ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವರುಣ್ ಗಾಂಧಿ ಬಂಧನ ಪ್ರಹಸನಕ್ಕೆ ಕ್ಷಣಗಣನೆ
ಪಿಲಿಭಿತ್ , ಮಾ. 25 : ಜಾಮೀನು ನೀಡಬೇಕೆಂದು ಸಲ್ಲಿಸಿದ್ದ ಅರ್ಜಿಯನ್ನು ವರುಣ್ ಗಾಂಧಿ ವಾಪಾಸು ಪಡೆದಿರುವ ಹಿನ್ನೆಲೆಯಲ್ಲಿ, ಯಾವುದೇ ಕ್ಷಣದಲ್ಲಿ ಅವರನ್ನು ಬಂಧಿಸುವ ಸಾಧ್ಯತೆಗಳಿವೆ. ಪಿಲಿಭಿತ್ ಕ್ಷೇತ್ರಕ್ಕೆ ಆಗಮಿಸುವ ವರುಣ್ ರನ್ನು ಸ್ವಾಗತಿಸಲು ಬಿಜೆಪಿಯ ಕಾರ್ಯಕರ್ತರು, ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಕಾದಿದ್ದಾರೆ.
ವರುಣ್ ಬಂಧನ ಪ್ರಹಸನಕ್ಕೆ ಸರಿಯಾದ ವೇದಿಕೆ ಸಜ್ಜುಗೊಳಿಸಲು ಬಿಜೆಪಿ ಹೈಕಮಾಂಡ್ ಹಿರಿಯ ನಾಯಕ ಕಲ್ ರಾಜ್ ಮಿಶ್ರಾ ಈಗಾಗಲೇ ಪಿಲಿಭಿಟ್ ನಲ್ಲಿ ಬೀಡುಬಿಟ್ಟಿದ್ದಾರೆ. ಬೃಹತ್ ಮೆರವಣಿಗೆಯೊಂದಿಗೆ ವರುಣ್ ಜಿಲ್ಲಾ ಕೋರ್ಟ್ ಮುಂದೆ ಶರಣಾಗುವ ಸಾಧ್ಯತೆಗಳಿವೆ. 29 ವರ್ಷದ ವರುಣ್ ಗಾಂಧಿ ಜಾಮೀನು ಕೋರಿ ದೆಹಲಿ ಹೈ ಕೋರ್ಟ್ ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರ ಹಿಂದಕ್ಕೆ ಪಡೆದಿದ್ದರು. ಪ್ರಚೋದನಕಾರಿ ಭಾಷಣ ಮಾಡಿದ್ದ ವರುಣ್ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಚುನಾವಣಾ ಆಯೋಗ ಸ್ಥಳೀಯ ಪೊಲೀಸರಿಗೆ ಸೂಚಿಸಿತ್ತು.
(ದಟ್ಸ್
ಕನ್ನಡ
ವಾರ್ತೆ)
ಕರ್ನಾಟಕದಲ್ಲೊಬ್ಬ
ವರುಣ
ಗಾಂಧಿ
Comments
bjp ಬಿಜೆಪಿ ಕಾಂಗ್ರೆಸ್ congress kannada ಕನ್ನಡ ls polls 2009 varun gandhi pilibhit ವರುಣ್ ಗಾಂಧಿ ಪಿಲಿಭಿತ್ ಪ್ರಚೋದನಕಾರಿ ಹೇಳಿಕೆ ಲೋಕಸಭೆ ಚುನಾವಣೆ 2009
Story first published: Saturday, March 28, 2009, 11:07 [IST]