ಸತ್ಯಂ ಖರೀದಿಸಲು ಐಬಿಎಂ ಒಲವು

ಸತ್ಯಂ ಹಗರಣದಿಂದ ನೂತರವಾಗಿ ಜಾರಿಗೆ ಬಂದಿರುವ ಸರ್ಕಾರಿ ಆಡಳಿತ ಮಂಡಳಿಯ ಮುಖ್ಯಸ್ಥರೊಂದಿಗೆ ಐಬಿಎಂ ಕಂಪನಿಯೂ ಚರ್ಚೆ ನಡೆಸಿದೆ ಎಂದು ಐಬಿಎಂ ಕಂಪನಿಯ ಮೂಲಗಳು ತಿಳಿಸಿವೆ, ಈ ಹಿಂದೆ ಸತ್ಯಂ ಕಂಪನಿಯನ್ನು ಖರೀದಿಸಲು ಸ್ಪೈಸ್ ಟೆಲಿಕಾಂ ಹಾಗೂ ಎಲ್ ಅಂಡ್ ಟಿ ಕಂಪನಿಗಳು ಮುಂದಾಗಿದ್ದವು. ಇದರ ಜೊತೆಗೆ ಇದೀಗ ಐಬಿಎಂ ಸೇರಿಕೊಂಡಿದೆ. ಸತ್ಯಂ ಮುಖ್ಯಸ್ಥ ರಾಮಲಿಂಗರಾಜು ಮಾಡಿದ 7800 ಕೋಟಿ ರುಪಾಯಿಗಳ ಹಗರಣದಿಂದ ಕಂಪನಿ ತೀವ್ರ ಸಂಕಷ್ಟಕ್ಕೆ ಒಳಗಾಗಿತ್ತು. ನಂತರ ಕೇಂದ್ರ ಸರ್ಕಾರ ಖಾಸಗಿ ಆಡಳಿತ ಮಂಡಳಿಯನ್ನು ವಜಾಗೊಳಿಸಿ ಕಿರಣ್ ಕಾರ್ಣಿಕ್ ನೇತೃತ್ವದ ನೂತ ಆಡಳಿತ ಮಂಡಳಿಯನ್ನು ನೇಮಿಸಿತ್ತು.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications