ಕಲಾವಿದರಿಂದ ಮಾಹಿತಿ ಕೋರಿಕೆ
ಬೆಂಗಳೂರು, ಮಾ. 7: ಕರ್ನಾಟಕ ಲಲಿತಕಲಾ ಅಕಾಡೆಮಿ ವತಿಯಿಂದ ರಾಜ್ಯದ ಕಲಾವಿದರ ಪರಿಚಯಾತ್ಮಕ ಮಾಹಿತಿ ಪುಸ್ತಕವೊಂದನ್ನು ಪ್ರಕಟಿಸುವ ಯೋಜನೆ ರೂಪಿಸಿದ್ದು, ಈ ಕುರಿತು ಸ್ವವಿವರವುಳ್ಳ ಮಾಹಿತಿಯೊಂದಿಗೆ ಹಾಗೂ ಇತ್ತೀಚಿನ ಎರಡು ಭಾವಚಿತ್ರದೊಂದಿಗೆ ತಮ್ಮ ಎರಡು ಕಲಾಕೃತಿಗಳ ಛಾಯಾಚಿತ್ರಗಳನ್ನು ಕಲಾವಿದರು ಅಕಾಡೆಮಿಗೆ ಕಳಿಸಿಕೊಡಲು ಕೋರಿದೆ.
ವ್ಯಕ್ತಿ ಪರಿಚಯದೊಂದಿಗೆ ಕಲಾವಿದರು ತಮ್ಮ ಹೆಸರು, ಹುಟ್ಟಿದ ದಿನಾಂಕ, ಖಾಯಂ ವಿಳಾಸ, ಕನಿಷ್ಠ ವಿದ್ಯಾರ್ಹತೆ ಎಂ.ಎಂ.ಜಿ.ಡಿ.ಮೇಲ್ಪಟ್ಟು, ಕೆಲಸ ನಿರ್ವಹಿಸುತ್ತಿರುವ ಸ್ಥಳ/ವಿಳಾಸ ಹಾಗೂ ದೂರವಾಣಿ.ಮೊಬೈಲ್, ಇ-ಮೇಲ್ , ವಿಶೇಷ ಪರಿಣಿತಿ, ಪ್ರದರ್ಶನ/ಬಹುಮಾನ, ಕಲಾಶಿಬಿರ/ಕಾರ್ಯಗಾರ, ಹವ್ಯಾಸಿ/ಕಲಾವಿದರು (50 ವರ್ಷ) ನಮೂನೆಯಲ್ಲಿ ಭರ್ತಿಮಾಡಿ ಏಪ್ರಿಲ್ 25 ರೊಳಗೆ ಅಕಡೆಮಿಗೆ ತಲುಪುವಂತೆ ಕಳಿಸುವುದು. ತಾವು ಕಳುಹಿಸುವ ಪರಿಚಯಾತ್ಮಕ ಮಾಹಿತಿಯನ್ನು ಪ್ರಕಟಿಸುವ ಅಂತಿಮ ತೀರ್ಮಾನ ಸಂಪಾದಕ ಮಂಡಲಿಯಾದಾಗಿರುತ್ತದೆ.
ಹೆಚ್ಚಿನ ವಿವರಗಳಿಗೆ ಈ ಸಂಪುಟದ ಸಂಪಾದಕರಾದ ಎಸ್. ಎಂ. ಜಂಬುಕೇಶ್ವರ, (ದೂರವಾಣಿ 9886623496) ಸದಸ್ಯರು ಕರ್ನಾಟಕ ಲಲಿತಕಲಾ ಅಕಾಡೆಮಿ ಇವರನ್ನು ಸಂರ್ಪಕಿಸಬಹುದಾಗಿದೆ.
ಪ್ರಶಸ್ತಿ ಪ್ರದಾನ ಸಮಾರಂಭ ಮುಂದೂಡಿಕೆ
ಚಿಕ್ಕಮಗಳೂರು: ಚುನಾವಣಾ ನೀತಿ ಸಂಹಿತಿ ಜಾರಿಯಲ್ಲಿರುವ ಕಾರಣ ಕರ್ನಾಟಕ ಲಲಿತಕಲಾ ಅಕಾಡೆಮಿಯು ಮಾರ್ಚ್ 15 ರಂದು ಇಲ್ಲಿ ನಡೆಸಬೇಕಾಗಿದ್ದ 2008 ರ ಗೌರವ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಮಾರ್ಚ್ 22 ರಂದು ನಡೆಸಬೇಕಾಗಿದ್ದ ವಾರ್ಷಿಕ ಕಲಾಪ್ರದರ್ಶನ, ಕಲಾಕೃತಿ ಬಹುಮಾನ ಸಮಾರಂಭಗಳನ್ನು ಅನಿರ್ಧಿಷ್ಟ ಕಾಲದವರೆಗೆ ಮುಂದೂಡಲಾಗಿದೆ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿಯ ಪ್ರಕಟಣೆ ತಿಳಿಸಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications