ವರುಣ್ ಮೇಲೆ ಮಾಯಾವತಿ ಬ್ರಹ್ಮಾಸ್ತ್ರ

ಎನ್ ಎಸ್ ಎ ಕಾಯ್ದೆಯಡಿಯಲ್ಲಿ ಜಾಮೀನುರಹಿತ ಒಂದು ವರ್ಷಕಾಲ ಜೈಲುವಾಸ ವಿಧಿಸಬಹುದಾಗಿದೆ. ಈ ಕಾಯ್ದೆಯ ಸೆಕ್ಷನ್ 2 ಹಾಗೂ 3ರ ಪ್ರಕಾರ ವರುಣ್ ಅವರ ಮೇಲೆ ಶಿಕ್ಷೆ ಹೇರುವ ಸಾಧ್ಯತೆಯಿದೆ. ಈ ಬಗ್ಗೆ ಜೈಲಿನಲ್ಲಿರುವ ವರುಣ್ ಅವರಿಗೆ ನೋಟಿಸ್ ಕಳಿಸಲಾಗಿದೆ ಎಂದು ಉತ್ತರಪ್ರದೇಶ ಸಚಿವ ಸಂಪುಟದ ಹೆಚ್ಚುವರಿ ಕಾರ್ಯದರ್ಶಿ ವಿಜಯ್ ಶಂಕರ್ ಪಾಂಡೆ ಹೇಳಿದ್ದಾರೆ.
ಮಾರ್ಚ್ 7 ರಂದು ಪಿಲಿಭಿತ್ ಕ್ಷೇತ್ರದಲ್ಲಿ ವರುಣ್ ಗಾಂಧಿ ಮಾಡಿದ ಭಾಷಣ, ಕೋಮು ಪ್ರಚೋದನಕಾರಿ ಎಂದು ಪರಿಗಣಿಸಿ ಸ್ಥಳೀಯ ಪೊಲೀಸರು ಚುನಾವಣಾ ಆಯೊಗದ ಆದೇಶದ ಮೇರೆಗೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ. 2 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿರಿಸುವಂತೆ ಕೋರ್ಟ್ ಆದೇಶ ಕೂಡ ನೀಡಿದೆ.ವರುಣ್ ನ್ಯಾಯಾಂಗ ಬಂಧನ, ಜನಜಾತ್ರೆಯಾಗಿ ಪರಿಣಮಿಸಿ, ಪೊಲೀಸರು ಹಾಗೂ ಬಿಜೆಪಿ ಬೆಂಬಲಿಗರ ನಡುವೆ ಕಲ್ಲುತೂರಾಟ, ಲಾಠಿಚಾರ್ಚ್ ಕೂಡ ಸಂಭವಿಸಿತ್ತು.
(ಏಜೆನ್ಸೀಸ್)
ವರುಣ್ ಗಾಂಧಿಗೆ ಜೈಲಿನಲ್ಲಿ ಮನೆಯೂಟದ ಆತಿಥ್ಯ












Click it and Unblock the Notifications