ರಾಜು ಪಂಗಡಕ್ಕೆ ಜಾಮೀನು ಸಾಧ್ಯವಿಲ್ಲ ;ಕೋರ್ಟ್
ಹೈದರಾಬಾದ್ , ಜ. 28: ಸತ್ಯಂ ಕಂಪ್ಯೂಟರ್ಸ್ ನ ಮಾಜಿ ಸಿಇಒ ರಾಮಲಿಂಗರಾಜು ಹಾಗೂ ಇತರರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸ್ಥಳೀಯ ನ್ಯಾಯಾಲಯ ಇಂದು ತಿರಸ್ಕರಿಸಿದೆ.
ರಾಮಲಿಂಗರಾಜು ಸೇರಿದಂತೆ ಸತ್ಯಂ ಕಂಪ್ಯೂಟರ್ಸ್ ನ ಮಾಜಿ ವ್ಯವಸ್ಥಾಪಕ ನಿರ್ದೇಶಕ ರಾಮ ರಾಜು ಹಾಗೂ ಮಾಜಿ ಸಿಎಫ್ ಒ ವದ್ಲಮಣಿ ಶ್ರೀನಿವಾಸ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕೈಗೆತ್ತಿಕೊಂಡ ಸ್ಥಳೀಯ ನ್ಯಾಯಾಲಯ, ಜಾಮೀನು ನೀಡಲು ನಿರಾಕರಿಸಿ ನ್ಯಾಯಾಂಗ ಬಂಧನ ಮುಂದುವರೆಸುವಂತೆ ಅದೇಶ ನೀಡಿದೆ.
ಎಸ್ ಆರ್ ಎಸ್ ಆರ್ ಹೋಲ್ಡಿಂಗ್ ನ ಪ್ರಧಾನ ವ್ಯವಸ್ಥಾಪಕ ಗೋಪಾಲ ಕೃಷ್ಣ ರಾಜು ಅವರ ಅರ್ಜಿ ವಿಚಾರಣೆಯನ್ನು ಜ. 29 ಕ್ಕೆ ಮುಂದೂಡಲಾಗಿದೆ.ರಾಜು ಹಾಗೂ ಸಹವರ್ತಿಗಳ ನ್ಯಾಯಾಂಗ ಬಂಧನವನ್ನು ಜ.31 ರವರೆಗೂ ವಿಸ್ತರಿಸಲಾಗಿದೆ ಎಂದು 6 ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮಾಜಿಸ್ಟ್ರೇಟ್ ಅವರು ಆದೇಶ ನೀಡಿದ್ದಾರೆ. ಜಿ.ಕೆ .ರಾಜು ಅವರು ರಾಮಲಿಂಗ ರಾಜು ಅವರ ಸಹವರ್ತಿಯಾಗಿದ್ದು, ಎಸ್ ಆರ್ ಎಸ್ ಆರ್ ಹೋಲ್ಡಿಂಗ್ ಗೆ ಒತ್ತಾಸೆಯಾಗಿ ರಾಜು ಅವರ ಕುಟುಂಬ ಕಾರ್ಯ ನಿರ್ವಹಿಸುತ್ತಿತ್ತು.
(ದಟ್ಸ್ ಕನ್ನಡವಾರ್ತೆ)
ಸತ್ಯಂ ರಾಜು ಜಾಮೀನು ವಿಚಾರಣೆ ಮುಂದಕ್ಕೆ












Click it and Unblock the Notifications