ಬೆಂಗಳೂರಿನಲ್ಲಿ ವಿಮಾನ ಅಪಘಾತ, 3 ದಹನ
ಬೆಂಗಳೂರು,
ಮಾ. 6 : ಆಕಸ್ಮಿಕವಾಗಿ ಲಘು ವಿಮಾನವೊಂದು ಅಪಘಾತಕ್ಕೀಡಾದ ಹಿನ್ನೆಲೆಯಲ್ಲಿ ಅದರಲ್ಲಿದ್ದ ಮೂವರು ಸಜೀವ ದಹನವಾಗಿರುವ ದಾರುಣ ಘಟನೆ ನಗರದ ಕುಂಬಳಗೋಡು ಹತ್ತಿರವಿರುವ ಶೇಷಗಿರಿಹಳ್ಳಿಯ ಮೆಗಾಸಿಟಿ ಲೇ ಔಟ್ ನಲ್ಲಿ ಶುಕ್ರವಾರ ಮಧ್ಯಾಹ್ನ3.40 ರ ಸುಮಾರಿಗೆ ನಡೆದಿದೆ. ಎನ್ ಎ ಎಲ್ ನಿರ್ಮಿತ ಬಹುಪಯೋಗಿ ಸರಸ್ ಲಘು ವಿಮಾನ ಎಂದು ಗುರುತಿಸಲಾಗಿದ್ದು, ಪರೀಕ್ಷಾರ್ಥವಾಗಿ ವಿಂಗ್ ಕಮಾಂಡರ್ ಪ್ರವೀಣ್ ಕುಮಾರ್ ಹಾಗೂ ಇನ್ನಿತರರು ಹಾರಾಟ ನಡೆಸುವಾಗ ಈ ದುರಂತ ಸಂಭವಿಸಿದೆ. ಘಟನೆ ನಡೆದ ಸ್ಥಳ ಬಳಿಯಲ್ಲಿ ಪ್ಯಾರಚ್ಯೂಟ್ ಗಳು ಪತ್ತೆಯಾಗಿದೆ ಎಂದು ವರದಿ ಬಂದಿದೆ. id="toptextpromo">ಪೊಲೀಸರು
ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಕಾರಣ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಖಾಲಿ ಜಾಗದಲ್ಲಿ ಈ ಅಪಘಾತ ಸಂಭವಿಸಿದ್ದು, ಲಘು ವಿಮಾನದಲ್ಲಿದ್ದ ಮೂವರು ಸಜೀವ ದಹನವಾಗಿದ್ದಾರೆ ಎನ್ನಲಾಗಿದೆ. ಅಪಘಾತವಾದ ತಕ್ಷಣ ಭಾರಿ ಶಬ್ದವಾಯಿತು. ಇದರಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಅಗ್ನಿಶಾಮಕ ದಳ ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿದೆ. ವಿಮಾನ ಅಪಘಾತವಾದ ಸ್ಥಳದಲ್ಲಿ ವಸತಿಗಳು ಇರಲಿಲ್ಲ. ತರಬೇತಿ ವಿಮಾನ ಎನ್ನಲಾಗಿದೆ. 6 ಸೀಟಿನ ಲಘು ವಿಮಾನ ಇದಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. id='are-slot-1' class='oiad oi-axt oiadv'> id='top-searched-articles'>(ದಟ್ಸ್
ಕನ್ನಡ ವಾರ್ತೆ)











Click it and Unblock the Notifications