ಚೇಂಜ್ ಇಂಡಿಯಾ ಸಭೆಗೆ ಅರುಣ್ ಜೇಟ್ಲಿ, ಅನಂತ್

Arun Jaitely to attend meeting in Bangalore!
ಬೆಂಗಳೂರು, ಮಾ. 19 : 'ಚೇಂಜ್ ಇಂಡಿಯಾ' ಸಂಘಟನೆ ಮಾರ್ಚ್ 21ರಂದು ಬೆಂಗಳೂರಿನಲ್ಲಿ ಆಯೋಜಿಸಿರುವ ಸಭೆಯಲ್ಲಿ ಬಿಜೆಪಿಯ ಇಬ್ಬರು ಪ್ರಧಾನ ಕಾರ್ಯದರ್ಶಿಗಳಾದ ಅರುಣ್ ಜೇಟ್ಲಿ ಮತ್ತು ಅನಂತಕುಮಾರ್ ಭಾಗವಹಿಸಲಿದ್ದಾರೆ.

ಜಯನಗರದಲ್ಲಿರುವ ಎನ್ಎಮ್‌ಕೆಆರ್‌ವಿ ಕಾಲೇಜಿನ ಸಭಾಂಗಣದಲ್ಲಿ ಸಂಜೆ ಸಂಘಟಿಸಲಾಗಿರುವ ಸಭೆಯಲ್ಲಿ ರಾಷ್ಟ್ರ ಎದುರಿಸುತ್ತಿರುವ ವಿವಿಧ ಸಮಸ್ಯೆಗಳು ಮತ್ತು 'ಆಡಳಿತ, ರಕ್ಷಣೆ ಹಾಗು ಅಭಿವೃದ್ಧಿ' ಕುರಿತಂತೆ ಬಿಜೆಪಿಯ ಕಾರ್ಯಸೂಚಿಗಳ ಮೇಲೆ ಚರ್ಚೆ ನಡೆಸಲಿದ್ದಾರೆ. ರಾಜ್ಯಸಭಾ ಸದಸ್ಯ ಸಂಸದ ರಾಜೀವ್ ಚಂದ್ರಶೇಖರ್ ಕೂಡ ಈ ಚರ್ಚೆಯಲ್ಲಿ ಪಾಲ್ಗೊಂಡು ತಮ್ಮ ಅನಿಸಿಕೆಗಳನ್ನು ಮಂಡಿಸಲಿದ್ದಾರೆ.

ರಾಜನೀತಿ ಮತ್ತು ರಾಜಕಾರಣ ವಿಷಯಕ್ಕೆ ಸಂಬಂಧಿಸಿದಂತೆ ಅಕ್ಷರಸ್ಥ ನಾಗರಿಕರು ರಾಜಕಾರಣಿಗಳೊಂದಿಗೆ ಬೆರೆಯಬೇಕು ಮತ್ತು ಬದಲಾವಣೆ ತರುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದಿರುವ ಚೇಂಜ್ ಇಂಡಿಯಾದ ಹರಿಕಾರ ಆರ್ ಕೆ ಮಿಶ್ರಾ ಬೆಂಗಳೂರಿನ ನಾಗರಿಕರು ಈ ಚರ್ಚೆಯಲ್ಲಿ ಭಾಗವಹಿಸಬೇಕು ಎಂದು ಆಹ್ವಾನ ನೀಡಿದ್ದಾರೆ.

ಈ ಸಭೆಯಲ್ಲಿ ಭಾಗವಹಿಸಲಿಚ್ಛಿಸುವವರು [email protected] ಈಮೇಲ್ ವಿಳಾಸಕ್ಕೆ ಪತ್ರ ಬರೆದು ತಮ್ಮ ಭಾಗವಹಿಸುವಿಕೆಯನ್ನು ದೃಢಪಡಿಸಿಕೊಳ್ಳಬಹುದು. ಸಭೆಯ ಸಂಯೋಜಕರಾಗಿರುವ ಆರ್ ಕೆ ಮಿಶ್ರಾ ಅವರಿಗೆ [email protected] ಮೂಲಕ ಬಿಜೆಪಿ ನಾಯಕರಿಗೆ ಕೇಳಲು ಪ್ರಶ್ನೆಗಳನ್ನೂ ಕಳಿಸಬಹುದು.

ದಿನಾಂಕ ಮತ್ತು ಸಮಯ : 21ನೇ ಮಾರ್ಚ್, ಶನಿವಾರ. ಸಂಜೆ 4ರಿಂದ 6.
ಸ್ಥಳ : ಎನ್ಎಮ್‌ಕೆಆರ್‌ವಿ ಆಡಿಟೋರಿಯಂ, ಜಯನಗರ, 3ನೇ ಬ್ಲಾಕ್, ಬೆಂಗಳೂರು.

(ದಟ್ಸ್ ಕನ್ನಡ ವಾರ್ತೆ)

ಇದನ್ನೂ ಓದಿ
ಬೆಂಗಳೂರಿನ ವಾಹನ ದಟ್ಟಣೆ ಸಮಸ್ಯೆಗೆ ಪರಿಹಾರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+