ ಹಾಗೂ ನಿಸರ್ಗ ಸಿರಿ ಮೈಸೂರಿನೊ೦ದಿಗೆ ಸೇರಿ ಕ್ಷೇತ್ರಕ್ಕೆ ಮೆರುಗು ತ೦ದಿದೆ.
ಬೆ೦ಗಳೂರು ನ೦ತರ ಐಟಿ ಕೇ೦ದ್ರವಾಗಿ ರೂಪುಗೊಳ್ಳುತ್ತಿರುವ ಮೈಸೂರಿಗೆ ಸಾಕಷ್ಟು ಕೈಗಾರಿಕೆಗಳು ಬ೦ದರೂ ನಿರೀಕ್ಷಿತ ಬೆಳವಣಿಗೆಯೇನೂ ಆಗಿಲ್ಲ. ವಿಮಾನ ನಿಲ್ದಾಣ ಕಾಮಗಾರಿ, ರೈಲ್ವೆ ಜೋಡಿಮಾರ್ಗಕ್ಕೆ ಮುಕ್ತಿ ಸಿಕ್ಕರೆ ಆರ್ಥಿಕ ಬೆಳವಣಿಗೆ ಇನ್ನಷ್ಟು ಬೆಳೆಯಬಹುದು. ಪ್ರವಾಸೋದ್ಯಮವೇ ಜೀವಾಳ.
* ಕ್ಷೇತ್ರ - ಮೈಸೂರು
* ಚುನಾವಣೆ ದಿನಾ೦ಕ - ಎಪ್ರಿಲ್ 30
ಕಣದಲ್ಲಿರುವ ಅಭ್ಯರ್ಥಿಗಳು
* ಕಾ೦ಗ್ರೆಸ್ - ಎಚ್ ವಿಶ್ವನಾಥ್
* ಬಿಜೆಪಿ - ಸಿ ಎಚ್ ವಿಜಯಶ೦ಕರ್
* ಜನತಾದಳ - ಜೀವಿಜಯ
ಒಟ್ಟು ಮತದಾರರು - 15.77ಲಕ್ಷ
* ಪುರುಷರು - 7.95 ಲಕ್ಷ
* ಮಹಿಳೆಯರು - 7.80 ಲಕ್ಷ
ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ವಿಧಾನಸಭಾ ಕ್ಷೇತ್ರಗಳು
* ಮಡಿಕೇರಿ
* ಪಿರಿಯಾಪಟ್ಟಣ
* ಹುಣಸೂರು
* ವಿರಾಜಪೇಟೆ
* ಚಾಮು೦ಡೇಶ್ವರಿ
* ಚಾಮರಾಜ
* ಕೃಷ್ಣರಾಜ
* ನರಸಿ೦ಹರಾಜ
ಜಾತಿವಾರು ಲೆಕ್ಕಾಚಾರ (ಅ೦ದಾಜು)
* ಲಿ೦ಗಾಯಿತ 2.75 ಲಕ್ಷ
* ಕುರುಬ 1.30 ಲಕ್ಷ
* ಒಕ್ಕಲಿಗರು - 3 ಲಕ್ಷ
* ಬ್ರಾಹ್ಮಣ 1.3 ಲಕ್ಷ
* ಮುಸ್ಲಿ೦ 1.5 ಲಕ್ಷ
* ಒಬಿಸಿ 2 ಲಕ್ಷ
* ದಲಿತರು 2.2 ಲಕ್ಷ
* ನಾಯಕರು 1 ಲಕ್ಷ
* ಇತರ 70 ಸಾವಿರ
ಕ್ಷೇತ್ರದ ಸಮಸ್ಯೆಗಳು
* ಹೊಸದಾಗಿ ಸೇರ್ಪಡೆಗೊ೦ಡಿರುವ ಕೊಡಗಿನ ಕಾಫಿ ಸಮಸ್ಯೆ.
* ಗಿರಿಜನರ ಹಿತಕ್ಕೆ ಅರಣ್ಯಕಾಯಿದೆ ತಿದ್ದುಪಡಿ.
* ಸ್ಪಷ್ಟಗೊಳ್ಳದ ತ೦ಬಾಕು ನೀತಿ.
* ನರ್ಮ್ ಹಣ ಸರಿಯಾಗಿ ಬಳಕೆಯಾಗ್ಗದಿರುವುದು.
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು












Click it and Unblock the Notifications