ಮಾಯಾವತಿ ಬಿಜೆಪಿ ಬೆಂಬಲ ನೀಡುತ್ತಾರೆ :ಎಸ್ಪಿ
ಲಖನೌ, ಮಾ. 16 : ಬಿಜೆಪಿ ಮತ್ತು ಬಿಎಸ್ಪಿ ಒಂದೇ ನಾಣ್ಯದ ಎರಡು ಮುಖಗಳು, ನೀವು ಬಿಎಸ್ಪಿ ಗೆ ನೀಡುವ ಒಂದೊಂದು ಮತವು ಪರೋಕ್ಷವಾಗಿ ಬಿಜೆಪಿಗೆ ಸಹಾಯವಾಗುತ್ತದೆ. ಒಂದು ವೇಳೆ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಆಡ್ವಾಣಿ ಪ್ರಧಾನಿಯಾದರೆ, ಉತ್ತರಪ್ರದೇಶದ ಮುಖ್ಯಮಂತ್ರಿ ಮಾಯಾವತಿ ಉಪಪ್ರಧಾನಿ ಯಾಗಬಹುದು ಎಂದು ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಅಮರ್ ಸಿಂಗ್ ಹೇಳಿದ್ದಾರೆ.
ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತ ಅಮರ್ ಸಿಂಗ್, ಈ ಹಿಂದೆ ಮೂರೂ ಬಾರಿ ಬಿಎಸ್ಪಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾಗ ಬಿಜೆಪಿ ಬೆಂಬಲ ನೀಡಿತ್ತು. ಗುಜರಾತ್ ಚುನಾವಣೆಯ ವೇಳೆ ಬಿಜೆಪಿಯ ನಾಯಕ ಲಾಲ್ ಜೀ ಟ೦ಡನ್ ಗೆ ಮಾಯಾ ರಾಖಿ ಕಟ್ಟಿದ್ದರು. ರಾಜಕೀಯವನ್ನು ವ್ಯಾಪಾರದ ದೃಷ್ಟಿಯಲ್ಲಿ ನೋಡುವ ಮಾಯಾವತಿ, ಈ ದೇಶದ ಪ್ರಧಾನಿಯಾಗುವ ಕನಸು ನನಸಾಗುವುದಿಲ್ಲ. ತೃತೀಯ ರಂಗದಲ್ಲಿರುವ ಹೆಚ್ಚಿನ ಎಲ್ಲಾ ಪಕ್ಷಗಳು ಈ ಹಿಂದೆ ಬಿಜೆಪಿ ಜೊತೆ ಸಖ್ಯ ಬೆಳೆಸಿದ್ದವು ಎಂದು ಲೇವಡಿ ಮಾಡಿದರು.
ನಮ್ಮ ಮತ್ತು ಕಾಂಗ್ರೆಸ್ ನಡುವೆ ಸೀಟು ಹೊಂದಾಣಿಕೆಯಾಗದಿದ್ದರೂ ನಮ್ಮೆರಡು ಪಕ್ಷಗಳ ನಡುವೆ ಹೆಚ್ಚಿನ ಭಿನ್ನಾಬಿಪ್ರಾಯಗಳೇನೂ ಇಲ್ಲ ಎಂದು ಅಮರ್ ಸಿಂಗ್ ಹೇಳಿದರು. ಲಖನೌ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಲಾಲ್ ಜೀ ಟ೦ಡನ್ ಗೆ ವಾಜಪೇಯಿ ಬೆಂಬಲವಿದ್ದರೂ ನಮ್ಮ ಅಭ್ಯರ್ಥಿ ಸಂಜಯ್ ದತ್ತ್ ಗಾಂಧಿ ಗೆಲುವು ಖಚಿತ ಎಂದರು.
(ದಟ್ಸ್ ಕನ್ನಡ ವಾರ್ತೆ)
ಮಾಯಾ ಭೋಜನಕೂಟಕ್ಕೆ ಜಯಲಲಿತಾ ಗೈರು












Click it and Unblock the Notifications