ವರುಣ್ ಮೇಲೇಕೆ ಎನ್ಎಸ್ಎ ಕಾಯ್ದೆ, ಸುಪ್ರಿಂಕೋರ್ಟ್
ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಾ ಕೆ ಬಾಲಕೃಷ್ಣನ್ ಹಾಗೂ ನ್ಯಾಯಮೂರ್ತಿ ಪಿ ಸತಾಶಿವಂ ಅವರನ್ನು ಒಳಗೊಂಡ ಪೀಠ, ಉತ್ತರ ಪ್ರದೇಶದ ಇಟಾ ಜೈಲಿನಲ್ಲಿರುವ ವರುಣ್ ಗಾಂಧಿ ಅವರನ್ನು ಶೀಘ್ರದಲ್ಲಿ ಬಿಡುಗಡೆಯಾಗಲಿದ್ದಾರೆ ಎನ್ನುವ ಸೂಚನೆ ನೀಡಿದರು. ನ್ಯಾಯಾಲಯ ಅಪೇಕ್ಷೆಯಂತೆ ಮುಂದಿನ ದಿನಗಳಲ್ಲಿ ಕೋಮು ಪ್ರಚೋದನಕಾರಿ ಹೇಳಿಕೆ ನೀಡುವುದಿಲ್ಲ ಎಂಬ ಮುಚ್ಚಳಿಕೆ ಬರೆದುಕೊಡಲು ವರುಣ್ ಗಾಂಧಿ ಸಮ್ಮತಿಸಿದ್ದಾರೆ.
ಉತ್ತರ ಪ್ರದೇಶ ಸರ್ಕಾರ ವರುಣ್ ವಿರುದ್ಧ ಎನ್ಎಸ್ಎ ಅಂತಹ ಗಂಭೀರ ಕಾಯ್ದೆ ದಾಖಲಿಸುವಂತ ತಪ್ಪು ಮಾಡಿಲ್ಲ. ಆದರೂ ಕೂಡಾ ಉತ್ತರ ಪ್ರದೇಶದ ಸರ್ಕಾರ ವರುಣ್ ವಿರುದ್ದ ಏಕೆ ಇಂತಹ ಕಾಯ್ದೆಯನ್ನು ಜಾರಿ ಮಾಡಿತು ಎಂಬುದನ್ನು ಏಪ್ರಿಲ್ 16 ರಂದು ನಡೆಯುವ ವಿವರಿಸುವಂತೆ ಸರ್ಕಾರಿ ವಕೀಲರಿಗೆ ಸುಪ್ರಿಂಕೋರ್ಟ್ ಸೂಚನೆ ನೀಡಿದೆ.
ಉತ್ತರ ಪ್ರದೇಶದ ಪಿಲಿಭಿತ್ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ವರುಣ್ ಗಾಂಧಿ ಅವರು ಕಳೆದ ತಿಂಗಳು 17 ರಂದು ಪಿಲಿಭಿತ್ ನಗರ ಚುನಾವಣೆ ಪ್ರಚಾರ ಕಾರ್ಯದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಕೋಮು ಪ್ರಚೋದಕ ಹೇಳಿಕೆ ನೀಡಿದ್ದರು.
(ದಟ್ಸ್ ಕನ್ನಡ ವಾರ್ತೆ)
ವರುಣ್ ಗಾಂಧಿ ಸೋಲಿಸುವೆ, ರಿಯಾಜ್ ಅಹ್ಮದ್