ಬಿಜೆಪಿಯನ್ನು ಸತ್ಯಂ ಕಂಪನಿಗೆ ಹೋಲಿಸಿದ ಖರ್ಗೆ

ಸತ್ಯಮ್ ಸಂಸ್ಥೆ ಅಧ್ಯಕ್ಷ ರಾಮಲಿಂಗರಾಜು ತನ್ನದೇ ಸಂಸ್ಥೆಯ ಲೆಕ್ಕಪತ್ರವನ್ನು ತಿರುಚಿದ ಹಾಗೆ ಬಿಜೆಪಿಯವರ ಆಳ್ವಿಕೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದ್ದರೆ ಇತ್ತ ಮುಖ್ಯಮಂತ್ರಿ ಯಡಿಯೂರಪ್ಪ ಸರಕಾರದ ಸಾಧನೆಯ ಸುಳ್ಳು ಮಾಹಿತಿಯನ್ನು ಜನರಿಗೆ ನೀಡುತ್ತಿದ್ದಾರೆ. ಆಕಳು ಮುಖದ ಹೋರಿಯಂತಿರುವ ಗೃಹ ಸಚಿವ ವಿ ಎಸ್ ಆಚಾರ್ಯ ತಮ್ಮ ಹುದ್ದೆಗೆ ನಾಲಾಯಕ್ ಮುಖ್ಯಮಂತ್ರಿಗಳು ಅವರ ರಾಜೀನಾಮೆ ಕೇಳಬೇಕು ಎಂದು ಹೇಳಿದರು.
ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿ, ವಿ ಎಸ್ ಆಚಾರ್ಯ ತನ್ನ ಹುದ್ದೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ, ಅವರ ರಾಜೀನಾಮೆ ಕೇಳುವ ಪ್ರಶ್ನೆಯೇ ಇಲ್ಲ. ಗುಂಡೂರಾವ್ ಅವರಿಂದ ಹಿಡಿದು ಕುಮಾರಸ್ವಾಮಿ ತನಕದ ಎಲ್ಲರ ಅಧಿಕಾರದ ಅವಧಿಯಲ್ಲಿ ಇಂತಹ ಸಣ್ಣಪುಟ್ಟ ಘಟನೆಗಳು ನಡೆಯುತ್ತ ಬಂದಿದೆ, ಆದರೆ ಪ್ರತಿಪಕ್ಷದವರಿಗೆ ಬಿಜೆಪಿ ಅಧಿಕಾರದ ಅವಧಿಯಲ್ಲಿ ನಡೆಯುವ ಘಟನೆಗಳು ಮಾತ್ರ ನೆನಪಿಗೆ ಬರುತ್ತದೆ ಎಂದು ಯಡಿಯೂರಪ್ಪ ಟೀಕಿಸಿದರು.
(ದಟ್ಸ್ ಕನ್ನಡ ವಾರ್ತೆ)
ಸಂಪಂಗಿ ಪುರಾಣ ಪ್ರತಿಧ್ವನಿ, ಪ್ರತಿಪಕ್ಷಗಳ ಧರಣಿ












Click it and Unblock the Notifications