ಒರಿಸ್ಸಾ, ಬಿಜೆಡಿ ಕ್ರಮದಿಂದ ಬಿಜೆಪಿಗೆ ತೀವ್ರ ಹಿನ್ನೆಡೆ

ಭುವನೇಶ್ವರ, ಮಾ. 9 : ಒರಿಸ್ಸಾದಲ್ಲಿ ಬಿಜೆಪಿ ಮೈತ್ರಿ ಕಡಿದುಕೊಂಡಿರುವ ಬಿಜೆಡಿ ಎಡಪಕ್ಷ ಮತ್ತು ಇತರೆ ಪಕ್ಷಗಳ ಮೂಲಕ ಸರ್ಕಾರ ಉಳಿಸಿಕೊಳ್ಳಲು ಹರಸಾಹಸ ನಡೆಸಿದ್ದು, ಮುಖ್ಯಮಂತ್ರಿ ನವೀನ ಪಟ್ನಾಯಕ್ ಅದರಲ್ಲಿ ಯಶಸ್ವಿಯಾಗುವ ಸಾಧ್ಯತೆಗಳಿವೆ. ಮಾ. 11 ರಂದು ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚಿಸಲು ರಾಜ್ಯಾಪಾಲ ಎಂ ಸಿ ಭಂಡಾರೆ ಅವರಿಗೆ ಸಿಎಂ ಮನವಿ ಸಲ್ಲಿಸಿದ್ದು, ಗೆಲ್ಲುವ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಲೋಕಸಭೆ ಚುನಾವಣೆ ಮುನ್ನ ಬಿಜೆಪಿ ನೇತೃತ್ವದ ಭಾರತೀಯ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ (ಎನ್ ಡಿಎ) ಭಾರಿ ಪೆಟ್ಟು ನೀಡಿದ್ದಾರೆ.

ಕಳೆದ 11 ವರ್ಷಗಳಿಂದ ಗಟ್ಟಿಯಾಗಿದ್ದ ಬಿಜೆಪಿ-ಬಿಜೆಡಿ ಸಂಬಂಧ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಯ ಸ್ಥಾನ ಹಂಚಿಕೆ ವಿಷಯದಲ್ಲಿ ಮುರಿದು ಬಿದ್ದಿದೆ. ಈ ಅವಕಾಶವನ್ನು ಎಡಪಕ್ಷಗಳು, ಜೆಎಂಎಂ, ಎನ್ ಸಿಪಿಯಂತಹ ಯುಪಿಎ ಪರವಾಗಿರುವ ಪಕ್ಷಗಳು ಬಾಚಿಕೊಳ್ಳುವಲ್ಲಿ ಸಫಲವಾಗಿರುವುದರಿಂದ ರಾಷ್ಟ್ರ ಮಟ್ಟದಲ್ಲಿ ಇದು ಪರಿಣಾಮ ಬೀರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಬಿಜೆಡಿ ಬಿಜೆಪಿಗೆ ಭರಿಸಲಾಗದ ಆಘಾತ ನೀಡಿದೆ. ನವೀನ್ ಅವರ ಈ ನಿಲುವು ನನಗೆ ತೀವ್ರ ನೋವು ತಂದಿದೆ. ಎನ್ ಡಿಎ ಮೈತ್ರಿಕೂಟ ಎಂದಿಗೂ ಅವರನ್ನು ಕಡೆಗಣಿಸಿರಲಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)
ಒರಿಸ್ಸಾದಲ್ಲಿ ಬಿಜೆಪಿ, ಬಿಜೆಡಿ ಮೈತ್ರಿ ಖತಂ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+