ಎನ್ ಚಂದ್ರಶೇಖರನ್ ಟಿಸಿಎಸ್ ನೂತನ ಸಿಇಓ

ಕಂಪನಿಯ ನಿವೃತ್ತಿ ನಿಯಮದ ಪ್ರಕಾರ 65 ವರ್ಷದ ರಾಮದೊರೈ ಅವರು ಅಧಿಕಾರವನ್ನು ತ್ಯಜಿಸಲಿದ್ದಾರೆ. ರಾಮದೊರೈ ಅವರು ನಿವೃತ್ತರಾದರೂ ಕಂಪನಿಯ ಉಪಾಧ್ಯಕ್ಷರಾಗಿ ಕಾರ್ಯಕಾರೇತರ ನಿರ್ದೇಶಕ ಸ್ಥಾನದಲ್ಲಿ ತಮ್ಮ ಸೇವೆಯನ್ನು ಮುಂದಿನ 10 ವರ್ಷಗಳ ಕಾಲ ಟಿಸಿಎಸ್ ಗೆ ನೀಡಲಿದ್ದಾರೆ. ಕಾರ್ಯಕಾರೇತರ ನಿರ್ದೇಶಕರ ನಿವೃತ್ತಿ ವಯಸ್ಸನ್ನು ಟಾಟಾ ಗ್ರೂಪ್ 70ರಿಂದ 75 ವರ್ಷದವರೆಗೆ ಏರಿಸಿದೆ.
ಹದಿನಾರು ತಿಂಗಳುಗಳ ಹಿಂದೆ ಚಂದ್ರಶೇಖರನ್ ಅವರನ್ನು ಟಾಟಾ ಗ್ರೂಪ್ ಸಿಇಓ ಆಗಿ ನೇಮಿಸಿತ್ತು ಮತ್ತು ಅವರನ್ನು ಕಾರ್ಯಕಾರಿ ನಿರ್ದೇಶಕ ಹುದ್ದೆಗೆ ಭಡ್ತಿ ನೀಡಲಾಗಿತ್ತು. ಚಂದ್ರಶೇಖರನ್ ಮತ್ತು ರಾಮದೊರೈ ಅವರ ವೃತ್ತಿ ಒಂದೇ ರೀತಿಯಲ್ಲಿ ರೂಪುಗೊಂಡಿದೆ. ಇಬ್ಬರೂ ಸಾಫ್ಟ್ ವೇರ್ ಇಂಜಿನಿಯರಾಗಿ ಟಿಸಿಎಸ್ ನಲ್ಲಿ ವೃತ್ತಿ ಆರಂಭಿಸಿದ್ದರು. ಮಾಜಿ ವಿಪ್ರೋ ಅಧ್ಯಕ್ಷ ವಿವೇಕ್ ಪಾಲ್ ಅವರು ಟಿಸಿಎಸ್ ಸೇರಬಹುದೆಂಬ ಸುದ್ದಿಯೂ ಹಬ್ಬಿದೆ. ಆದರೆ ಕಂಪನಿಯ ಮೂಲಗಳು ಈ ಸುದ್ದಿಯನ್ನು ಅಲ್ಲಗಳೆದಿವೆ.
ಟಿಸಿಎಸ್ ಅಲ್ಲದೆ ಟಾಟಾ ಗ್ರೂಪ್ ನ ಇನ್ನೆರಡು ಕಂಪನಿಗಳು ಮೇಲುಸ್ತರದಲ್ಲಿ ಬದಲಾವಣೆ ಕಾಣುತ್ತಿದೆ. ರತನ್ ಟಾಟಾ ಅವರ ಮೆಚ್ಚಿನ ಕಂಪನಿ ಟಾಟಾ ಮೋಟರ್ಸ್ ನ ರವಿ ಕಾಂತ್ ಅವರು ಜೂನ್ ನಲ್ಲಿ ನಿವೃತ್ತರಾಗುತ್ತಿದ್ದಾರೆ. ಟಾಟಾ ಮೋಟರ್ಸ್ 2000ರಲ್ಲಿ 500 ಕೋಟಿ ರು.ಗಳ ಭಾರೀ ನಷ್ಟ ಅನುಭವಿಸಿ ಸಂಕಷ್ಟ ಸ್ಥಿತಿಯಲ್ಲಿದ್ದಾಗ ರವಿ ಕಾಂತ್ ಕಂಪನಿಯನ್ನು ಸೇರಿದ್ದರು. ವಾಣಿಜ್ಯ ವಾಹನ ಘಟಕದ ಮುಖ್ಯಸ್ಥರಾಗಿರುವ ಪಿಎಮ್ ತೆಲಂಗ್ ಅವರು ರವಿ ಕಾಂತ್ ಅವರ ಸ್ಥಾನವನ್ನು ಅಲಂಕರಿಸುವ ಸಾಧ್ಯತೆಗಳಿವೆ. ಟಾಟಾ ಸ್ಟೀಲ್ ನ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ಬಿ ಮುತ್ತುರಾಮನ್ ಅವರು ಕೂಡ ಕೆಲ ತಿಂಗಳಲ್ಲಿ ಅಧಿಕಾರವನ್ನು ತ್ಯಜಿಸಲಿದ್ದಾರೆ.
(ಏಜೆನ್ಸೀಸ್)
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications