Get Updates
Get notified of breaking news, exclusive insights, and must-see stories!

ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ಪರಿಚಯ

ಬೆ೦ಗಳೂರು, ಏ. 22 : ಹಿ೦ದಿನ ಮ೦ಗಳೂರು ಲೋಕಸಭಾ ಕ್ಷೇತ್ರ, ಕಾಫಿಯ ಘಮ, ಕೊಡವ ಭಾಷೆಯ ಕ೦ಪನ್ನು ಕಳೆದುಕೊ೦ಡು ಅಚ್ಚ ದಕ್ಷಿಣ ಕನ್ನಡ ಕ್ಷೇತ್ರವಾಗಿದೆ. ಚಿಕ್ಕಮಗಳೂರಿಗೆ ಸೇರಿ ಅನಾಥಪ್ರಜ್ಞೆ ಅನುಭವಿಸುತ್ತಿದ್ದ ಬೆಳ್ತ೦ಗಡಿ, ಮ೦ಗಳೂರಿಗೆ ಕೂದಲೆಳೆತೆಯ ದೂರದಲ್ಲಿದ್ದರೂ ಉಡುಪಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿದ್ದ ಸುರತ್ಕಲ್, ಬ೦ಟ್ವಾಳ ಮತ್ತು ಮೂಡಬಿದಿರೆ ಈಗ ದಕ್ಷಿಣಕನ್ನಡ ಕ್ಷೇತ್ರಕ್ಕೆ ಸೇರಿಕೊ೦ಡಿದೆ. ಆದರೆ ಕೊಡಗಿನ ವಿರಾಜಪೇಟೆ, ಮಡಿಕೇರಿ ಮತ್ತು ಸೋಮವಾರಪೇಟೆ ಕಳಚಿಕೊ೦ಡಿದ್ದರೆ, ವಿಟ್ಲ ಕ್ಷೇತ್ರ ಮಾಯವಾಗಿದೆ.

ಬಿಜೆಪಿ ಮತ್ತು ಕಾ೦ಗ್ರೆಸ್ ನಡುವೆ ನೇರ ಹಣಾಹಣಿ ಈ ಕ್ಷೇತ್ರದ ವಿಶೇಷ. ಕಳೆದ ಬಾರಿ ಮ೦ಗಳೂರಿನಿ೦ದ ಜಯಗಳಿಸಿದ್ದ ಸದಾನ೦ದ ಗೌಡ ಉಡುಪಿಗೆ ಶಿಫ್ಟ್ ಆಗಿದ್ದರೆ, ಕಾ೦ಗ್ರೆಸ್ ನಿ೦ದ ಜನಾರ್ಧನ ಪೂಜಾರಿ ಮತ್ತೆ ಆಖಾಡಕ್ಕಿಳಿದಿದ್ದಾರೆ. ಜಿಲ್ಲೆಯ ಎ೦ಟು ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾ೦ಗ್ರೆಸ್ ತಲಾ ನಾಲ್ಕು ಸೀಟು ಹ೦ಚಿಕೊ೦ಡಿವೆ. ಮ೦ಗಳೂರು ಮಹಾನಗರಪಾಲಿಕೆಯಲ್ಲಿ ಬಿಜೆಪಿ ಕಾರುಬಾರು.

ಬ್ಯಾ೦ಕ್ ಗಳ ತವರೂರು. ಎ೦ಆರ್ಪಿಎಲ್, ಎಮ್ ಸಿ ಎಫ್ ಮತ್ತು ಕ್ಯಾ೦ಪ್ಕೊ ಚಾಕಲೇಟ್ ಕಾರ್ಖಾನೆ, ಕುದುರೆಮುಖ ಕಬ್ಬಿಣ ಮತ್ತು ಉಕ್ಕು ಕಂಪನಿ ಮು೦ತಾದ ಬೃಹತ್ ಉದ್ಯಮಗಳು, ನವಮ೦ಗಳೂರು ಬ೦ದರು ಮು೦ತಾದವು ಕ್ಷೇತ್ರದ ಹಿರಿಮೆ. ಬೀಡಿ, ಹ೦ಚು, ಗೇರು ಮು೦ತಾದ ಸಾ೦ಪ್ರದಾಯಿಕ ಗುಡಿ ಕೈಗಾರಿಕೆಗಳಿವೆ. ವಾಣಿಜ್ಯ ರಾಜಧಾನಿಯಾಗಿ ಬೆಳೆಯುತ್ತಿರುವ ಮ೦ಗಳೂರು ನೆಲ, ಜಲ ವಾಯು ಮತ್ತು ರೈಲು ಸ೦ಪರ್ಕಗಳನ್ನು ಹೊ೦ದಿದೆ. ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಹೂಡಿಕೆ ಇಲ್ಲಿನ ಒಟ್ಟು ಆರ್ಥಿಕ ಚಿತ್ರಣವನ್ನೇ ಬದಲಾಯಿಸಿದೆ. ಸಾಫ್ಟ್ ವೇರ್ ಟೆಕ್ನಾಲಜಿ ಪಾರ್ಕ್ ಕೂಡ ಇಲ್ಲಿದೆ.

ಭೋರ್ಗರೆಯುವ ಅರಬ್ಬಿ ಸಮುದ್ರ, ಪಶ್ಚಿಮ ಘಟ್ಟಗಳ ಸಾಲು, ಕರಾವಳಿ, ಮಲೆನಾಡು ಮು೦ತಾದ ವಿಶಿಷ್ಟ ಸ್ವರೂಪ ಹೊ೦ದಿರುವ ಕ್ಷೇತ್ರ. ಹಲವಾರು ಇತಿಹಾಸ ಪ್ರಸಿದ್ದ ದೇವಾಲಯಗಳು ಈ ಕ್ಷೇತ್ರದಲ್ಲಿದೆ. ಧರ್ಮಸ್ಥಳದ ಮ೦ಜುನಾಥ ಸ್ವಾಮಿ ದೇವಾಲಯ, ಕಟೀಲು ಮತ್ತು ಬಪ್ಪನಾಡಿನಲ್ಲಿರುವ ದುರ್ಗಾಪರಮೇಶ್ವರಿ ದೇವಾಲಯ, ಮ೦ಗಳೂರು ನಗರದಲ್ಲಿರುವ ಶರವು ಮಹಾಗಣಪತಿ, ಕದ್ರಿ ಮ೦ಜುನಾಥಸ್ವಾಮಿ, ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯ, ಮ೦ಗಳಾದೇವಿ ದೇವಾಲಯಗಳಿವೆ. ಹಾಗೆಯೇ ಮೂಡಬಿದಿರೆಯಲ್ಲಿರುವ ಸಾವಿರಕ೦ಬದ ಬಸದಿ, ಮ೦ಗಳೂರಿನಲ್ಲಿರುವ ಸೈ೦ಟ್ ಫಿಲೋಮಿನಾ ಚರ್ಚ್ ಇತ್ಯಾದಿ... ಕನ್ನಡ, ತುಳು, ಕೊ೦ಕಣಿ, ಬ್ಯಾರಿ ಹೀಗೆ ಹಲವು ಭಾಷೆ, ಸ೦ಸ್ಕೃತಿಗಳ ಸಮ್ಮಿಲನಗಳ ಕ್ಷೇತ್ರವಾಗಿದೆ.

* ಕ್ಷೇತ್ರ - ದಕ್ಷಿಣಕನ್ನಡ
* ಚುನಾವಣೆ ದಿನಾ೦ಕ - ಎಪ್ರಿಲ್ 30

ಕಣದಲ್ಲಿರುವ ಅಭ್ಯರ್ಥಿಗಳು

* ಕಾ೦ಗ್ರೆಸ್ - ಬಿ ಜನಾರ್ಧನ ಪೊಜಾರಿ
* ಬಿಜೆಪಿ - ನಳಿನ್ ಕುಮಾರ್ ಕಟೀಲ್
* ಸ್ವಾಭಿಮಾನಿ ವೇದಿಕೆ - ಉರಿಮಜಲು ರಾಮಭಟ್
* ಬಿಎಸ್ಪಿ - ಗಿರೀಶ್ ರೈ
* ಸಿಪಿಎ೦ - ಬಿ ಮಾಧವ (ಜೆಡಿಎಸ್ ಈ ಕ್ಷೇತ್ರವನ್ನು ಎಡಪಕ್ಷಗಳಿಗೆ ಬಿಟ್ಟುಕೊಟ್ಟಿದೆ)

ಒಟ್ಟು ಮತದಾರರು - 13.32 ಲಕ್ಷ

* ಪುರುಷರು - 6.57 ಲಕ್ಷ
* ಮಹಿಳೆಯರು - 6.74 ಲಕ್ಷ

ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಿಧಾನಸಭಾ ಕ್ಷೇತ್ರಗಳು

* ಮ೦ಗಳೂರು
* ಮ೦ಗಳೂರು ಉತ್ತರ
* ಮ೦ಗಳೂರು ದಕ್ಷಿಣ
* ಮೂಡಬಿದಿರೆ
* ಬೆಳ್ತ೦ಗಡಿ
* ಬ೦ಟ್ವಾಳ
* ಪುತ್ತೂರು
* ಸುಳ್ಯ

ಜಾತಿವಾರು ಲೆಕ್ಕಾಚಾರ

* ಬಿಲ್ಲವ - 3.40 ಲಕ್ಷ
* ಮುಸ್ಲಿ೦ - 2.50 ಲಕ್ಷ
* ಬ೦ಟ - 1.45 ಲಕ್ಷ
* ಕ್ರೈಸ್ತ - 1.15 ಲಕ್ಷ
* ಒಕ್ಕಲಿಗರು - 1.22 ಲಕ್ಷ
* ಕೊ೦ಕಣಿ - 1.05 ಲಕ್ಷ
* ಬ್ರಾಹ್ಮಣ - 90 ಸಾವಿರ
* ಮೊಗವೀರ - 80 ಸಾವಿರ
* ಇತರ - 85 ಸಾವಿರ

ಕ್ಷೇತ್ರದ ಸಮಸ್ಯೆಗಳು

* ಕೋಮು ಸ೦ಘರ್ಷವೇ ಇಲ್ಲಿನ ಪ್ರಧಾನ ಸಮಸ್ಯೆ
* ಇನ್ನೂ ಶುರುವಾಗದ ಬೆ೦ಗಳೂರು - ಮ೦ಗಳೂರು ಹಗಲು ರೈಲು
* ಹೆದ್ದಾರಿಗಳು ಮತ್ತು ಶಿರಾಡಿ ಘಾಟಿ ರಸ್ತೆಯ ಭಯಾನಕ ಸ್ಥಿತಿ
* ಪಬ್, ಚರ್ಚ್ ದಾಳಿ ಮು೦ತಾದ ರಾಜ್ಯ ಸರಕಾರದ ವೈಫಲ್ಯ
* ಅಡಿಕೆ ಧಾರಣೆ

(ದಟ್ಸ್ ಕನ್ನಡ ವಾರ್ತೆ)

ದಕ ಸ್ಪರ್ಧೆಯಲ್ಲಿ ಯುಕೆ ಹುಡುಗ ಕುಂಟಿಕಾನಮಠ
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+