ಎನ್ ಚಂದ್ರಶೇಖರನ್ ಟಿಸಿಎಸ್ ನೂತನ ಸಿಇಓ

ಕಂಪನಿಯ ನಿವೃತ್ತಿ ನಿಯಮದ ಪ್ರಕಾರ 65 ವರ್ಷದ ರಾಮದೊರೈ ಅವರು ಅಧಿಕಾರವನ್ನು ತ್ಯಜಿಸಲಿದ್ದಾರೆ. ರಾಮದೊರೈ ಅವರು ನಿವೃತ್ತರಾದರೂ ಕಂಪನಿಯ ಉಪಾಧ್ಯಕ್ಷರಾಗಿ ಕಾರ್ಯಕಾರೇತರ ನಿರ್ದೇಶಕ ಸ್ಥಾನದಲ್ಲಿ ತಮ್ಮ ಸೇವೆಯನ್ನು ಮುಂದಿನ 10 ವರ್ಷಗಳ ಕಾಲ ಟಿಸಿಎಸ್ ಗೆ ನೀಡಲಿದ್ದಾರೆ. ಕಾರ್ಯಕಾರೇತರ ನಿರ್ದೇಶಕರ ನಿವೃತ್ತಿ ವಯಸ್ಸನ್ನು ಟಾಟಾ ಗ್ರೂಪ್ 70ರಿಂದ 75 ವರ್ಷದವರೆಗೆ ಏರಿಸಿದೆ.
ಹದಿನಾರು ತಿಂಗಳುಗಳ ಹಿಂದೆ ಚಂದ್ರಶೇಖರನ್ ಅವರನ್ನು ಟಾಟಾ ಗ್ರೂಪ್ ಸಿಇಓ ಆಗಿ ನೇಮಿಸಿತ್ತು ಮತ್ತು ಅವರನ್ನು ಕಾರ್ಯಕಾರಿ ನಿರ್ದೇಶಕ ಹುದ್ದೆಗೆ ಭಡ್ತಿ ನೀಡಲಾಗಿತ್ತು. ಚಂದ್ರಶೇಖರನ್ ಮತ್ತು ರಾಮದೊರೈ ಅವರ ವೃತ್ತಿ ಒಂದೇ ರೀತಿಯಲ್ಲಿ ರೂಪುಗೊಂಡಿದೆ. ಇಬ್ಬರೂ ಸಾಫ್ಟ್ ವೇರ್ ಇಂಜಿನಿಯರಾಗಿ ಟಿಸಿಎಸ್ ನಲ್ಲಿ ವೃತ್ತಿ ಆರಂಭಿಸಿದ್ದರು. ಮಾಜಿ ವಿಪ್ರೋ ಅಧ್ಯಕ್ಷ ವಿವೇಕ್ ಪಾಲ್ ಅವರು ಟಿಸಿಎಸ್ ಸೇರಬಹುದೆಂಬ ಸುದ್ದಿಯೂ ಹಬ್ಬಿದೆ. ಆದರೆ ಕಂಪನಿಯ ಮೂಲಗಳು ಈ ಸುದ್ದಿಯನ್ನು ಅಲ್ಲಗಳೆದಿವೆ.
ಟಿಸಿಎಸ್ ಅಲ್ಲದೆ ಟಾಟಾ ಗ್ರೂಪ್ ನ ಇನ್ನೆರಡು ಕಂಪನಿಗಳು ಮೇಲುಸ್ತರದಲ್ಲಿ ಬದಲಾವಣೆ ಕಾಣುತ್ತಿದೆ. ರತನ್ ಟಾಟಾ ಅವರ ಮೆಚ್ಚಿನ ಕಂಪನಿ ಟಾಟಾ ಮೋಟರ್ಸ್ ನ ರವಿ ಕಾಂತ್ ಅವರು ಜೂನ್ ನಲ್ಲಿ ನಿವೃತ್ತರಾಗುತ್ತಿದ್ದಾರೆ. ಟಾಟಾ ಮೋಟರ್ಸ್ 2000ರಲ್ಲಿ 500 ಕೋಟಿ ರು.ಗಳ ಭಾರೀ ನಷ್ಟ ಅನುಭವಿಸಿ ಸಂಕಷ್ಟ ಸ್ಥಿತಿಯಲ್ಲಿದ್ದಾಗ ರವಿ ಕಾಂತ್ ಕಂಪನಿಯನ್ನು ಸೇರಿದ್ದರು. ವಾಣಿಜ್ಯ ವಾಹನ ಘಟಕದ ಮುಖ್ಯಸ್ಥರಾಗಿರುವ ಪಿಎಮ್ ತೆಲಂಗ್ ಅವರು ರವಿ ಕಾಂತ್ ಅವರ ಸ್ಥಾನವನ್ನು ಅಲಂಕರಿಸುವ ಸಾಧ್ಯತೆಗಳಿವೆ. ಟಾಟಾ ಸ್ಟೀಲ್ ನ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ಬಿ ಮುತ್ತುರಾಮನ್ ಅವರು ಕೂಡ ಕೆಲ ತಿಂಗಳಲ್ಲಿ ಅಧಿಕಾರವನ್ನು ತ್ಯಜಿಸಲಿದ್ದಾರೆ.
(ಏಜೆನ್ಸೀಸ್)
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ -
ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು: ಟಿ.ಎ.ನಾರಾಯಣಗೌಡ ಹೇಳಿದ್ದೇನು -
ವೆಜ್ ಬಿರಿಯಾನಿ 50, ಮಟನ್ ಬಿರಿಯಾನಿಗೆ 180 ರೂಪಾಯಿ ರೇಟ್ ಫಿಕ್ಸ್... Tamil Nadu Election -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಹೋದರಿ ಜವರಮ್ಮ ನಿಧನ -
ಆಕ್ಸಿಜನ್ ಸಿಲಿಂಡರ್ ನೆರವಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿ: ಸಲಾಂ ಎಂದ ದೇಶದ ಜನತೆ












Click it and Unblock the Notifications