ರಾಘವೇಂದ್ರನಿಗೆ ಟಿಕೆಟ್ ಸಮರ್ಥಿಸಿಕೊಂಡ ಸಿಎಂ

ರಾಘವೇಂದ್ರನಿಗೆ ಲೋಕಸಭೆ ಟಿಕೆಟ್ ದೊರೆಯುತ್ತಿದ್ದಂತೆ ಯಡಿಯೂರಪ್ಪ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹೇಳಿಕೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದರು. ರಾಘವೇಂದ್ರ ಸ್ಪರ್ಧಿಸುವುದು ನನ್ನ ತೀರ್ಮಾನವಲ್ಲ. ಶಿವಮೊಗ್ಗದಲ್ಲಿ ಗೆಲುವು ಸಾಧಿಸಲು ಸೂಕ್ತ ಅಭ್ಯರ್ಥಿಗೆ ವರಿಷ್ಠರು ಹುಡುಗಾಟ ನಡೆಸಿದ್ದರು. ಆಗ, ಜಿಲ್ಲೆಯ ಕಾರ್ಯಕರ್ತರು ಹಾಗೂ ಮುಖಂಡರು ಸೇರಿ ಒಮ್ಮತದ ನಿರ್ಧಾರ ಕೈಗೊಂಡು ರಾಘವೇಂದ್ರನಿಗೆ ಟಿಕೆಟ್ ನೀಡಿ ಎಂದು ಒತ್ತಡ ಹೇರಿದ್ದರಿಂದ ಟಿಕೆಟ್ ಸಿಕ್ಕಿದೆಯೇ ಹೊರತು, ಅದರಲ್ಲಿ ನನ್ನ ಪಾತ್ರವೇನೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ರಾಘವೇಂದ್ರ ಈಗಾಗಲೇ ಪುರಸಭೆ ಸದಸ್ಯನಾಗಿದ್ದಾನೆ. ಅನೇಕ ಚುನಾವಣೆಗಳಲ್ಲಿ ಪಕ್ಷಕ್ಕಾಗಿ ದುಡಿದಿದ್ದಾನೆ. ಈ ಹಿನ್ನೆಲೆಯಲ್ಲಿ ಆತನಿಗೆ ವರಿಷ್ಠರು ಆತನಿಗೆ ಟಿಕೆಟ್ ನೀಡಲು ನಿರ್ಧರಿಸಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.
ಯಡಿಯೂರಪ್ಪ ಜೆಡಿಎಸ್ ಪಕ್ಷವನ್ನು ಅಪ್ಪ ಮಕ್ಕಳ ಪಕ್ಷ, ಕುಟುಂಬ ಪಕ್ಷ, ಅಪ್ಪ-ಮಕ್ಕಳ-ಸೊಸೆ ಪಕ್ಷ ಎಂದು ದೇವೇಗೌಡರ ಮೇಲೆ ಅನೇಕ ಸಾರಿ ಟೀಕೆ ಮಾಡಿದ್ದರು. ಇದೀಗ ಯಡಿಯೂರಪ್ಪ ತಮ್ಮ ಪುತ್ರನಿಗೆ ಟಿಕೆಟ್ ಕೊಡಿಸಿದ್ದರಿಂದ ಅವರು ವ್ಯಾಪಕ ಟೀಕೆಗೆ ಗುರಿಯಾಗಬೇಕಾಗಿದೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಂತೂ ಯಡಿಯೂರಪ್ಪ ಅವರ ಜನ್ಮಜಾಲಾಡುತ್ತಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಸಿಎಂ ಪುತ್ರ ಸ್ಪರ್ಧೆಗೆ ಎಚ್ಡಿಕೆ ತೀವ್ರ ವಿರೋಧ
ಲಿಂಗಾಯಿತರಿಗೆ ಆದ್ಯತೆ ಕೊಡಿ, ಎಂಪಿ ಪ್ರಕಾಶ್











Click it and Unblock the Notifications