ಬಿಬಿಎಂಪಿ ಚುನಾವಣೆ ಮತ್ತೆ ಮುಂದೂಡಿಕೆ?
ಬೆಂಗಳೂರು, ಜ. 23 : ರಾಜ್ಯ ಹೈಕೋರ್ಟ್ ನಿಗದಿಪಡಿಸಿರುವ ಗಡುವಿನೊಳಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ನಡೆಸಲು ಸಿದ್ದವಿಲ್ಲದ ಸರ್ಕಾರ, ಚುನಾವಣೆ ಮುಂದೂಡಲು ಡಾ ಕಸ್ತೂರಿ ರಂಗನ್ ವರದಿ ಅನುಷ್ಠಾನದ ಅಸ್ತ್ರ ಬಳಸಲು ತಂತ್ರ ರೂಪಿಸಿದೆ.
ಬಿಬಿಎಂಪಿಗೆ ಚುನಾವಣೆ ನಡೆಸುವುದು ಎರಡು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಆದರೂ, ಸದ್ಯ ಚುನಾವಣೆ ನಡೆಸಲು ಮನಸ್ಸಿಲ್ಲದ ಬಿಜೆಪಿ ಸರ್ಕಾರ, ಲೋಕಸಭೆ ಚುನಾವಣೆವರೆಗೂ ಬಿಬಿಎಂಪಿ ಚುನಾವಣೆಯನ್ನು ಮುಂದಕ್ಕೆ ಹಾಕಲು ಪ್ರಯತ್ನ ನಡೆಸಿದೆ. ಬಿಬಿಎಂಪಿಗೆ ಮಾರ್ಚ್ 10ರೊಳಗೆ ಚುನಾವಣೆ ನಡೆಸಬೇಕೆಂದು ಹೈಕೋರ್ಟ್ ಸರ್ಕಾರಕ್ಕೆ 2 ನೇ ಬಾರಿಗೆ ಗಡುವು ನೀಡಿದೆ. ಈಗ ಅದನ್ನೂ ಉಲ್ಲಂಘಿಸಲು ಸರ್ಕಾರ ಮುಂದಾಗಿದೆ. ಚುನಾವಣೆ ಮುಂದಕ್ಕೆ ಹಾಕಲು ಸೂಕ್ತ ಕಾರಣಗಳ ಹುಡುಕಾಟ ನಡೆಸಿದೆ.
ಇದರ ಜವಾಬ್ದಾರಿಯನ್ನು ಸಚಿವರಾದ ಅಶೋಕ್ ಹಾಗೂ ಕಟ್ಟಾ ಸುಬ್ರಮಣ್ಯ ನಾಯ್ಡು ಅವರಿಗೆ ವಹಿಸಲಾಗಿದೆ. ಈ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಅವರು ಸಮಾಲೋಚನೆ ನಡೆಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications