ಪಬ್ ವಿರುದ್ಧ ತೇಜಸ್ವಿನಿ ರಮೇಶ್ ಗುಡುಗು

ವ್ಯಾಲೆಂಟೈನ್ ದಿನಾಚರಣೆ ಇನ್ನೂ ಒಂದು ವಾರ ಇರುವಾಗಲೇ ಈ ಕುರಿತು ಭಿನ್ನ ಹೇಳಿಕೆಗಳು ಸಮಾಜದ ವಿವಿಧ ವಲಯಗಳಿಂದ ಬರುತ್ತಿವೆ. ಒಂದು ಕಡೆ ರಾಮಸೇನೆಯಿಂದ ಬೆದರಿಕೆ; ಸೇನೆಯ ಬೆದರಿಕೆಗೆ ಜಗ್ಗುವುದಿಲ್ಲ ಎಂಬ ಹೇಳಿಕೆಗಳು ಇನ್ನೊಂದೆಡೆಗಳಿಂದ ನುಗ್ಗಿ ಬರುತ್ತಿದ್ದು ವಾದವಿವಾದಗಳು ದಿನೇ ದಿನೇ ಜಟಿಲವಾಗುತ್ತಿದೆ. ಕೆಲವು ಸ್ತ್ರೀವಾದಿ ಗುಂಪುಗಳಿಂದ ಮತ್ತು ಕೆಲವು ಇಂಗ್ಲಿಷ್ ಪತ್ರಿಕೆಗಳಿಂದ ಪಬ್ ಸಂಸ್ಕೃತಿಗೆ ಬೆಂಬಲ ವ್ಯಕ್ತವಾಗುತ್ತಿದ್ದರೆ ಸಾಂಪ್ರದಾಯಿಕ ಭಾರತೀಯ ಜೀವನ ಶೈಲಿಯಲ್ಲಿ ಇನ್ನೂ ನಂಬಿಕೆ ಇಟ್ಟಿರುವ ವಲಯಗಳಿಂದ ಪ್ರತಿರೋಧ ಬರುತ್ತಿವೆ.
ಪ್ರೇಮಿಗಳ ದಿನ ಆಚರಿಸಲು ಬಿಡುವುದಿಲ್ಲವೆಂದು ಶ್ರೀರಾಮಸೇನೆ ಟೊಂಕಕಟ್ಟಿ ನಿಂತಿದ್ದರೆ, ಅಗ್ನಿ ಶ್ರೀಧರ್ ಅದ್ಹೇಗೆ ತಡೆಯುತ್ತೀರೆಂದು ಸೆಡ್ಡು ಹೊಡೆದಿದ್ದಾರೆ. ಹೇಳಿಕೆ ಕೊಡದಿದ್ದರೆ ತಪ್ಪಾದೀತೆಂದು ನಮ್ಮ ಗೃಹ ಸಚಿವ ಆಚಾರ್ಯರೂ ಪ್ರೇಮಿಗಳ ಬೆಂಬಲಿಗೆ ನಿಂತಿರುವುದಾಗಿ ಹೇಳಿದ್ದಾರೆ. ಪ್ರೇಮಿಗಳನ್ನು ಅವರವರ ಪಾಡಿಗೆ ಇರಲು ಬಿಡಿ ಎಂದು ಮಾಜಿ ಗಿರಿಕನ್ಯೆ ಜಯಮಾಲಾ ರಾಖಿ ವಿರೋಧಿ ಸಂಸ್ಕೃತಿಗೆ ಠಸ್ಸೆ ಒತ್ತಿದ್ದಾರೆ.
ಈ ಮಧ್ಯೆ ತೇಜಸ್ವಿನಿ ರಮೇಶ್ ವಿವಾದದ ಅಖಾಡಕ್ಕೆ ಧುಮುಕಿದ್ದಾರೆ. ಎತ್ತು ಏರಿಗೆ ಕೋಣ ನೀರಿಗೆ ಎಂಬ ಮಾತಿಗೆ ವಿರುದ್ಧ ಹೇಳಿಕೆ ನೀಡುವಲ್ಲಿ ತೇಜಸ್ವಿನಿ ರಮೇಶ್ ಸಿದ್ಧಹಸ್ತರು. ಅವರ ಪಕ್ಷವಾದ ಕಾಂಗ್ರೆಸ್ಸಿನ ಅಧಿಕೃತ ವಕ್ತಾರರ ನಿಲುವಿನ ವಿರುದ್ಧವೇ ಅವರು ಮಾತನಾಡಿದ್ದು ಅದು ಇನ್ನೊಂದು ವಿವಾದದ ಕೇಂದ್ರವಾಗುವುದು ನಿಸ್ಸಂಶಯ. ಬೆಂಗಳೂರಿನಲ್ಲಿ ಏರುತ್ತಿರುವ ಪಬ್ ಪರ ಲಾಬಿಗಳ ವಿರುದ್ಧ ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧೀ ಅವರಿಗೆ ತೇಜಸ್ವಿನಿ ದೂರು ಕೊಡುವುದಾಗಿಯೂ ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications