ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನೂತನ ಡಿಜಿಪಿಯಾಗಿ ಅಜಯ್ ಕುಮಾರ್ ಸಿಂಗ್
ಹಾಲಿ ಡಿಜಿಪಿ ಶ್ರೀಕುಮಾರ್ ಅವರ ಅಧಿಕಾರ ಅವಧಿ ಜ.31ಕ್ಕೆ ಕೊನೆಗೊಳ್ಳಲಿದೆ. ಸೇವಾ ಜ್ಯೇಷ್ಠತೆ ಆಧಾರದ ಮೇಲೆ ಅಜಯ್ ಕುಮಾರ್ ಸಿಂಗ್ ಅವರನ್ನು ನೂತನ ಡಿಜಿಪಿಯಾಗಿ ನೇಮಿಸಲಾಗುತ್ತಿದೆ. ಸಿಒಡಿ ಡಿಜಿಪಿಯಾಗಿ ಅಧಿಕಾರ ಸ್ವೀಕರಿಸಿರುವ ಸಿಂಗ ಅವರು ನಿವೃತ್ತಿಯಾಗಲು ಇನ್ನ್ನೂ 2 ವರ್ಷಗಳ ಸಮಯಾವಕಾಶವಿದೆ. 2011ರ ಜನವರಿಗೆ ಅವರು ನಿವೃತ್ತರಾಗಲಿದ್ದಾರೆ.
ಅಜಯ್ ಕುಮಾರ್ ಸಿಂಗ ಅವರು ಸ್ವತಃ ಸಾಹಿತಿಯಾಗಿದ್ದು , ದ.ರಾ.ಬೇಂದ್ರೆ, ಗೋಪಾಲ ಕೃಷ್ಣ ಅಡಿಗ, ಡಾ.ಯು.ಆರ್.ಅನಂತಮೂರ್ತಿ ಅವರ ಕವನಗಳನ್ನು ಹಿಂದಿಗೆ ಅನುವಾದಿಸಿದ್ದಾರೆ. ವಿವಿಧ ಪತ್ರಿಕೆಗಳಲ್ಲಿ ಅವರ ಕವನಗಳು ಪ್ರಕಗೊಂಡಿವೆ. '12ನೇ ಶತಮಾನದ ಕವಿ ಅಲ್ಲಮ ಪ್ರಭು ಮತ್ತು 16ನೇ ಶತಮಾನದ ಕವಿ ಕಬೀರ್-ಒಂದು ಅಧ್ಯಯನ' ಮಹಾಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯ ಪಿಎಚ್ ಡಿ ಪದವಿ ನೀಡಿದೆ. ಬೆಂಗಳೂರು ಸಮಿತಿಯ 'ವಚನಶ್ರೀ' ಪದವಿ ಸೇರಿದಂತೆ ಅತ್ಯುತ್ತಮ ಸೇವೆಗೆ ಎರಡು ಬಾರಿ ರಾಷ್ಟ್ರಪತಿ ಪದಕ ಗಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Saturday, January 3, 2009, 10:57 [IST]