ಬೆಳಗಾವಿ: ಸಿಎಂ ವಿರುದ್ದ ಕಪ್ಪು ಬಾವುಟ ಪ್ರದರ್ಶನ

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿ ಲೋಕಸಭೆ ಅಭ್ಯರ್ಥಿ ಸುರೇಶ್ ಅಂಗಡಿ ಪರ ಮತಯಾಚಿಸುವ ಸಲುವಾಗಿ ಏರ್ಪಡಿಸಲಾಗಿದ್ದ ಸಭೆಯಲ್ಲಿ ಪಾಲ್ಗೊಂಡು ಪ್ರಚಾರ ಭಾಷಣ ಆರಂಭಿಸುತ್ತಿದ್ದಂತೆ ನಾರಾಯಣಗೌಡ ಬಣದ ಮಹಿಳಾ ಕಾರ್ಯಕರ್ತೆಯರ ಗುಂಪು ಸಿಎಂ ವಿರುದ್ಧ ದಿಕ್ಕಾರ ಘೋಷಣೆ ಕೂಗತೊಡಗಿದರು. ಈ ಗೊಂದಲದ ನಡುವೆಯೇ ಭಾಷಣ ಆರಂಭಿಸಿದ ಯಡಿಯೂರಪ್ಪ, ಒಂದು ಹಂತದಲ್ಲಿ ಮಹಿಳೆಯರ ದಿಕ್ಕಾರ ಘೋಷಣೆ ಮಿತಿಮೀರಿದ್ದರಿಂದ ಸಿಡಿಮಿಡಿಗೊಂಡರು.
ಏನ್ ಬೇಕು ಕೇಳ್ರಿ ಅವರಿಗೆ, ಏಕೆ ಧರಣಿ ಆರಂಭಿಸಿದ್ದಾರೆ ಎಂದು ಸಿಎಂ ಪೊಲೀಸರಿಗೆ ಆದೇಶ ನೀಡಿದರು. ಸಮಸ್ಯೆಗಳಿದ್ದರೆ ಬಗೆಹರಿಸೋಣ, ಸಭೆಗೆ ಅಡ್ಡಿಪಡಿಸುವುದು ಸರಿಯಲ್ಲ. ಸ್ವಲ್ಪ ಸಮಾಧಾನದಿಂದಿರಿ ಎಂದು ಯಡಿಯೂರಪ್ಪ ಗುಡುಗಿದರು. ಮುಖ್ಯಮಂತ್ರಿಗಳ ಎಚ್ಚರಿಕೆ ಗಣನೆಗೆ ತೆಗೆದುಕೊಳ್ಳದ ಕರವೇ ಕಾರ್ಯಕರ್ತೆಯರು ಪ್ರತಿಭಟನೆಯನ್ನು ಮುಂದುವರೆಸಿದರು.
ಬೆಳಗಾವಿ ಮಹಾನಗರ ಪಾಲಿಕೆ ಮೇಲಿರುವ ಭಗವಾಧ್ವಜ ತೆಗೆಯುವ ವಿಷಯಕ್ಕೆ ಸಂಬಂಧಿಸಿದಂತೆ ಸಂಸದ ಸುರೇಶ್ ಅಂಗಡಿ ಅವರು ಭಗವಾಧ್ವಜ ತೆಗೆಯಲು ವಿರೋಧಿಸಿದ್ದರು. ಕರವೇ ಭಗವಾಧ್ವಜ ತೆಗೆಯಲು ಮುಂದಾದಾಗ ಸಂಸದ ಅಂಗಡಿ ಮತ್ತು ಶಾಸಕ ಸಂಜಯ್ ಪಾಟೀಲ್ ಎಂಇಎಸ್ ಪರ ವಹಿಸಿ ಮಾತನಾಡಿ, ಧ್ವಜ ತೆಗೆಯಲು ಅವಕಾಶ ವಿರೋಧಿಸಿದ್ದರು. ಇದು ರಾಜ್ಯಾದ್ಯಂತ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು.
ನಂತರ ಪೊಲೀಸರು ಮಹಿಳೆಯರಮ ಮನವೊಲಿಸುವ ಪ್ರಯತ್ನ ಮುಂದುವರದೆ ಇತ್ತು. ಈ ಮಧ್ಯ ಮಾತು ಮುಂದುವೆರೆಸಿದ ಯಡಿಯೂರಪ್ಪ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಬಳ್ಳಾರಿ ಸಚಿವರಾದ ರೆಡ್ಡಿಗಳು ಮತ್ತು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಜೈಲಿಗೆ ಕಳಿಸುವೆ ಎಂಬ ಸಿದ್ದು ಮಾತಿಗೆ ಯಡಿಯೂರಪ್ಪ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಅವರಿಗೆ ದೇವರು ಬುದ್ಧಿ ಕೊಡಲಿ ಎಂದು ಸಿಎಂ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು











Click it and Unblock the Notifications